ನವದೆಹಲಿ : ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ಜನ ಪೋಷನ ಕೇಂದ್ರದ ಹೆಸರಿನಡಿ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ತೆಲಂಗಾಣದಲ್ಲಿ ಪ್ರಾಯೋಗಿಕವಾಗಿ 60 ಪಡಿತರ ಅಂಗಡಿಗಳಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ.
ಈ ಪಡಿತರ ಕೇಂದ್ರಗಳಲ್ಲಿ ಸಿರಿಧಾನ್ಯ, ಬೇಳೆಕಾಳು, ಹೈನುಗಾರಿಕೆ ಉತ್ಪನ್ನಗಳು ಸಿಗಲಿವೆ. ಪೌಷ್ಠಿಕ ಆಹಾರ ವಿತರಣೆ ಯೋಜನೆಯು ಶೀಘ್ರದಲ್ಲೇ ದೇಶದ 5.38 ಲಕ್ಷ ಪಡಿತರ ಮಳಿಗೆಗಳಲ್ಇ ಲಭ್ಯವಾಗಲಿದೆ.
ಆಹಾರ ಭದ್ರತೆ ಮಾತ್ರವಲ್ಲದೆ ಇದು ಸಮಾಜದ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಹೆಚ್ಚಿಸಿ ಎಲ್ಲರಿಗೂ ಪೌಷ್ಟಿಕಾಂಶದ ಭದ್ರತೆ ನೀಡುತ್ತದೆ. ಮೇರಾ ರೇಷನ್ ಆ್ಯಪ್ ಸೇರಿದಂತೆ ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಗುಣಮಟ್ಟದ ಕೈಪಿಡಿ, ಭಾರತೀಯ ಆಹಾರ ನಿಗಮದ ಒಪ್ಪಂದದ ಕೈಪಿಡಿ, NABL ಮಾನ್ಯತೆಯ ಲ್ಯಾಬ್ಗಳು ಮುಂತಾದ ಉಪಕ್ರಮಗಳಿಗೆ ಚಾಲನೆ ನೀಡಲಾಗಿದೆ.