Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಸವಾರರಿಗೆ ಗುಡ್ ನ್ಯೂಸ್ : ಆಗಸ್ಟ್ 15 ರಿಂದ ವಾರ್ಷಿಕ`ಫಾಸ್ಟ್ ಟ್ಯಾಗ್’ ಪಾಸ್ ಲಭ್ಯ | FASTag

11/08/2025 8:27 AM

ಗಮನಿಸಿ : ಔಷಧಿ ಪ್ಯಾಕೆಟ್ ಮೇಲೆ `ಕೆಂಪು ಗೆರೆ’ ಏಕೆ ಇರುತ್ತೆ ಗೊತ್ತಾ? ಏನಿದರ ಅರ್ಥ ತಿಳಿಯಿರಿ.!.

11/08/2025 8:15 AM

BREAKING : ಧರ್ಮಸ್ಥಳ ಕೇಸ್ : `ವಸಂತ್ ಗಿಳಿಯಾರ್’ ವಿರುದ್ಧ `FIR’ ದಾಖಲು.!

11/08/2025 8:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಟಿ ಕೋಳಿ ಸಾರು, ರಾಗಿ ಮುದ್ದೆ ‘ಉಣ್ಣುವ ಸ್ಪರ್ಧೆ’ಯಲ್ಲಿ ಭಾಗಿಯಾಗಿ, ಟಗರು, ಕುರಿ ಪಟ್ಲಿ, ಟಿವಿ ‘ಬಹುಮಾನ ಗೆಲ್ಲಿ’
KARNATAKA

ನಾಟಿ ಕೋಳಿ ಸಾರು, ರಾಗಿ ಮುದ್ದೆ ‘ಉಣ್ಣುವ ಸ್ಪರ್ಧೆ’ಯಲ್ಲಿ ಭಾಗಿಯಾಗಿ, ಟಗರು, ಕುರಿ ಪಟ್ಲಿ, ಟಿವಿ ‘ಬಹುಮಾನ ಗೆಲ್ಲಿ’

By kannadanewsnow0909/11/2024 4:38 PM

ಬೆಂಗಳೂರು: ಊಟ ಪ್ರಿಯರಿಗೆ ಸುವರ್ಣಾವಕಾಶ ಎನ್ನುವಂತೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ತಿನ್ನುವಂತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಟಗರು, ಕುರಿ ಪಟ್ಲಿ, ಕೋಳಿ, ಟಿವಿ ಸೇರಿದಂತೆ ಇತರೆ ಬಹುಮಾನ ಕೂಡ ಸಿಗಲಿದೆ. 

ಈ ಬಗ್ಗೆ ಆಯೋಜಕರು, ವಕೀಲರಾದಂತ ಅನಿಲ್ ರೆಡ್ಡಿ ಮಾಹಿತಿಯನ್ನು ಹಂಚಿಕೊಂಡಿದ್ದು, ಕರ್ನಾಟಕ ಸುವರ್ಣ ಸಂಭ್ರಮ -50ರ ಪ್ರಯುಕ್ತ ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

125 ಜನರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ

ರಾಜ್ಯಾಧ್ಯಂತ ಸ್ಪರ್ಧಿಗಳು ಇದರಲ್ಲಿ ಭಾಗಿಯಾಗಬಹುದಾಗಿದೆ. ಈ ಸ್ಪರ್ಧೆಯಲ್ಲಿ 125 ಸ್ಪರ್ಧಾಳುಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಮೊದಲು ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶವಿದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗಿಯಾಗಬಹುದಾಗಿದೆ. ಸ್ಪರ್ಧಾರ್ಥಿಗಳಿಗೆ 45 ನಿಮಿಷಗಳ ಕಾಲಮಿತಿಯನ್ನು ರಾಗಿಮುದ್ದೆ, ನಾಟಿ ಕೋಳಿ ಸಾರು ಉಣ್ಣಲು ನಿಗದಿ ಪಡಿಸಲಾಗಿದೆ ಎಂದಿದ್ದಾರೆ.

ಇನ್ನೂ ಮಧ್ಯಪಾನ ಮಾಡಿದವರಿಗೆ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶವಿಲ್ಲ. ವ್ಯವಸ್ಥಾಪಕರ ತೀರ್ಮಾನವೇ ಅಂತಿಮ. ನಿಮ್ಮ ಆರೋಗ್ಯಕ್ಕೆ ನೀವೇ ಸಂಪೂರ್ಣ ಜವಾಬ್ಧಾರರು ಎಂಬುದಾಗಿ ನಿಬಂಧನೆಗಳಲ್ಲಿ ತಿಳಿಸಲಾಗಿದೆ.

ಏನೆಲ್ಲ ಬಹುಮಾನ ಕೊಡ್ತಾರೆ ಗೊತ್ತಾ?

ಪುರುಷರ ವಿಭಾಗದಲ್ಲಿ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ ಟಗರನ್ನು ನೀಡಲಾಗುತ್ತದೆ. ದ್ವಿತೀಯ ಬಹುಮಾನವಾಗಿ ಕುರಿ ಪಟ್ಲಿ, ತೃತೀಯ ಬಹುಮಾನವಾಗಿ 2 ನಾಟಿ ಕೋಳಿ ನೀಡಲಾಗುವುದು ಎಂದು ಆಯೋಜಕರಾದಂತ ಅನಿಲ್ ರೆಡ್ಡಿ ತಿಳಿಸಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಗೆದ್ದಂತವರಿಗೆ ಮೊದಲ ಬಹುಮಾನವಾಗಿ 32 ಇಂಚಿನ ಟಿವಿ, ದ್ವಿತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್, ತೃತೀಯ ಬಹುಮಾನವಾಗಿ ಕಿಚನ್ ಸೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.

ನಾಳೆ ಈ ಸ್ಥಳದಲ್ಲಿ ಸ್ಪರ್ಧೆ ಆಯೋಜನೆ

ದಿನಾಂಕ 10-11-2024ರ ನಾಳೆ ಮಧ್ಯಾಹ್ನ 12 ಗಂಟೆಯಿಂದ 12.45ರ ಸಮಯದಲ್ಲಿ ಸ್ಪರ್ಧೆ ನಡೆಯಲಿದೆ. ಬೆಂಗಳೂರಿನ 24ನೇ ಮುಖ್ಯರಸ್ತೆ, ಪರಂಗಿಪಾಳ್ಯ ಹತ್ತಿರ, ಹೆಚ್ ಎಸ್ ಆರ್ ಬಡವಾಣೆ ಸೆಕ್ಟರ್-1ರಲ್ಲಿ ಆಯೋಜಿಸಲಾಗಿದೆ.

ಸಚಿವ ರಾಮಲಿಂಗಾರೆಡ್ಡಿ ಸೇರಿ ಇತರೆ ಗಣ್ಯರು ಭಾಗಿ

ನಾಳೆ ನಡೆಯುವಂತ ರಾಗಿಮುದ್ದೆ, ನಾಟಿ ಕೋಳಿ ಸಾರು ಉಣ್ಣುವ ಸ್ಪರ್ಧೆಯಲ್ಲಿ ವಿಜೇತರಾದಂತವರಿಗೆ ಬಹುಮಾನವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿತರಿಸಲಿದ್ದಾರೆ. ಮಾಜಿ ಸಂಸದ ವಿಎಸ್ ಉಗ್ರಪ್ಪ, ಕುಪೇಂದ್ರ ರೆಡ್ಡಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮುಖಂಡ ವಾಸುದೇವ ರೆಡ್ಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಮಾಪತಿ ಶ್ರೀನಿವಾಸ ಗೌಡ, ಸ್ಯಾಂಡಲ್ ವುಡ್ ನಿರ್ಮಾಪಕ ಕೆ.ಮಂಜು ಕೂಡ ಭಾಗಿಯಾಗಲಿದ್ದಾರೆ ಅಂತ ಅನಿಲ್ ರೆಡ್ಡಿ ತಿಳಿಸಿದ್ದಾರೆ.

ನೋಂದಣಿ ಹೇಗೆ.?

ಆಸಕ್ತರು ಕಾರ್ಯಕ್ರಮದ ಆಯೋಜಕರಾದಂತ ಅನಿಲ್ ರೆಡ್ಡಿ – 9916506837 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗುವುದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಾಯಿಸಿಕೊಂಡ ಬಳಿಕ ನಾಳೆ ನಾಟಿ ಕೋಳಿ, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಗ್ಯಾರಂಟಿ ಬಗ್ಗೆ ಸುಳ್ಳು ಜಾಹೀರಾತು: ‘ಬಿಜೆಪಿ ನಾಯಕ’ರಿಗೆ ಈ ಆಫರ್ ಕೊಟ್ಟ ‘ಡಿಸಿಎಂ ಡಿ.ಕೆ ಶಿವಕುಮಾರ್’

BIG NEWS : ಪಾಕಿಸ್ತಾನದ ‘ರೈಲ್ವೇ ನಿಲ್ದಾಣ’ದ ಬಾಂಬ್ ಸ್ಪೋಟದಲ್ಲಿ 24 ಮಂದಿ ಸಾವು : ಇಲ್ಲಿದೆ ಭಯಾನಕ ವಿಡಿಯೋ !

