ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, 2014ರಲ್ಲಿ ಸಿದ್ದರಾಮಯ್ಯ ಪತ್ನಿ ಮುಡಾಗೆ ಮನವಿ ಸಲ್ಲಿಸಿ, ನನ್ನ ಜಮೀನಿನಲ್ಲಿ ಮುಡಾ ನಿವೇಶನ ಮಾಡಿ ಹಂಚಿದೆ. ಇದಕ್ಕೆ ಪರಿಹಾರ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪತ್ನಿ ಬರೆದ ಪತ್ರ ಬಹಿರಂಗವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ನಾನು ಮುಡಾಕ್ಕೆ ಸೈಟು ಕೊಡಿ ಅಂತ ಪತ್ರಾನೇ ಬರ್ದಿಲ್ಲ, ನನ್ನ ಶ್ರೀಮತಿ ಕೂಡಾ ಬರ್ದಿಲ್ಲ, ನನ್ನ ಆಫೀಸಿಂದ ಕೂಡಾ ಪತ್ರ ಬರ್ದಿಲ್ಲ” ಎಂದಿದ್ದ ಸಿಎಂ ಸಿದ್ದರಾಮಯ್ಯನವರೆ, ನಿಮ್ಮ ಹೆಸರನ್ನು “ಸುಳ್ಳುರಾಮಯ್ಯ” ಎಂದು ಬದಲಾಯಿಸಿಕೊಳ್ಳಿ ಎಂದು ಹೇಳಿದೆ.
40:60 ಅನುಪಾತದಡಿ ನಿವೇಶನ ನೀಡಲು ಮುಡಾ ಒಪ್ಪಿದ್ದರೂ, ಬೇಡ ನಮಗೆ 50:50 ಅನುಪಾತದಲ್ಲಿ ಸೈಟು ನೀಡಲೇಬೇಕು ಎಂದು ಒತ್ತಾಯಿಸಿದ್ದು ನಿಮ್ಮ ಶ್ರೀಮತಿ ಪಾರ್ವತಿಯವರೇ ಎಂದು ದಾಖಲೆಗಳು ಸಾರಿ ಹೇಳುತ್ತಿವೆ ಎಂದು ತಿಳಿಸಿದೆ.
ನೀವು ಕಟ್ಟಿರುವ ಕಪ್ಪು ಚುಕ್ಕೆಗಳ ಸುಳ್ಳಿನ ಮಹಲು ಸಂಪೂರ್ಣ ಕುಸಿಯುವ ಮುನ್ನ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದೆ.