Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ : ಕಾರಿನ ಬಾಗಿಲು ಲಾಕ್ ಉಸಿರುಗಟ್ಟಿ ನಾಲ್ವರು ಮಕ್ಕಳು ದುರಂತ ಸಾವು.!

19/05/2025 7:47 AM

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ: ಹರಿಯಾಣ ಯೂಟ್ಯೂಬರ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲು

19/05/2025 7:29 AM

ಗಮನಿಸಿ : ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಲು ಇಲ್ಲಿದೆ ಸುಲಭ ವಿಧಾನ.!

19/05/2025 7:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕನ್ನಡ ನ್ಯೂಸ್ ನೌ’ ಫಲಶೃತಿ: ಹಿರಿಯೂರಿನ ‘ಉಡುವಳ್ಳಿ ಗ್ರಾ.ಪಂಚಾಯ್ತಿ’ಗೆ ಇಲಾಖೆಯ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
KARNATAKA

‘ಕನ್ನಡ ನ್ಯೂಸ್ ನೌ’ ಫಲಶೃತಿ: ಹಿರಿಯೂರಿನ ‘ಉಡುವಳ್ಳಿ ಗ್ರಾ.ಪಂಚಾಯ್ತಿ’ಗೆ ಇಲಾಖೆಯ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

By kannadanewsnow0907/08/2024 5:20 PM

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲಿನ ಕರ್ಮಕಾಂಡದ ವರದಿಯನ್ನು ನಿಮ್ಮ ಕನ್ನಡ ನ್ಯೂಸ್ ನೌ ( Kannada News Now ) ಆಗಸ್ಟ್.5ರಂದು ರಾಜ್ಯದ ‘ಪಂಚಾಯತ್ ರಾಜ್ ಇಲಾಖೆ’ಯಲ್ಲೊಂದು ‘ಬಹುದೊಡ್ಡ ಕರ್ಮಕಾಂಡ’ ಎಂಬುದಾಗಿ ಪ್ರಕಟಿಸಿತ್ತು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದಂತ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಇಂದು ಇಲಾಖೆಯ ಇಬ್ಬರು ಅಧಿಕಾರಿಗಳ ತಂಡ ಉಡುವಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲೇ ಹೀಗೊಂದು ಬಹುದೊಡ್ಡ ಕರ್ಮಕಾಂಡ ನಡೆದಿದೆ. ಅದೆಲ್ಲೋ ಕುರುಚಲು ಗಿಡಗಳ ಮಧ್ಯೆ ಗೋ ಕಟ್ಟೆ ನಿರ್ಮಾಣ ಮಾಡ್ತಿವಿ ಅಂತ ಯಾರಿಗೂ ಗೊತ್ತಾಗದಂತೆ ಪಿಡಿಒ ಹಾಗೂ ಕಾಮಗಾರಿ ಮಾಡಿಸೋರು ಸೇರಿ ಬೋರ್ಡ್ ಹಾಕ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ ಅನ್ನುವ ಹಾಗೆ ಕಾಮಗಾರಿಯನ್ನು ನಡೆಸಿದ ಬಗ್ಗೆ ಕನ್ನಡ ನ್ಯೂಸ್ ನೌ ಆಗಸ್ಟ್.5ರಂದು ವರದಿಯನ್ನು ಪ್ರಕಟಿಸಿತ್ತು.

ಈ ಹಿನ್ನಲೆಯಲ್ಲಿ ಇಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಬ್ಬರು ಅಧಿಕಾರಿಗಳ ತಂಡವು ಉಡುವಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ವರದಿಗೆ ಸಂಬಂಧಿಸಿದಂತೆ ಕಡತಗಳನ್ನು ಸಂಪೂರ್ಣ ಪರಿಶೀಲಿಸಿದೆ. ಜೊತೆಗೆ ಸ್ಥಳದಲ್ಲಿದ್ದಂತ ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.

