Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

06/06/2025 7:13 AM

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಾಗರ DFO’ ಬಹಿರಂಗ ಕ್ಷಮೆಯಾಚನೆಗೆ ‘ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೂಡು’ ಆಗ್ರಹ
KARNATAKA

‘ಸಾಗರ DFO’ ಬಹಿರಂಗ ಕ್ಷಮೆಯಾಚನೆಗೆ ‘ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೂಡು’ ಆಗ್ರಹ

By kannadanewsnow0919/11/2024 7:26 PM

ಶಿವಮೊಗ್ಗ: ಸಾಗರದ ಡಿಎಫ್ಓ ಮೋಹನ್ ವಿನಾಕಾರಣ ನಮ್ಮ ಹೆಸರನ್ನು ಹೇಳುತ್ತಿದ್ದಾರೆ. ಈ ಮೂಲಕ ಒಬ್ಬರನ್ನೊಬ್ಬರನ್ನು ಎತ್ತಿ ಕಟ್ಟುವಂತ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಒಂದು ವಾರದ ಒಳಗಾಗಿ ಸ್ಪಷ್ಟ ಪಡಿಸಿ, ಬಹಿರಂಗವಾಗಿ ಕ್ಷಮೆ ಕೇಳದೇ ಹೋದರೇ, ಎಸಿ, ಡಿಸಿ ಕಚೇರಿಯ ಮುಂದೆ ಪಕ್ಷಾತೀತವಾಗಿ ಪ್ರತಿಭಟನೆ ಮಾಡಲಾಗುತ್ತದೆ. ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಅಂತ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೂಡು ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಅಧಿಕಾರಿಗಳನ್ನು ಬಿಟ್ಟು ಕಿರುಕುಳ, ಅನೇಕ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಆದರೇ ಬಿಜೆಪಿಯವರು ಇದಕ್ಕೆಲ್ಲ ಬಗ್ಗಲಿಲ್ಲ. ಈಗ ಹೊಸ ರೀತಿಯಲ್ಲಿ ಕಿರುಕುಳ ಶುರು ಮಾಡಿದ್ದಾರೆ. ಆನಂದಪುರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಸಾಗುವಾನಿ ಮರಗಳನ್ನು ಕಡಿದುಕೊಂಡು ಹೋಗಿದ್ದಾರೆ. ಗಾಡಿಯನ್ನು ಸೀಜ್ ಮಾಡಲಾಗಿದೆ. ಊರಿನ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಆರ್ ಎಫ್ ಓ, ಡಿಎಫ್ಓ ಬಳಿಯಲ್ಲಿ ಹೋಗಿ ಮಾತುಕತೆ ನಡೆಸಿದ್ದಾರೆ. ಶಾಸಕರಿಂದಲೂ ಕರೆ ಮಾಡಿಸಿ ಈ ಬಗ್ಗೆ ಹೇಳಿದ್ದಾರೆ ಎಂದರು.

ನವೆಂಬರ್ 7ನೇ ತಾರೀಕಿನಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 8ನೇ ತಾರೀಕಿನಂದು ಎಫ್ಐಆರ್ ಮಾಡಿದ್ದಾರೆ. ಎಂಟು ದಿನಗಳ ಕಾಲ ಇವತ್ತು ಬಿಡ್ತೀನಿ, ಇವತ್ತು ಬಿಡ್ತೀನಿ ಅಂತ ಹೇಳಿ ಮೊನ್ನೆ ಬಿಟ್ಟು ಕಳಿಸಿದ್ದಾರೆ. ಆದರೇ ಮೊನ್ನೆ ಬುಧವಾರ ಹೋಗಿ ಗಾಡಿಯನ್ನು ಯಾವಾಗ ಬಿಡ್ತೀರಿ ಹೇಳಿ ಅಂದಾಗ ಡಿಎಫ್ಓ ಮೋಹನ್ ಎನ್ನುವಂತ ಐಎಫ್ಎಸ್ ಅಧಿಕಾರಿ ರತ್ನಾಕರ ಹೊನಗೂಡು ಮತ್ತು ಬಿಜೆಪಿಯವರು ಬಹಳ ಒತ್ತಡ ಹಾಕುತ್ತಾರೆ. ನೀವು ಗಾಡಿ ಬಿಟ್ಟರೇ ಪ್ರತಿಭಟನೆ ಮಾಡುವುದಾಗಿ ಹತ್ತರಿಂದ ಹನ್ನೆಡರು ಜನರಿದ್ದಂತವರಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ಡಿಎಫ್ಓ ಬಳಿಗೆ ತೆರಳಿದ್ದಂತ ಜನರು ಅಲ್ಲೇ ಅವರು ಆತರದ ವ್ಯಕ್ತಿಯಲ್ಲ. ನಮಗೆ ಗೊತ್ತಿರುವವರು ಎಂದಿದ್ದಾರೆ. ಹಾಗಾದ್ರೆ ಒಬ್ಬ ಐಎಎಫ್ ಅಧಿಕಾರಿ ಹೇಳಿದ್ದೇಕೆ? ಇದನ್ನು ಹೇಳಿಸಿದ್ದು ಯಾರು ಎನ್ನುವುದನ್ನು ಬಹಿರಂಗ ಪಡಿಸಬೇಕು. ಯಾರೋ ಒಬ್ಬ ಲೀಡರ್ ಹೆಸರು ಹೇಳಿ, ಅಶಾಂತಿ ಸೃಷ್ಠಿಸುವಂತ ಕೆಲಸ ಮಾಡಬಾರದು. ಐಎಫ್ಎಸ್ ಅಧಿಕಾರಿ ಅಂದ್ರೆ ಅವರಿಗೇ ಆದಂತ ಘಟನೆ ಗೌರವವಿರುತ್ತದೆ ಎಂಬುದಾಗಿ ಕಿಡಿಕಾರಿದರು.

