ಮೈಸೂರು: ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್ಪ್ರೆಸ್ ರೈಲು ಚೆನ್ನೈ ಸಮೀಪದ ಕವರೈಪೆಟ್ಟೈ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಆರು ಬೋಗಿಗಳು ಹಳಿ ತಪ್ಪಿದ್ದು, ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಲವರು ರೈಲಿನಲ್ಲಿ ಸಿಲುಕಿರುವುದಾಗಿ ತಿಳಿದು ಬಂದಿದೆ. ಈ ಬೆನ್ನಲ್ಲೈ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಕಲಗೊಂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ರೈಲು ಸಂಖ್ಯೆ 12578 (ಎಂವೈಎಸ್-ಡಿಬಿಜಿ) ಎಂಎಎಸ್ ವಿಭಾಗದ ಪೊನ್ನೇರಿ-ಕವರಪೆಟ್ಟೈ ನಿಲ್ದಾಣಗಳ ನಡುವೆ (ಎಸ್ ಪಿಇಗೆ 50 ಕಿ.ಮೀ ಮತ್ತು ಜಿಡಿಆರ್ ಗೆ 103 ಕಿ.ಮೀ) ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತುರ್ತು ನಿಯಂತ್ರಣದಿಂದ ಪಡೆದ ಮಾಹಿತಿ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.
ಈ ರೈಲು ಪರ್-ಜಿಡಿಆರ್ = ಬಿಜೆಡ್ಎ-ಡಬ್ಲ್ಯುಎಲ್-ಬಿಪಿಕ್ಯೂ ಮೂಲಕ ಚಲಿಸುತ್ತದೆ. ಎಂವೈಎಸ್ ಡೆಪ್ 10:30, ಜಿಡಿಆರ್ 22:30 ಆಗಿದೆ ಎಂದಿದ್ದಾರೆ.
ಮೈಸೂರಿನಲ್ಲಿ ಸಹಾಯವಾಣಿ ಸಂಖ್ಯೆ: 97311 43981ಗೆ ಕರೆ ಮಾಡಿ. ನಿಯಂತ್ರಣ ಸಂಖ್ಯೆ: 139ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೇ ಐ ಹೆಲ್ಪ್ ಯು ಡೆಸ್ಕ್ ಅನ್ನು ಸಹ ತೆರೆಯಲಾಗಿದೆ. ಘಟನೆ ಮತ್ತು ಸಾವುನೋವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.