Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಢಾಕಾ ವಿಮಾನ ನಿಲ್ದಾಣದಲ್ಲಿ ಭಾರಿ ಅಗ್ನಿ ಅವಘಡ, ಎಲ್ಲಾ ವಿಮಾನ ಹಾರಾಟ ರದ್ದು | Massive fire at Dhaka airport

18/10/2025 5:03 PM

‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳಿಗೆ ಗಮನಕ್ಕೆ: ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ, ನ.9 ಲಾಸ್ಟ್ ಡೇಟ್ | TET Exam 2025

18/10/2025 4:56 PM

ಯಾರದ್ದೋ ಪಿಎ ಅಂತ ಸಸ್ಪೆಂಡ್ ಮಾಡಿದ್ದಲ್ಲ, ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿದ್ದು : ಸಚಿವ ಪ್ರಿಯಾಂಕ್ ಖರ್ಗೆ

18/10/2025 4:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಡಿಜಿಟಲ್ ಮೀಡಿಯಾ’ಗಳಿಗೂ ಸರ್ಕಾರಿ ಜಾಹೀರಾತು: ಇದು ‘KSDMF’ಗೆ ಸಿಕ್ಕ ಮೊದಲ ಗೆಲುವು- ಅಧ್ಯಕ್ಷ ಸಮೀವುಲ್ಲಾ
KARNATAKA

‘ಡಿಜಿಟಲ್ ಮೀಡಿಯಾ’ಗಳಿಗೂ ಸರ್ಕಾರಿ ಜಾಹೀರಾತು: ಇದು ‘KSDMF’ಗೆ ಸಿಕ್ಕ ಮೊದಲ ಗೆಲುವು- ಅಧ್ಯಕ್ಷ ಸಮೀವುಲ್ಲಾ

By kannadanewsnow0928/08/2024 7:35 PM

ಬೆಂಗಳೂರು : ರಾಜ್ಯ ಸರ್ಕಾರದಿಂದ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ಪ್ರಕಟಿಸಲಾಗಿದೆ. ಇದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂಗೆ ಸಿಕ್ಕಂತ ಮೊದಲ ಗೆಲುವು ಎಂಬುದಾಗಿ ಅಧ್ಯಕ್ಷರಾದಂತ ಬಿ.ಸಮೀವುಲ್ಲಾ ಬೆಲಗೂರು ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಪ್ರಸ್ತುತ ಜಗತ್ತಿನ ಮುಂಚೂಣಿ ಮಾಧ್ಯಮ ಡಿಜಿಟಲ್ ಮಾಧ್ಯಮ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಇರಲಿಲ್ಲ. ಹೀಗಾಗಿ ಡಿಜಿಟಲ್ ಮಾಧ್ಯಮಗಳಿಗೆ ಮಾನ್ಯತೆ ದೊರಕಿಸಿಕೊಡುವ ಉದ್ದೇಶ ಹಾಗೂ ಡಿಜಿಟಲ್ ಮಾಧ್ಯಮಗಳ ವೃತ್ತಿಪರ ಪತ್ರಕರ್ತರ ಉಳಿವಿಗಾಗಿ ಟಿವಿ ಹಾಗೂ ಪತ್ರಿಕೆಗಳ ಮಾದರಿಯಲ್ಲೇ ಡಿಜಿಟಲ್ ‌ಮಾಧ್ಯಮಗಳಿಗೆ ಜಾಹೀರಾತು ಪಡೆಯುವ ಮೂಲ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಸ್ಥಾಪಿಸಲಾಗಿತ್ತು. 24-08-2022 ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಸ್ಥಾಪಿತವಾದ ಸಂಸ್ಥೆ ಈ ದಿಸೆಯಲ್ಲಿ ಸಾಕಷ್ಟು ಶ್ರಮ ಹಾಕಿದೆ ಎಂದರು.

10-06-2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ವಾರ್ತಾ ಇಲಾಖೆಯ ಆಯುಕ್ತರಿಗೆ ಡಿಜಿಟಲ್ ಮಾಧ್ಯಮಗಳ ಮಾನ್ಯತೆ & ಜಾಹೀರಾತು ನೀಡುವ ಕುರಿತು ಮನವಿ ಮಾಡಲಾಗಿತ್ತು. 22-08-2023 ರಂದು ನಮ್ಮ ಮನವಿಗೆ ಪತ್ರದ ಮೂಲಕ ಉತ್ತರಿಸಿದ್ದ ವಾರ್ತಾ & ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ರಾಮಲಿಂಗಪ್ಪ ನಿಮ್ಮ ಬೇಡಿಕೆ ಪರಿಶೀಲನೆ ಹಂತದಲ್ಲಿದ್ದು ಅನುಮೋದನೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಸರಿಯಾಗಿ 1 ವರ್ಷದ ತರುವಾಯ ಅದೇ ದಿನಾಂಕದಂದು 22-08-2024 ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಬಿಡುಗಡೆಯಾಗಿದೆ. ಇದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂಗೆ ಸಂದ ಮೊದಲ ಜಯ ಎಂದು ಫೋರಂ ಅಧ್ಯಕ್ಷ ಬಿ ಸಮೀವುಲ್ಲಾ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ ( KSDMF ) ಶೀಘ್ರವೇ ಮುಂದಿನ ಕಾರ್ಯತಂತ್ರದ ಕುರಿತು ಸಭೆ ಸೇರಿ ನಿರ್ಧಾರ ಮಾಡುವುದಾಗಿ ಅಧ್ಯಕ್ಷರಾದ ಬಿ ಸಮೀವುಲ್ಲಾ ತಿಳಿಸಿದ್ದಾರೆ. ಇದೇ ವೇಳೆ KSDMF ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಸಗರಹಳ್ಳಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಜೊತೆಗೆ ಡಿಜಿಟಲ್ ಮಾಧ್ಯಮಗಳಿಗೆ ಮತ್ತಷ್ಟು ಶಕ್ತಿ ತುಂಬಲು ಪ್ರಯತ್ನಿಸುವುದಾಗಿ ತಿಳಿಸಿದ್ರು. ಅಲ್ಲದೇ ಡಿಜಿಟಲ್ ಮಾಧ್ಯಮಗಳ ನ್ಯೂನತೆಗಳ ಸರಿಪಡಿಸುವ ಕಡೆ ಗಮನ ಹರಿಸುವುದಾಗಿ ತಿಳಿಸಿದರು.

ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಂದ KSDMFಗೆ ಅಭಿನಂದನೆ

ಇನ್ನು ಡಿಜಿಟಲ್ ಮಾಧ್ಯಮಗಳ ಮಾನ್ಯತೆ ಹಾಗೂ ಜಾಹೀರಾತು ನೀತಿ ಕುರಿತು ಸಾಕಷ್ಟು ಶ್ರಮವಹಿಸಿದ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಧ್ಯಕ್ಷರಾದ ಬಿ ಸಮೀವುಲ್ಲಾ ಹಾಗೂ ಫೋರಂ ಕಾರ್ಯಕಾರಿ ಸಮಿತಿ ಸದಸ್ಯರು ಜೊತೆಗೆ ಫೋರಂ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

ಡಿಜಿಟಲ್ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ KSDMF ಸಂಘಟನಾತ್ಮಕ ಹೋರಾಟದ ಫಲವಾಗಿ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಜಾರಿಯಾಗ್ತಿರೊದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸೂಚನೆ : ಡಿಜಿಟಲ್ ನಡೆಸುತ್ತಿದ್ದು KSDMF ಸದಸ್ಯರಾಗಲು ಇಚ್ಚೆ ಉಳ್ಳವರು ಫೋರಂ ಸಂಪರ್ಕಿಸಿ. ಮಾನದಂಡದ ಆಧಾರದ ಮೇಲೆ ಸದಸ್ಯತ್ವ ಕೊಡಲಾಗುವುದು.

‘SC, ST ವರ್ಗದ ಮಹಿಳೆ’ಯರಿಗೆ ಗುಡ್ ನ್ಯೂಸ್: ‘ಹೊಲಿಗೆ ಯಂತ್ರ’ ಖರೀದಿಗೆ ಅರ್ಜಿ ಆಹ್ವಾನ

BREAKING : ನಟ ದರ್ಶನ್ ಗೆ ಜೈಲೇ ಗತಿ : ಸೆ.9ರವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿ ಕೋರ್ಟ್ ಆದೇಶ | Actor Darshan

ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!