ಇನ್ನೂ ಕಡತಗಳೊಂದಿಗೆ ಸರ್ವೆ ನಂಬರ್.11 ನೀಡಿ, ಕಣ್ತಪ್ಪಿನಿಂದ ಮತ್ತೊಂದು ಸರ್ವೇ ನಂಬರ್ ನಲ್ಲಿ ಕಾಮಗಾರಿಯನ್ನು ಮಾಡಲಾಗಿದೆ ಎನ್ನುವ ಬಗ್ಗೆ ಸಮಜಾಯಿಸಿ ನೀಡಿದ್ದರ ಸಂಬಂಧ ಕಾಮಗಾರಿ ನಡೆದಂತ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ಇಲಾಖೆಯ ಅಧಿಕಾರಿಗಳ ತಂಡ ನಡೆಸಿತು. ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಇಂಜಿನಿಯರ್ ದಾಖಲೆಯಲ್ಲಿ ನಮೂದಿಸಿರುವಂತ ಕಾಮಗಾರಿಯ ಅಳತೆಯೇ ಒಂದಾಗಿದ್ದರೇ, ಕಾಮಗಾರಿಯ ಸ್ಥಳದಲ್ಲಿ ನಡೆಸಿರೋದೇ ಬೇರೆಯಾಗಿದೆ ಎಂಬುದನ್ನು ಸ್ವತಃ ಅಧಿಕಾರಿಗಳ ತಂಡವೇ ಟೇಪ್ ನಿಂದ ಅಳೆದು ಪರಿಶೀಲಿಸಿದರು.

ಈ ವೇಳೆಯಲ್ಲಿ ಸ್ಥಳದಲ್ಲಿದ್ದಂತ ಇಂಜಿನಿಯರ್ ಅನ್ನು ದಾಖಲೆಯಲ್ಲಿ ಒಂದು ರೀತಿ, ಇಲ್ಲಿ ನಡೆಸಿರೋದೇ ಮಗದೊಂದು ರೀತಿ ಏನಿದು ಕಾಮಗಾರಿಯಲ್ಲಿ ಅಕ್ರಮ ಎಂಬುದಾಗಿ ತರಾಟೆಗೆ ಇಲಾಖೆಯ ಅಧಿಕಾರಿಗಳು ತೆಗೆದುಕೊಂಡರು. ಜೊತೆಗೆ ನಿಮ್ಮ ಅಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ಸಂಪೂರ್ಣ ವರದಿಯನ್ನು ನೀಡಲಾಗುತ್ತದೆ. ಇಲಾಖೆಯಿಂದ ಶೀಘ್ರವೇ ಕಾಮಗಾರಿ ಕರ್ಮಾಕಂಡದ ಬಗ್ಗೆ ಕ್ರಮವಾಗಲಿದೆ ಎಂಬುದಾಗಿ ಎಚ್ಚರಿಸಿ ಅಲ್ಲಿಂದ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ ಮಾಹಿತಿಯನ್ನು ಹಿರಿಯೂರು ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಕುಮಾರ್ ಹಂಚಿಕೊಂಡಿದ್ದು, ಬೆಂಗಳೂರಿನಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇಬ್ಬರು ಅಧಿಕಾರಿಗಳು ಉಡುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ದೂರು ಹೋಗಿತ್ತು ಎನ್ನುವ ಕಾರಣದಿಂದ ಭೇಟಿ ನೀಡಿದ್ದಾರೆ.  ಅವರಿಗೆ ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಶ್ರೀನಿವಾಸ್. ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕು, ಟೆಕ್ನಿಕಲ್ ಇಂಜಿನಿಯರ್ ಕುಶಾಲ್ ಕೂಡ ಜೊತೆಗಿದ್ದು, ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಕನ್ನಡ ನ್ಯೂಸ್ ನೌ ಸುದ್ದಿಯಿಂದ ಉಡುವಳ್ಳಿ ಗ್ರಾಮ ಪಂಚಾಯ್ತಿ ಕರ್ಮಕಾಂಡ ಉನ್ನತ ಅಧಿಕಾರಿಗಳವರೆಗೂ ತಲುಪಿ, ಗ್ರಾಮ ಪಂಚಾಯ್ತಿಯ ಇಂಚಿಂಚೂ ಕಡತವನ್ನು ಅಧಿಕಾರಿಗಳು ಪರಿಶೀಲಿಸುವಂತೆ ಆಯ್ತು ಅಂತ ಅಜ್ಜನಹಟ್ಟಿ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕಾಮಗಾರಿ ಹಣ ನುಂಗಲು ಯತ್ನಿಸಿ, ದೂರಿನ ಮೂಲಕ ಹೊರ ಬಂದ ನಂತ್ರ ಕಾಮಗಾರಿ ನಡೆಸುವಂತೆ ಆಗಿದೆ. ಇದು ಇಲ್ಲಿಗೆ ನಿಲ್ಲಬಾರದು. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಅಂತ ಎಚ್ಚರಿಸಿದ್ದಾರೆ.

