ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ 220 ಕೆವಿ ಎಸ್ ಆರ್ ಎಸ್ ಹಿರಿಯೂರು ನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ:20.09.2024 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ (BESCOM) ಮಾಹಿತಿ ನೀಡಲಾಗಿದ್ದು, ದಿನಾಂಕ:-20.09.2024 ರಂದು 220 ಕೆವಿ ಎಸ್ ಆರ್ ಎಸ್ ಹಿರಿಯೂರು ನ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಸದರಿ ದಿನಾಂಕ ದಂದು ಬೆಳಿಗ್ಗೆ:10.00 ರಿಂದ ಸಂಜೆ :04.00 ರವರೆಗೆ ಐಮಂಗಲ & ಮಲ್ಲಪ್ಪನಹಳ್ಳಿ, ವಿ. ವಿಕೇಂದ್ರ ಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿಸಿರುತ್ತಾರೆ.
ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut )
ಚಿನ್ನಯ್ಯನಹಟ್ಟಿ ಹೊಸಹಟ್ಟಿ ಮಾಕರಹಳ್ಳಿ, ಬರದಕಟ್ಟೆ ಮಾಯಸಂದ್ರ ಕೆರೆ ಬೇರೇನಹಳ್ಳಿ, ಎ ಬಿ ಕೊಟ್ಟಿಗೆ ಶಿವಪುರ ಹುಚ್ಚಪ್ಪನಹಳ್ಳಿ, ಜೀವದಳ ಜಡಗೊಂಡನಹಳ್ಳಿ ದಿಬ್ಬದಾರಹಳ್ಳಿ ಬಾಲೇನಹಳ್ಳಿ, ಬಟ್ಟೂರುಖಾರಂ ಕೆ ಆರ್ ಪುರ ಮಕ್ಕಳ ಮಲ್ಲೇ ದುಸ್ಕಲ್ ಮುಟ್ಟಿ ಪಹಳ್ಳಿ, ಅಡಿವಾಲ ನಂದಿಹಳ್ಳಿ, ಎಂ # ಕಾಲೋನಿ ಹಾಗು ಸುತ್ತ ಮುತ್ತಲಿನ ಗ್ರಾಮದ ಗ್ರಾಹಕರು/ರೈತರು/ಸಾರ್ವಜನಿಕರು ಸಹಕರಿಸಬೇಕಾಗಿ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ವಿನಂತಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಖಲಿಸ್ತಾನಿ ಭಯೋತ್ಪಾದಕ’ ಪನ್ನುನಿ ಹತ್ಯೆ ಯತ್ನ: ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿದ ಅಮೆರಿಕ ಕೋರ್ಟ್
ಮುಂದುವರಿದ ಟೆಕ್ ಕಂಪನಿಗಳ ಉದ್ಯೋಗ ಕಡಿತ: ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ CISCO | Lay offs