ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಂಬಳ ಕೇಳಿದ ಯುವಕನನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಮೂಲದ ಶರೀಫ್ ಎಂಬ ಯುವಕನ ಮೇಲೆ ಮಾಲೀಕ ಹಲ್ಲೆ ಮಾಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಜುಲೈ 24ರಂದು ಮಾಲೀಕ ಶೆಕ್ಷಾವಲ ಶರೀಫನಿಗೆ ಕರೆ ಮಾಡಿ ಬಾಕಿ ಸಂಬಳ ಕೊಡುವುದಾಗಿ ಹೇಳಿ ಉತ್ತರಹಳ್ಳಿಯ ಅಂಗಡಿಗೆ ಬರುವಂತೆ ತಿಳಿಸಿದ್ದ. ಸಂಬಳದ ಆಸೆಗೆ ಶರೀಫ ಬಂದಿದ್ದ. ಆದರೆ ಹಣ ಕೊಡುವುದಾಗಿ ಹೇಳಿ ಅಂಗಡಿಯ ಶೆಟರ್ ಎಳೆದು ಬೆತ್ತದಿಂದ ಮನ ಬಂದಂತೆ ಶರೀಫ್ ಮೇಲೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿ ಶೆಕ್ಷಾವಲ ಅಟ್ಟಹಾಸ ಮೆರೆದಿದ್ದಾನೆ.
ಹಾಸಿಗೆ ವ್ಯಾಪಾರಿಯಿಂದ ಈ ಕೃತ್ಯ ನಡೆದಿದ್ದು, ಹಾಸಿಗೆ ವ್ಯಾಪಾರ ಮಾಡಿದ ಶರೀಫ್ ಸಂಬಳ ಕೇಳಿದಕ್ಕೆ ಮಾಲೀಕ ನಗ್ನಗೊಳಿಸಿ ಹಲ್ಲೆ ಮಾಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ವರೈಲ್ ಆಗಿದೆ.