ನವದೆಹಲಿ : ರೈತರ ಪ್ರತಿಭಟನೆಯ ಕುರಿತು ನಟಿ-ಸಂಸದೆ ಕಂಗನಾ ರನೌತ್ ನೀಡಿದ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ, ಅವ್ರನ್ನ ಬಿಜೆಪಿ ನಾಯಕತ್ವ ಖಂಡಿಸಿದೆ. ಬಿಜೆಪಿಯ ಸ್ಪಷ್ಟೀಕರಣವು ಖಂಡನೆಯೊಂದಿಗೆ ಸೇರಿಕೊಂಡಿದೆ : ರನೌತ್ ಅವರ ಹೇಳಿಕೆಯು ಪಕ್ಷದ ಅಭಿಪ್ರಾಯಗಳನ್ನ ಪ್ರತಿನಿಧಿಸುವುದಿಲ್ಲ ಎಂದಿದ್ದು, ಇದಕ್ಕೆ ಬಿಜೆಪಿ ಅಸಮ್ಮತಿ ವ್ಯಕ್ತಪಡಿಸಿದೆ.
ಸರ್ಕಾರ ಕೈಗೊಂಡ ಬಲವಾದ ಕ್ರಮಗಳಿಲ್ಲದಿದ್ದರೆ ರೈತರ ಪ್ರತಿಭಟನೆ ಭಾರತದಲ್ಲಿ ಬಾಂಗ್ಲಾದೇಶದಂತಹ ಬಿಕ್ಕಟ್ಟಿಗೆ ಕಾರಣವಾಗುತ್ತಿತ್ತು ಎಂದು ನಟಿ ಹೇಳಿಕೆ ನೀಡಿದ ಒಂದು ದಿನದ ನಂತರ ಬಿಜೆಪಿಯ ಅಸಮ್ಮತಿ ಬಂದಿದೆ.
“ಕಂಗನಾ ರನೌತ್ ಅವರಿಗೆ ಪಕ್ಷದ ಪರವಾಗಿ ನೀತಿ ವಿಷಯಗಳ ಬಗ್ಗೆ ಮಾತನಾಡಲು ಅಧಿಕಾರವಿಲ್ಲ ಮತ್ತು ಹಾಗೆ ಮಾಡಲು ಅನುಮತಿ ನೀಡಲಾಗಿಲ್ಲ. ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನ ನೀಡದಂತೆ ಬಿಜೆಪಿ ಕಂಗನಾ ರಣಾವತ್ ಅವರಿಗೆ ನಿರ್ದೇಶನ ನೀಡಿದೆ” ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.
BJP expressed disagreement with its MP Kangna Ranaut's comments on farmers agitation, says she is not authorised to speak on policy issues. pic.twitter.com/xJ878F5pWK
— Press Trust of India (@PTI_News) August 26, 2024
BREAKING : IPO ಉಲ್ಲಂಘನೆ : ಪೇಟಿಎಂ ನಿರ್ದೇಶಕ ‘ವಿಜಯ್ ಶೇಖರ್ ಶರ್ಮಾ’ಗೆ ‘ಸೆಬಿ ಶೋಕಾಸ್ ನೋಟಿಸ್’
ನಟ ದರ್ಶನ್ ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ಮೊದಲೇ ಗೊತ್ತಿತ್ತಾ? ಜೈಲು ಅಧಿಕಾರಿಗೆ ಬರೆದ ಪತ್ರ ವೈರಲ್