Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ಯು-ಟರ್ನ್: ಭಾರತ-ಪಾಕ್ ನಡುವೆ ನಾನು ಮಧ್ಯಸ್ಥಿಕೆ ವಹಿಸಿಲ್ಲವೆಂದು ಹೇಳಿಕೆ | Donald Trump U-turn

15/05/2025 6:28 PM

ಜೈಲಲ್ಲೂ IPL ಹವಾ: ಜೈಲ್ ಪ್ರೀಮಿಯರ್ ಲೀಗ್ ನಲ್ಲಿ ನೈಟ್ ರೈಡರ್ಸ್ ಕ್ಯಾಪಿಟಲ್ ತಂಡ ಸೋಲು, ವೀಡಿಯೋ ವೈರಲ್

15/05/2025 6:22 PM

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೇಹರ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಅವರ ವಿರುದ್ಧ ಹೋರಾಟ: ರಮೇಶ್ ಬಾಬು ಎಚ್ಚರಿಕೆ
KARNATAKA

ಲೇಹರ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಅವರ ವಿರುದ್ಧ ಹೋರಾಟ: ರಮೇಶ್ ಬಾಬು ಎಚ್ಚರಿಕೆ

By kannadanewsnow0926/08/2024 9:57 PM

ಬೆಂಗಳೂರು: ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಸತ್ಯಕ್ಕೆ ದೂರವಾದಂತ ಆರೋಪಗಳನ್ನು ಲೇಹರ್ ಸಿಂಗ್ ಮಾಡಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಅವರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂಬುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಮೇಶ್ ಬಾಬು ಎಚ್ಚರಿಕೆ ನೀಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು,  ರಾಜ್ಯಸಭಾ ಸದಸ್ಯರಾದ ಲೇಹರ್ ಸಿಂಗ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ ಸಿಎ ನಿವೇಶನವನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಕೆಐಡಿಬಿಯ ಏರೋಸ್ಪೇಸ್ ಪಾರ್ಕ್ ನಲ್ಲಿ ನೀಡಿರುವ ಸಿಎ ಸೈಟ್ ಕುರಿತು ಅವರು ಎತ್ತಿರುವ ತಕರಾರಿಗೆ ಯಾವುದೇ ಆಕ್ಷೇಪಣೆಯಿಲ್ಲ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ಗುರಿ ಮಾಡಿರುವ ರೀತಿ ಸಂಪೂರ್ಣ ಭಟ್ಟಂಗಿ ತನದಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.

