ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಉಭಯ ವಿಶ್ವ ನಾಯಕರ ನಡುವಿನ ವ್ಯಾಪಕ ರಾಜತಾಂತ್ರಿಕ ಮಾತುಕತೆಯ ಸಂದರ್ಭದಲ್ಲಿ ಈ ಆಹ್ವಾನವನ್ನು ಪ್ರಸ್ತಾಪಿಸಲಾಗಿದೆ.
ಅಧ್ಯಕ್ಷ ಜೆಲೆಂಕ್ಸಿ ಅವರು “ಮಹಾನ್” ದೇಶಕ್ಕೆ ಪ್ರಯಾಣಿಸಲು ಸಂತೋಷಪಡುತ್ತೇನೆ ಎಂದು ಹೇಳುವ ಮೂಲಕ ಆಹ್ವಾನಕ್ಕೆ ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ, ಅಧ್ಯಕ್ಷ ಜೆಲೆನ್ಸ್ಕಿ ಅವರು ಭಾರತಕ್ಕೆ ಬರಲು ಸಂತೋಷಪಡುತ್ತೇನೆ ಎಂದು ಒಪ್ಪಿಕೊಂಡರು. ಉಕ್ರೇನ್ ಅಧ್ಯಕ್ಷರು ತಮ್ಮ ಭೇಟಿಯು ಆತಿಥೇಯರ ಸನ್ನದ್ಧತೆ ಮತ್ತು ಯುದ್ಧ ಪೀಡಿತ ಉಕ್ರೇನ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.
ಮೂರು ದಶಕಗಳ ಹಿಂದೆ 1991 ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್ ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಪ್ರಧಾನಿ ಮೋದಿ ಅವರು ಕೈವ್ ಗೆ ಸುಮಾರು ಒಂಬತ್ತು ಗಂಟೆಗಳ ಭೇಟಿಯೊಂದಿಗೆ ಇದನ್ನು ಗುರುತಿಸಿದರು, ಅಲ್ಲಿ ಅವರು ಅಧ್ಯಕ್ಷ ಜೆಲೆನ್ಸ್ಕಿ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಮಾತನಾಡಿದರು. ಇಬ್ಬರೂ ರಷ್ಯಾದ ಆಕ್ರಮಣದ ಬಗ್ಗೆ ಮಾತನಾಡಿದರು ಮತ್ತು ತಮ್ಮ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಚರ್ಚಿಸಿದರು.
ಉಭಯ ನಾಯಕರ ನಡುವಿನ ಮಾತುಕತೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಹ್ವಾನವನ್ನು ದೃಢಪಡಿಸಿದರು.
“ನಮ್ಮ ಪ್ರಧಾನಿ 1992 ರ ನಂತರ ಮೊದಲ ಬಾರಿಗೆ ಉಕ್ರೇನ್ ಗೆ ಭೇಟಿ ನೀಡಿರುವುದು ಗಮನಾರ್ಹವಾಗಿದೆ. ಅಂತಹ ಸಂದರ್ಭಗಳಲ್ಲಿ ಅವರು ಆಮಂತ್ರಣವನ್ನು ನೀಡುವುದು ಸ್ವಾಭಾವಿಕವಾಗಿದೆ” ಎಂದರು.