Share. Facebook Twitter LinkedIn WhatsApp Email

Related Posts

‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳಿಗೆ ಗಮನಕ್ಕೆ: ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ, ನ.9 ಲಾಸ್ಟ್ ಡೇಟ್ | TET Exam 2025

18/10/2025 4:56 PM1 Min Read

ಯಾರದ್ದೋ ಪಿಎ ಅಂತ ಸಸ್ಪೆಂಡ್ ಮಾಡಿದ್ದಲ್ಲ, ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿದ್ದು : ಸಚಿವ ಪ್ರಿಯಾಂಕ್ ಖರ್ಗೆ

18/10/2025 4:49 PM1 Min Read

SHOCKING : ಚಿಕ್ಕಾಬಳ್ಳಾಪುರದಲ್ಲಿ ವಿದ್ಯುತ್ ತಂತಿ ಹಿಡಿದು ಯುವಕ ಆತ್ಮಹತ್ಯೆಗೆ ಶರಣು : ಭಯಾನಕ ವಿಡಿಯೋ ವೈರಲ್!

18/10/2025 4:15 PM1 Min Read
Recent News

BREAKING: ಢಾಕಾ ವಿಮಾನ ನಿಲ್ದಾಣದಲ್ಲಿ ಭಾರಿ ಅಗ್ನಿ ಅವಘಡ, ಎಲ್ಲಾ ವಿಮಾನ ಹಾರಾಟ ರದ್ದು | Massive fire at Dhaka airport

18/10/2025 5:03 PM

‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳಿಗೆ ಗಮನಕ್ಕೆ: ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ, ನ.9 ಲಾಸ್ಟ್ ಡೇಟ್ | TET Exam 2025

18/10/2025 4:56 PM

ಯಾರದ್ದೋ ಪಿಎ ಅಂತ ಸಸ್ಪೆಂಡ್ ಮಾಡಿದ್ದಲ್ಲ, ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿದ್ದು : ಸಚಿವ ಪ್ರಿಯಾಂಕ್ ಖರ್ಗೆ

18/10/2025 4:49 PM

BREAKING ; ಬಾಂಗ್ಲಾದ ಢಾಕಾ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ, ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ

18/10/2025 4:41 PM
State News
KARNATAKA

‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳಿಗೆ ಗಮನಕ್ಕೆ: ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ, ನ.9 ಲಾಸ್ಟ್ ಡೇಟ್ | TET Exam 2025

By kannadanewsnow0918/10/2025 4:56 PM KARNATAKA 1 Min Read

ಬೆಂಗಳೂರು: ಟಿಇಟಿ ಪರೀಕ್ಷೆ ಪಾಸು ಮಾಡಿದಂತ ಪ್ರಾಥಮಿಕ ಶಾಲಾ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು ಎಂಬುದಾಗಿ ಸರ್ಕಾರ…

ಯಾರದ್ದೋ ಪಿಎ ಅಂತ ಸಸ್ಪೆಂಡ್ ಮಾಡಿದ್ದಲ್ಲ, ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿದ್ದು : ಸಚಿವ ಪ್ರಿಯಾಂಕ್ ಖರ್ಗೆ

18/10/2025 4:49 PM

SHOCKING : ಚಿಕ್ಕಾಬಳ್ಳಾಪುರದಲ್ಲಿ ವಿದ್ಯುತ್ ತಂತಿ ಹಿಡಿದು ಯುವಕ ಆತ್ಮಹತ್ಯೆಗೆ ಶರಣು : ಭಯಾನಕ ವಿಡಿಯೋ ವೈರಲ್!

18/10/2025 4:15 PM

BIG NEWS : ಕರ್ನಾಟಕದಿಂದಲೇ ನಿರ್ಬಂಧ ಹೇರುವ ಪ್ರಯತ್ನ ನಡೆದಿದೆ : ಕನ್ನೆರಿ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಆರೋಪ

18/10/2025 4:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.