ರಾಜಸ್ಥಾನದಿಂದ ರಾಜಕೀಯಕ್ಕಾಗಿ ವಲಸೆ ಬಂದ ರಾಜಕಾರಣಿ. ಇಲ್ಲಿಗೆ ಬಂದು ರಾಜಕೀಯವಾಗಿ ಲಾಟರಿ ಹೊಡೆದವರಲ್ಲಿ ಇವರು ಒಬ್ಬರು. ಇವರಿಂದ ಕರ್ನಾಟಕದ ಅಭಿವೃದ್ಧಿಗೆ, ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲ. ಬಿಜೆಪಿಯ ಖಜಾಂಚಿ ಆಗಿದ್ದವರು. ಇವರು ಹೇಗೆ ಇಂತಹ ಉನ್ನತ ಸ್ಥಾನಕ್ಕೆ ಹೋದರು ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ. ಯಾವ, ಯಾವ ನಾಯಕರಿಗೆ ಏನು ಕೆಲಸ ಮಾಡಿಕೊಟ್ಟು ಈ ಹುದ್ದೆಗೆ ಏರಿರುವ ಬಗ್ಗೆಯೂ ತನಿಖೆ ನಡೆಸಬೇಕು. ಲಾಟರಿ ರಾಜಕಾರಣಿಯಾಗಿ ಎಂಎಲ್ ಸಿ ಆಗಿದ್ದವರು ಕುಮಾರಸ್ವಾಮಿ ಕೃಪಾಕಟಾಕ್ಷದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಆಗಾಗ ತಮ್ಮ ಅಸ್ತಿತ್ವವಿದೆ ಎಂದು ತೋರಿಸಲು ಒಂದಷ್ಟು ವಿವಾದತ್ಮಕ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ರಾಷ್ಟ್ರಮಟ್ಟದಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ಮುಖಪುಟದ ಜಾಹಿರಾತು ನೀಡಿ ವಿವಾದಕ್ಕೆ ಒಳಗಾಗಿದ್ದರು. ಯಡಿಯೂರಪ್ಪ ಅವರನ್ನು 17.05.2013ರಲ್ಲಿ ಸಮರ್ಥಿಸಿಕೊಳ್ಳಲು ಹೋಗಿ ರಾಷ್ಟೀಯ ನಾಯಕ ಎಲ್. ಕೆ. ಅಡ್ವಾಣಿ ವಿರುದ್ಧ 4 ಪುಟಗಳ ಪತ್ರ ಬರೆದು ಭ್ರಷ್ಟಾಚಾರದ ಆರೋಪ ಮಾಡಿದ ಕಾರಣಕ್ಕೆ ಅಂದಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಶಿ ಲೇಹರ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಇವರ ಉಚ್ಚಾಟನೆಯನ್ನು ಬಿಜೆಪಿ ಏಕೆ ವಾಪಾಸ್ ಪಡೆದುಕೊಂಡಿತು ಅಥವಾ ಅಡ್ವಾಣಿ ಅವರ ಮೇಲಿರುವ ಅಪರಾಧವನ್ನು ಬಿಜೆಪಿ ಒಪ್ಪಿಕೊಂಡಿತೆ? ಇದರ ಬಗ್ಗೆ ಆ ಪಕ್ಷದ ನಾಯಕರೇ ಉತ್ತರ ಕೊಡಬೇಕು. ಆಗಾಗ ವಿವಾದ ಹುಟ್ಟು ಹಾಕುವುದು ಇವರ ಚಾಳಿ ಎಂದು ಗುಡುಗಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ ಗೆ ನಿಯಮಗಳನ್ನು ಮೀರಿ ಸಿಎ ಸೈಟ್ ಹಂಚಿಕೆ ಮಾಡಿರುವುದು ಕಾನೂನು ಬಾಹಿರ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಇರುವ ನಿಯಮಗಳ ಪ್ರಕಾರ ವ್ಯಕ್ತಿಗತವಾಗಿ ಸಿಎ ಸೈಟ್ ಅನ್ನು ಕರ್ನಾಟಕದಲ್ಲಿ ನೀಡಲು ಬರುವುದಿಲ್ಲ. ಸಹಕಾರಿ ಸಂಘ, ಟ್ರಸ್ಟ್, ಸಂಘ ಗಳಿಗೆ ಮಾತ್ರ ನಿವೇಶನ ನೀಡಲು ಸಾಧ್ಯ. ಅದೇ ರೀತಿ ಅವರ ಸಂಸ್ಥೆಗೆ ನಿವೇಶನ ನೀಡಲಾಗಿದೆ.

ಈ ಮೊದಲು ಯಾವುದಾದರು ಸಂಘ ಸಂಸ್ಥೆಗಳು ಅರ್ಜಿ ಹಾಕಿದ ತಕ್ಷಣ ಸಿಎ ನಿವೇಶನ ಕೊಡಲಾಗುತ್ತಿತ್ತು. ಆದರೆ ಈಗ ನಿಯಮಗಳು ಬದಲಾವಣೆಯಾಗಿದ್ದು ಆ ಸಂಸ್ಥೆ ಪ್ರಾರಂಭವಾಗಿ ಕನಿಷ್ಠ 3 ವರ್ಷಗಳಾಗಿರಬೇಕು ಹಾಗೂ ಆಡಿಟ್ ವರದಿ ಆಗಿರಬೇಕು.

ಕಳೆದ 40 ವರ್ಷಗಳಿಂದ ಕೆಐಡಿಬಿ ಸಿಎ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ಹೈಕೋರ್ಟ್ ಸಂಘ ಸಂಸ್ಥೆಗಳಿಗೆ ಸಿಎ ನಿವೇಶನ ಹಂಚಿಕೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿತ್ತು. ಇದರ ಮೇರೆಗೆ ಇತ್ತೀಚಿಗೆ ಹಂಚಿಕೆ ಮಾಡಲಾಗುತ್ತಿದೆ.

ಇದೇ ರೀತಿ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಸಿಎ ಸೈಟ್ ಅನ್ನು ನಿಯಮಾನುಸಾರ ಹಂಚಿಕೆ ಮಾಡಲಾಗಿದೆ. ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಖರ್ಗೆ ಅವರ ಕುಟುಂಬಕ್ಕೆ ಮಸಿ ಬಯಲು ಈ ಆರೋಪ ಮಾಡುತ್ತಿದ್ದಾರೆ ಲೆಹರ್ ಸಿಂಗ್ ಅವರು.

