Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2ನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಆಪ್ಷನ್ ದಾಖಲಿಸಲು ದಿನಾಂಕ ವಿಸ್ತರಿಸಿದ ಕೆಇಎ

09/07/2025 9:05 PM

ಜುಲೈ.11ರಂದು ಹಾಸನದಲ್ಲಿ ಬಾನುಮುಷ್ತಾಕ್‌ ಅವರ ಎದೆಯ ಹಣತೆ, ತೇಜಸ್ವಿ ಮಾಯಾಮೃಗ ನಾಟಕ ಪ್ರದರ್ಶನ

09/07/2025 9:01 PM

‘ಹಾವು’ ಕಚ್ಚಿದಾಗ ಅಪ್ಪಿತಪ್ಪಿಯೂ ಹೀಗೆ ಮಾಡ್ಬೇಡಿ.! ಇದು ಮಾರಕವಾಗ್ಬೋದು

09/07/2025 9:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಿಂದ ‘ರಾಜ್ಯಪಾಲ’ರನ್ನು ವಾಪಸ್ ಕರೆಸಿಕೊಳ್ಳಿ: ಸಚಿವ ‘ಈಶ್ವರ ಖಂಡ್ರೆ’ ಒತ್ತಾಯ
KARNATAKA

ಕರ್ನಾಟಕದಿಂದ ‘ರಾಜ್ಯಪಾಲ’ರನ್ನು ವಾಪಸ್ ಕರೆಸಿಕೊಳ್ಳಿ: ಸಚಿವ ‘ಈಶ್ವರ ಖಂಡ್ರೆ’ ಒತ್ತಾಯ

By kannadanewsnow0909/08/2024 3:07 PM

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಾ ಕಾರಣ ನೋಟಿಸ್ ನೀಡುವ ಮೂಲಕ ಪಕ್ಷಪಾತದಿಂದ ವರ್ತಿಸುತ್ತಿರುವ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಈ ಕೂಡಲೇ ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿಂದು ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಮತ್ತು ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದು, ಅವರು ಯಶಸ್ವಿಯಾಗುವುದಿಲ್ಲ ಎಂದರು. ಅಂತಹ ದುಸ್ಸಾಹಸಕ್ಕೆ ಬಿಜೆಪಿ ಅಥವಾ ಕೇಂದ್ರ ಸರ್ಕಾರ ಕೈಹಾಕಿದರೆ ಮುಂದಿನ ಪರಿಣಾಮಗಳಿಗೆ ಅವರೇ ಹೊಣೆ ಎಂದರು.

ಕೇಂದ್ರದ ಎನ್.ಡಿ.ಎ. ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಮತ್ತು 7 ಕೋಟಿ ಜನರ ಮೇಲೆ ಪ್ರಹಾರ ಮಾಡುತ್ತಿದೆ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಮತ್ತು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದರು.

ಬರ ಪರಿಹಾರ, ನೆರೆ ಪರಿಹಾರ ಮತ್ತು ರಾಜ್ಯಕ್ಕೆ ಪಂಚವಾರ್ಷಿಕ ಯೋಜನೆಯಲ್ಲಿ ಬರಬೇಕಾದ ಅನುದಾನದಲ್ಲೂ ಮೋಸ ಮಾಡುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡುವ ಮತ್ತು ನಮ್ಮ ಹಕ್ಕಿಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಸ್ಥಿತಿ ಬಂದಿದೆ. ಕೇಂದ್ರದ ವರ್ತನೆ ಒಕ್ಕೂಟ ವ್ಯವಸ್ಥೆಗೇ ಮಾರಕವಾಗಿದೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.

ನಮ್ಮ ಹಲವು ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದರೆ ಅದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕಾರಣ. ಎನ್.ಡಿ.ಎ. ನಮ್ಮ ರಾಜ್ಯದ ಜನರಿಗೆ ಘೋರ ಅನ್ಯಾಯ ಮಾಡುತ್ತಿದೆ.

ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ ಬಿಜೆಪಿ ಇಂದು ಭ್ರಷ್ಟಾಚಾರದ ವಿರುದ್ಧ ತಾವು ಪಾದಯಾತ್ರೆ ಮಾಡುತ್ತಿದ್ದೇವೆ ಎನ್ನುವುದು ಹಾಸ್ಯಾಸ್ಪದ. ಇವರು ಯಾವ ಪುರುಷಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ, ರಾಜ್ಯದ ಜನತೆ ಈ ಪಾದಯಾತ್ರೆ ತಿರಸ್ಕರಿಸಿದ್ದಾರೆ ಎಂದರು.

2008ರಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಪಕ್ಷೇತರ ಶಾಸಕರ ಖರೀದಿಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಆಪರೇಷನ್ ಕಮಲ ಮಾಡಿ, ಕರ್ನಾಟಕಕ್ಕೆ ಇದ್ದ ಘನತೆಯನ್ನು ಹಾಳು ಮಾಡಿತು. ಕೃಷ್ಣಯ್ಯಶೆಟ್ಟಿ, ಜಗದೀಶ ಶೆಟ್ಟರ್ ಜೈಲಿಗೆ ಹೋಗಿದ್ದನ್ನು ಕರ್ನಾಟಕದ ಜನ ನೋಡಿದ್ದಾರೆ. ಇಂತಹ ಪಕ್ಷ ನಮಗೆ ನೀತಿ ಪಾಠ ಹೇಳುತ್ತಿದೆ ಎಂದರು.

2018ರಲ್ಲಿ ಕೂಡ ಬಿಜೆಪಿಗೆ ಬಹುಮತ ಬರಲಿಲ್ಲ. ಆಗಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಅವರು ಮಾಡಿದ ಮತ್ತೊಂದು ಆಪರೇಷನ್ ಕಮಲದ ಬಗ್ಗೆ ಜನರೇ ಬೇಸರಗೊಂಡಿದ್ದರು. ಆಗಿನ ಒಬ್ಬ ಶಾಸಕರು ಪಕ್ಷಾಂತರ ಮಾಡುವಂತೆ ತಮ್ಮ ಮನೆಗೆ 5 ಕೋಟಿ ರೂ. ತಂದು ಕೊಟ್ಟಿದ್ದಾರೆ ಎಂದು ಹೇಳಿದರು. ಆದರೆ ಯಾವುದೇ ಇ.ಡಿ., ಸಿಬಿಐ, ಐ.ಟಿ. ಬರಲಿಲ್ಲ ಎಂದು ದೂರಿದರು.

ಅನ್ನಭಾಗ್ಯ, ಮನಸ್ವಿನಿ, ವಸತಿ ಭಾಗ್ಯವೇ ಮೊದಲಾದ ಹಲವು ಕಲ್ಯಾಣ ಕಾರ್ಯಕ್ರಮ ನೀಡಿದ ಕಾಂಗ್ರೆಸ್, ಈಗ ಬಡ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ರಾಜ್ಯದ ಜನತೆ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಆದರೂ ಬಿಜೆಪಿ ತನ್ನ ಹಿಂದಿನ ಚಾಳಿ ಬಿಟ್ಟಿಲ್ಲ ಎಂದರು.

BIG UPDATE: ಭೂಕುಸಿತ ಪೀಡಿತ ವಯನಾಡಲ್ಲಿ ನಿಗೂಢ ಶಬ್ದದೊಂದಿಗೆ ‘ಭೂಕಂಪ’ದ ಭೀತಿ | Wayanad Landslide

ಶಾಕಿಂಗ್‌ನ್ಯೂಸ್‌: ಈ ರೀತಿಯ ಮಾಂಸ ನಿಮ್ಮ ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ-ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ..!

Share. Facebook Twitter LinkedIn WhatsApp Email

Related Posts

2ನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಆಪ್ಷನ್ ದಾಖಲಿಸಲು ದಿನಾಂಕ ವಿಸ್ತರಿಸಿದ ಕೆಇಎ

09/07/2025 9:05 PM2 Mins Read

ಜುಲೈ.11ರಂದು ಹಾಸನದಲ್ಲಿ ಬಾನುಮುಷ್ತಾಕ್‌ ಅವರ ಎದೆಯ ಹಣತೆ, ತೇಜಸ್ವಿ ಮಾಯಾಮೃಗ ನಾಟಕ ಪ್ರದರ್ಶನ

09/07/2025 9:01 PM1 Min Read

ಮದ್ಯಪ್ರಿಯರ ಗಮನಕ್ಕೆ: ಬಳ್ಳಾರಿಯಲ್ಲಿ ಈ ದಿನದಂದು ಎಣ್ಣೆ ಸಿಗಲ್ಲ

09/07/2025 8:52 PM1 Min Read
Recent News

2ನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಆಪ್ಷನ್ ದಾಖಲಿಸಲು ದಿನಾಂಕ ವಿಸ್ತರಿಸಿದ ಕೆಇಎ

09/07/2025 9:05 PM

ಜುಲೈ.11ರಂದು ಹಾಸನದಲ್ಲಿ ಬಾನುಮುಷ್ತಾಕ್‌ ಅವರ ಎದೆಯ ಹಣತೆ, ತೇಜಸ್ವಿ ಮಾಯಾಮೃಗ ನಾಟಕ ಪ್ರದರ್ಶನ

09/07/2025 9:01 PM

‘ಹಾವು’ ಕಚ್ಚಿದಾಗ ಅಪ್ಪಿತಪ್ಪಿಯೂ ಹೀಗೆ ಮಾಡ್ಬೇಡಿ.! ಇದು ಮಾರಕವಾಗ್ಬೋದು

09/07/2025 9:00 PM

ಪ್ರಧಾನಿ ಮೋದಿ ಭೇಟಿಯ ಸಂದರ್ಭದಲ್ಲಿ ‘UPI’ಗೆ ನಮೀಬಿಯಾ ಚಾಲನೆ

09/07/2025 8:53 PM
State News
KARNATAKA

2ನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಆಪ್ಷನ್ ದಾಖಲಿಸಲು ದಿನಾಂಕ ವಿಸ್ತರಿಸಿದ ಕೆಇಎ

By kannadanewsnow0909/07/2025 9:05 PM KARNATAKA 2 Mins Read

ಬೆಂಗಳೂರು: ಎರಡನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ Options ದಾಖಲಿಸಲು ಮತ್ತೆ ದಿನಾಂಕ ವಿಸ್ತರಿಸಲಾಗಿದೆ. ಜುಲೈ 10ರಂದು ಮಧ್ಯಾಹ್ನ 12…

ಜುಲೈ.11ರಂದು ಹಾಸನದಲ್ಲಿ ಬಾನುಮುಷ್ತಾಕ್‌ ಅವರ ಎದೆಯ ಹಣತೆ, ತೇಜಸ್ವಿ ಮಾಯಾಮೃಗ ನಾಟಕ ಪ್ರದರ್ಶನ

09/07/2025 9:01 PM

ಮದ್ಯಪ್ರಿಯರ ಗಮನಕ್ಕೆ: ಬಳ್ಳಾರಿಯಲ್ಲಿ ಈ ದಿನದಂದು ಎಣ್ಣೆ ಸಿಗಲ್ಲ

09/07/2025 8:52 PM

CRIME NEWS: ಪ್ರಿಯಕರನ ಜೊತೆ ಸೇರಿ ಪತಿ ಕೊಂದಿದ್ದ ಪತ್ನಿ ಸೇರಿ ಮೂವರು ಅರೆಸ್ಟ್

09/07/2025 8:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.