ನನಗೂ ಅವರಿಗೂ ಪರಿಚಯನೇ ಇಲ್ಲ. ಈಗ ಯಾವುದೋ ಒಂದು ಮೂರು ತಿಂಗಳ ಹಿಂದೆ ಬೆಳ್ಳಂದೂರಲ್ಲಿ ಅರಣ್ಯ ಇಲಾಖೆಯವರು ನೋಟಿಸ್ ಕೊಟ್ಟಿದ್ದಾರೆ ಎಂದಾಗ ಮಂಡಗಳಲೆ ಹುಚ್ಚಪ್ಪ ಮತ್ತು ನಾವು ಕರೆದುಕೊಂಡು ಹೋಗಿ ಅವರ ಹತ್ತಿರ ಅದರ ಬಗ್ಗೆ ವಿಷಯ ಚರ್ಚೆ ಮಾಡಿ ಬಂದಿದ್ದೆವು. ಆಮೇಲೆ ಇವತ್ತಿನವರೆಗೂ ಅವರ ಆಫೀಸಿಗೆ ಹೋಗಿಲ್ಲ. ಅವರ ಪೋನ್ ನಂಬರ್ ಕೂಡ ನನ್ನ ಹತ್ತಿರ ಇಲ್ಲ ಎಂಬುದಾಗಿ ತಿಳಿಸಿದರು.

ಏನೋ ಒಂದಷ್ಟು ಬಡವರಿಗೆ ಸಹಕಾರ ಮಾಡಿ ಅಂತ ಹೇಳಿದ್ದೇನೆ. ಅದರ ಹೊರತಾಗಿ ತೊಂದರೆ ಕೊಡಿ ಅಂತ ಹೇಳಿಲ್ಲ. ನನ್ನ 20 ವರ್ಷದ ರಾಜಕೀಯ ಜೀನವದಲ್ಲಿ ಯಾವತ್ತೂ ಆ ಕೆಲಸ ಮಾಡಿಲ್ಲ. ಡಿಎಫ್ಓ ಅವರು ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ಒಂದು ವಾರ ಸಮಯ ನೀಡಲಾಗುತ್ತದೆ. ಅವರು ಯಾಕೆ ಈ ರೀತಿ ಹೇಳಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸದೇ ಹೋದರೇ ಎಸಿ, ಡಿಸಿ ಕಚೇರಿಯ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಐಎಸ್ಎಫ್ ಮೇಲಧಿಕಾರಿಗಳು ಯಾರು ಬರುತ್ತಾರೋ ಅವರಿಗೆ ಇವರ ವಿರುದ್ಧ ದೂರು ನೀಡಲಾಗುತ್ತದೆ. ಈ ಸಂಬಂಧ ಪತ್ರ ಬರೆಯಲಾಗುತ್ತದೆ ಎಂದರು.

ಕೇವಲ ನನ್ನೊಬ್ಬನ ಹೆಸರು ಮಾತ್ರ ಹೇಳುತ್ತಿಲ್ಲ. ಇನ್ನೂ ಅನೇಕರ ಹೆಸರು ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆಯ ಮೂಲಕ ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತದೆ. ಇದಕ್ಕೆ ನಾವು ಮಣಿಯುವುದಿಲ್ಲ ಎಂದು ಗುಡುಗಿದರು.

ಈ ವೇಳೆ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ನಟರಾಜ್ ಗೇರುಬಿಸ್, ರವಿ ಬಸರಾಣಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

BREAKING : ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕ್ರಿಕೇಟರ್ ಸೂರ್ಯ ಕುಮಾರ ಯಾದವ್ ಭೇಟಿ, ಪೂಜೆ ಸಲ್ಲಿಕೆ – Kannada News | India News | Breaking news | Live news | Kannada | Kannada News | Karnataka News | Karnataka News

BIG NEWS : ಯಾವುದೇ ಕಾರಣಕ್ಕೂ ‘BPL’ ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

06/06/2025 7:13 AM1 Min Read

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM1 Min Read

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM1 Min Read
Recent News

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

06/06/2025 7:13 AM

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM

ಭಾರತದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳನ್ನು ರದ್ದುಗೊಳಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಪಾಕಿಸ್ತಾನ

06/06/2025 7:00 AM
State News
KARNATAKA

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

By kannadanewsnow5706/06/2025 7:13 AM KARNATAKA 1 Min Read

ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಅನರ್ಹರರ ಪತ್ತೆಗೆ ರಾಜ್ಯ ಸರ್ಕಾರವು ಮಹತ್ವದ…

BIG NEWS : ರಾಜ್ಯ ಸರ್ಕಾರದಿಂದಲೇ `108 ಆಂಬುಲೆನ್ಸ್ ಕಂಟ್ರೋಲ್‌’ಗೆ ಸಚಿವ ಸಂಪುಟ ಅಸ್ತು.!

06/06/2025 7:06 AM

BREAKING : ಬೆಂಗಳೂರು ‘ಚಿನ್ನಸ್ವಾಮಿ ಸ್ಟೇಡಿಯಂ’ ಬಳಿ ಕಾಲ್ತುಳಿತ ದುರಂತ ಕೇಸ್ : `RCB ಮ್ಯಾನೇಜ್ಮೆಂಟ್’ ನ ಪ್ರತಿನಿಧಿ ಬಂಧನಕ್ಕೆ ಸಿಎಂ ಆದೇಶ.!

06/06/2025 7:01 AM

BIG NEWS : ರಾಜ್ಯ ಆರೋಗ್ಯ ಇಲಾಖೆಯ ನೌಕರರಿಗೆ ಇನ್ಮುಂದೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ.!

06/06/2025 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.