ಇದೇ ಲೆಹರ್ ಸಿಂಗ್ ಅವರು 2010, 2016 ರಲ್ಲಿ ಎಂಎಲ್ ಸಿ ಆಗಿದ್ದಾಗ ಸಲ್ಲಿಸಿರುವ ಅಫಿಡವಿಟ್ ಅಲ್ಲಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವಾಗ ಸಲ್ಲಿಸಿದ್ದ ಅಫೀಡವಿಟ್ಟಿನಲ್ಲಿ ಎಷ್ಟು ಆಸ್ತಿಯನ್ನು ನಮೂದಿಸಿದ್ದಾರೆ ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. 2010ರಲ್ಲಿ 12- 13 ಕೋಟಿ ಘೋಷಿತ ಆಸ್ತಿಯಿತ್ತು. ಈಗ 70ರಿಂದ 72 ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ನಿಮ್ಮ ರಾಜಕೀಯ ನಡೆಗಳ ಅನುಮಾನದಿಂದ ಕೂಡಿರುವಾಗ ಇನ್ನೊಬ್ಬರ ಮೇಲೆ ಕೆಸರು ಎರಚುವ ಕೆಲಸ ಮಾಡಬೇಡಿ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ, ಯಾವ ಸಂಘ ಸಂಸ್ಥೆಗಳಿಗೆ ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಎಕರೆ ಸಿಎ ನಿವೇಶನಗಳು ಮಂಜೂರಾಗಿವೆ ಎಂಬುದನ್ನು ನೀವೇ ರಾಜ್ಯಪಾಲರಿಗೆ ಹೇಳಿ ತನಿಖೆ ಮಾಡಿಸಬೇಕಾಗಿ ಅವರಲ್ಲಿ ಮನವಿ ಮಾಡುತ್ತೇನೆ.

ಬಿಜೆಪಿ ಮತ್ತು ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಹತ್ತಿಪ್ಪತ್ತು ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ನಿವೇಶನಗಳನ್ನು ನೀಡಲಾಗಿದೆ. ಈ ಅಕ್ರಮದ ಹೊಣೆಯನ್ನು ಸ್ವತಃ ಅವರು ಸಹ ಹೊರಬೇಕಾಗಿದೆ. ಏಕೆಂದರೆ ಅವರು ಸಹ ಬಿಜೆಪಿ ಬೆಂಬಲಿತ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಸದಸ್ಯರಾಗಿದ್ದಾರೆ, ಬಿಜೆಪಿಯಿಂದ ಜನಪ್ರತಿನಿಧಿಯಾಗಿದ್ದಾರೆ. ಆದಕಾರಣ ಇವರು ಈ ಅಕ್ರಮಗಳಿಗೆ ಉತ್ತರ ನೀಡಬೇಕು.

ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಸಂಸ್ಥೆಗಳು ಅಕ್ರಮವಾಗಿ ಪಡೆದಿರುವ ನಿವೇಶನವನ್ನು ತಕ್ಷಣ ವಾಪಸ್ ಮಾಡಿ ಎಂದು ನಾವು ಹೇಳುವುದಿಲ್ಲ. ಏಕೆಂದರೆ ನಾವು ಲೆಹರ್ ಸಿಂಗ್ ರೀತಿ ಕೆಳಮಟ್ಟದ ರಾಜಕಾರಣ ಮಾಡುವುದಿಲ್ಲ.

ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬದ ಸಿದ್ಧಾರ್ಥ ಸಂಸ್ಥೆಯು ಸಿದ್ಧಾರ್ಥನ ಚಿಂತನೆಗಳನ್ನು ಹರಡುವ ಉದ್ದೇಶಕ್ಕಾಗಿ ಭೂಮಿಯನ್ನು ಪಡೆದಿದ್ದಾರೆ. ಇದಕ್ಕೆ ಜಾತಿಯ ಬಣ್ಣ ಲೇಪಿಸಿರುವುದು ಖಂಡನೀಯ.

ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ನಿವೇಶನ ಹಂಚಿಕೆಯಾಗಿದೆ ಎಂದು ಬೃಹಸಿನ್ ಅವರು ಬರೆದಿರುವ ಚಿತ್ರದಲ್ಲಿ ಉಲ್ಲೇಖಿಸಿದ್ದಾರೆ. ದಲಿತ ವಿರೋಧಿ ಮನಸ್ಥಿತಿ ಹೊಂದಿರುವ ಬಿಜೆಪಿಯ ಗುಣವನ್ನು ಲೇಹರ್ ಸಿಂಗ್ ಹೊರ ಹಾಕಿದ್ದಾರೆ.

1994 ರಲ್ಲಿ ಸ್ಥಾಪನೆಯಾದ ಟ್ರಸ್ಟ್ ಸಾರ್ವಜನಿಕ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಟ್ರಸ್ಟ್ ಗೆ ಹೋಗುವ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಸಬೇಕಾಗುತ್ತದೆ ಹೊರತು ಸ್ವಂತ ಉದ್ದೇಶಕ್ಕೆ ಬಳಸುವಂತಿಲ್ಲ.

ಇಂತಹ ಕೆಲಸಗಳನ್ನು ಲೇಹರ್ ಸಿಂಗ್ ಅವರು ಮಾಡಿ ಅನುಭವ ಇರಬಹುದು. ಏಕೆಂದರೆ ಅವರು ತಮ್ಮ ಅಫಿಡವಿಟ್ಅಲ್ಲಿ ಶೇರ್ ಸೇರಿದಂತೆ ಅನೇಕ ವ್ಯವಹಾರಗಳ ಬಗ್ಗೆ ತಿಳಿಸಿದ್ದಾರೆ. ಈ ನೆಲದ ಕಾನೂನು ಅರ್ಥ ಮಾಡಿಕೊಳ್ಳಿ, ನಮ್ಮಲ್ಲಿಗೆ ಬಂದರೆ ನಾವೇ ಮಾಹಿತಿ ನೀಡುತ್ತೇವೆ. ಸುಳ್ಳು ಮಾಹಿತಿ ನೀಡಬೇಡಿ.

ಲೆಹರ್ ಸಿಂಗ್ ಅವರು ಒಂದು ಸಮುದಾಯವನ್ನು ಗುರಿ ಮಾಡಿರುವ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲು ಮಾಡಲಾಗುವುದು. ಅವರು ಸಾರ್ವಜನಿಕವಾಗಿ ಕ್ಷಮೆ ಕೊಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವು ಅವರ ವಿರುದ್ಧ ಹೋರಾಟ ಮಾಡುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

BREAKING: ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ: 3 FIR ದಾಖಲು, 2 ಪ್ರಕರಣಗಳಲ್ಲಿ ‘ನಟ ದರ್ಶನ್’ A1 ಆರೋಪಿ

Good News: ‘ಆರೋಗ್ಯ ಇಲಾಖೆ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ಮೊದಲ ವಾರದೊಳೆಗೆ ‘ವರ್ಗಾವಣೆ ಕೌನ್ಸಿಲಿಂಗ್’ ಪೂರ್ಣ

Job Alert : ಭಾರತೀಯ ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | RRB Recruitment 2024

Share. Facebook Twitter LinkedIn WhatsApp Email

Related Posts

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM1 Min Read

ಬೆಂಗಳೂರಿನ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

15/05/2025 5:37 PM1 Min Read

BREAKING : 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ : ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

15/05/2025 5:37 PM2 Mins Read
Recent News

ಟ್ರಂಪ್ ಯು-ಟರ್ನ್: ಭಾರತ-ಪಾಕ್ ನಡುವೆ ನಾನು ಮಧ್ಯಸ್ಥಿಕೆ ವಹಿಸಿಲ್ಲವೆಂದು ಹೇಳಿಕೆ | Donald Trump U-turn

15/05/2025 6:28 PM

ಜೈಲಲ್ಲೂ IPL ಹವಾ: ಜೈಲ್ ಪ್ರೀಮಿಯರ್ ಲೀಗ್ ನಲ್ಲಿ ನೈಟ್ ರೈಡರ್ಸ್ ಕ್ಯಾಪಿಟಲ್ ತಂಡ ಸೋಲು, ವೀಡಿಯೋ ವೈರಲ್

15/05/2025 6:22 PM

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM

ಜೆಎನ್‌ಯು ನಂತರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಟರ್ಕಿಶ್ ಅಂಗಸಂಸ್ಥೆಗಳೊಂದಿಗಿನ ಒಪ್ಪಂದ ಸ್ಥಗಿತ | Boycott Turkey

15/05/2025 5:51 PM
State News
KARNATAKA

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

By kannadanewsnow0915/05/2025 6:08 PM KARNATAKA 1 Min Read

ಉಡುಪಿ: ಸಾಲ, ಬಡತದ ಸುಳಿಗೆ ಸಿಲುಕಿದಂತ ತಂದೆಯೊಬ್ಬ, ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತಂದೆ ಬಾವಿಗೆ ಹಾರಿದ್ದನ್ನು ಕಂಡಂತ ಪುತ್ರ,…

ಬೆಂಗಳೂರಿನ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

15/05/2025 5:37 PM

BREAKING : 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ : ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

15/05/2025 5:37 PM

GOOD NEWS: ರಾಜ್ಯದ ಅನಧಿಕೃತ ಕಟ್ಟಡ, ನಿವೇಶನ ಮಾಲೀಕರಿಗೆ ಗುಡ್ ನ್ಯೂಸ್: ಬಿ-ಖಾತಾ ಅವಧಿ 3 ತಿಂಗಳು ವಿಸ್ತರಣೆ

15/05/2025 5:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.