ನಾಳೆಯಿಂದ ಬೆಂಗಳೂರಿನ ‘ಲಾಲ್ ಬಾಗ್’ನಲ್ಲಿ ‘ಫಲಪುಷ್ಪ ಪ್ರದರ್ಶನ್’ ಆರಂಭ: ಹೀಗಿದೆ ‘ಟಿಕೆಟ್ ದರ’ | Lalbagh Flower show

ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024

Share. Facebook Twitter LinkedIn WhatsApp Email

Related Posts

ಗಮನಿಸಿ : ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಲು ಇಲ್ಲಿದೆ ಸುಲಭ ವಿಧಾನ.!

19/05/2025 7:27 AM1 Min Read

BIG NEWS : ರಾಜ್ಯದ ಕಾರ್ಮಿಕರೇ ಗಮನಿಸಿ : `ಪಿಂಚಣಿ’ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

19/05/2025 6:50 AM1 Min Read

BIG NEWS: ರಾಜ್ಯದ `ಅಂಗವೈಕಲ್ಯವುಳ್ಳ ಸರ್ಕಾರಿ ನೌಕರರ ಮುಂಬಡ್ತಿ’ಯಲ್ಲಿ ಶೇ.4 ರಷ್ಟು ಮೀಸಲಾತಿ : ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

19/05/2025 6:32 AM2 Mins Read
Recent News

SHOCKING : ಪೋಷಕರೇ ಎಚ್ಚರ : ಕಾರಿನ ಬಾಗಿಲು ಲಾಕ್ ಉಸಿರುಗಟ್ಟಿ ನಾಲ್ವರು ಮಕ್ಕಳು ದುರಂತ ಸಾವು.!

19/05/2025 7:47 AM

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ: ಹರಿಯಾಣ ಯೂಟ್ಯೂಬರ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲು

19/05/2025 7:29 AM

ಗಮನಿಸಿ : ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಲು ಇಲ್ಲಿದೆ ಸುಲಭ ವಿಧಾನ.!

19/05/2025 7:27 AM

ಪಾಕ್ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಹೊಸ ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ | Watch video

19/05/2025 7:13 AM
State News
KARNATAKA

ಗಮನಿಸಿ : ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಲು ಇಲ್ಲಿದೆ ಸುಲಭ ವಿಧಾನ.!

By kannadanewsnow5719/05/2025 7:27 AM KARNATAKA 1 Min Read

ಆಧಾರ್ ಕಾರ್ಡ್ ಭಾರತದ ಅತ್ಯಂತ ಪ್ರಮುಖ ಗುರುತಿನ ಚೀಟಿಯಾಗಿದೆ. ಪ್ರತಿಯೊಂದು ಪ್ರಮುಖ ಕೆಲಸಕ್ಕೂ ಆಧಾರ್ ಅಗತ್ಯವಿದೆ. ಆದಾಗ್ಯೂ, ಆಧಾರ್ ಕಾರ್ಡ್…

BIG NEWS : ರಾಜ್ಯದ ಕಾರ್ಮಿಕರೇ ಗಮನಿಸಿ : `ಪಿಂಚಣಿ’ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

19/05/2025 6:50 AM

BIG NEWS: ರಾಜ್ಯದ `ಅಂಗವೈಕಲ್ಯವುಳ್ಳ ಸರ್ಕಾರಿ ನೌಕರರ ಮುಂಬಡ್ತಿ’ಯಲ್ಲಿ ಶೇ.4 ರಷ್ಟು ಮೀಸಲಾತಿ : ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

19/05/2025 6:32 AM

BIG NEWS : ರಾಜ್ಯದಲ್ಲಿ 2025-26ನೇ ಸಾಲಿನ 1-10ನೇ ತರಗತಿ `ಮಾರಾಟ ಪಠ್ಯಪುಸ್ತಕಗಳ’ ಬೆಲೆ ನಿಗದಿ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

19/05/2025 6:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.