Share. Facebook Twitter LinkedIn WhatsApp Email

Related Posts

ಗಮನಿಸಿ : ಔಷಧಿ ಪ್ಯಾಕೆಟ್ ಮೇಲೆ `ಕೆಂಪು ಗೆರೆ’ ಏಕೆ ಇರುತ್ತೆ ಗೊತ್ತಾ? ಏನಿದರ ಅರ್ಥ ತಿಳಿಯಿರಿ.!.

11/08/2025 8:15 AM2 Mins Read

BREAKING : ಧರ್ಮಸ್ಥಳ ಕೇಸ್ : `ವಸಂತ್ ಗಿಳಿಯಾರ್’ ವಿರುದ್ಧ `FIR’ ದಾಖಲು.!

11/08/2025 8:07 AM1 Min Read

BREAKING : ‘ಧರ್ಮಸ್ಥಳ ಗಲಾಟೆ ಕೇಸ್’ ಗೆ ಬಿಗ್ ಟ್ವಿಸ್ಟ್ : ಹಲ್ಲೆಗೊಳಗಾಗಿದ್ದ ಮೂವರು ‘ಯೂಟ್ಯೂಬರ್’ ಗಳ ವಿರುದ್ಧ ‘FIR’ ದಾಖಲು.!

11/08/2025 8:00 AM1 Min Read
Recent News

ವಾಹನ ಸವಾರರಿಗೆ ಗುಡ್ ನ್ಯೂಸ್ : ಆಗಸ್ಟ್ 15 ರಿಂದ ವಾರ್ಷಿಕ`ಫಾಸ್ಟ್ ಟ್ಯಾಗ್’ ಪಾಸ್ ಲಭ್ಯ | FASTag

11/08/2025 8:27 AM

ಗಮನಿಸಿ : ಔಷಧಿ ಪ್ಯಾಕೆಟ್ ಮೇಲೆ `ಕೆಂಪು ಗೆರೆ’ ಏಕೆ ಇರುತ್ತೆ ಗೊತ್ತಾ? ಏನಿದರ ಅರ್ಥ ತಿಳಿಯಿರಿ.!.

11/08/2025 8:15 AM

BREAKING : ಧರ್ಮಸ್ಥಳ ಕೇಸ್ : `ವಸಂತ್ ಗಿಳಿಯಾರ್’ ವಿರುದ್ಧ `FIR’ ದಾಖಲು.!

11/08/2025 8:07 AM

ಭಾರತ-ಅಮೇರಿಕಾ ವ್ಯಾಪಾರ ಮಾತುಕತೆ: ಶಶಿ ತರೂರ್ ನೇತೃತ್ವದ ಸಮಿತಿಗೆ ವಿವರಣೆ

11/08/2025 8:03 AM
State News
KARNATAKA

ಗಮನಿಸಿ : ಔಷಧಿ ಪ್ಯಾಕೆಟ್ ಮೇಲೆ `ಕೆಂಪು ಗೆರೆ’ ಏಕೆ ಇರುತ್ತೆ ಗೊತ್ತಾ? ಏನಿದರ ಅರ್ಥ ತಿಳಿಯಿರಿ.!.

By kannadanewsnow5711/08/2025 8:15 AM KARNATAKA 2 Mins Read

ಪ್ರತಿಯೊಬ್ಬರಿಗೂ ಕಾಯಿಲೆ ಬಂದಾಗ ಔಷಧಿಯ ಅಗತ್ಯವಿದೆ. ವೈದ್ಯರು ಕೂಡ ಅನೇಕ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಇಂತಹ ಮೆಡಿಕಲ್ ನಿಂದ ಅನೇಕ…

BREAKING : ಧರ್ಮಸ್ಥಳ ಕೇಸ್ : `ವಸಂತ್ ಗಿಳಿಯಾರ್’ ವಿರುದ್ಧ `FIR’ ದಾಖಲು.!

11/08/2025 8:07 AM

BREAKING : ‘ಧರ್ಮಸ್ಥಳ ಗಲಾಟೆ ಕೇಸ್’ ಗೆ ಬಿಗ್ ಟ್ವಿಸ್ಟ್ : ಹಲ್ಲೆಗೊಳಗಾಗಿದ್ದ ಮೂವರು ‘ಯೂಟ್ಯೂಬರ್’ ಗಳ ವಿರುದ್ಧ ‘FIR’ ದಾಖಲು.!

11/08/2025 8:00 AM
vidhana soudha

BIG NEWS : ರಾಜ್ಯದ ದೇವಾಲಯಗಳ `ಆಸ್ತಿ’ ಕಬಳಿಸಿದವರಿಗೆ ಬಿಗ್ ಶಾಕ್ : ಸರ್ಕಾರದಿಂದ ಬರೋಬ್ಬರಿ 4 ಸಾವಿರ ಎಕರೆ ಭೂಮಿ ಮರುಸ್ವಾಧೀನ.!

11/08/2025 7:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.