ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲಿನ ಕರ್ಮಕಾಂಡದ ವರದಿಯನ್ನು ನಿಮ್ಮ ಕನ್ನಡ ನ್ಯೂಸ್ ನೌ ( Kannada News Now ) ಆಗಸ್ಟ್.5ರಂದು ರಾಜ್ಯದ ‘ಪಂಚಾಯತ್ ರಾಜ್ ಇಲಾಖೆ’ಯಲ್ಲೊಂದು ‘ಬಹುದೊಡ್ಡ ಕರ್ಮಕಾಂಡ’ ಎಂಬುದಾಗಿ ಪ್ರಕಟಿಸಿತ್ತು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದಂತ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಇಂದು ಇಲಾಖೆಯ ಇಬ್ಬರು ಅಧಿಕಾರಿಗಳ ತಂಡ ಉಡುವಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲೇ ಹೀಗೊಂದು ಬಹುದೊಡ್ಡ ಕರ್ಮಕಾಂಡ ನಡೆದಿದೆ. ಅದೆಲ್ಲೋ ಕುರುಚಲು ಗಿಡಗಳ ಮಧ್ಯೆ ಗೋ ಕಟ್ಟೆ ನಿರ್ಮಾಣ ಮಾಡ್ತಿವಿ ಅಂತ ಯಾರಿಗೂ ಗೊತ್ತಾಗದಂತೆ ಪಿಡಿಒ ಹಾಗೂ ಕಾಮಗಾರಿ ಮಾಡಿಸೋರು ಸೇರಿ ಬೋರ್ಡ್ ಹಾಕ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ ಅನ್ನುವ ಹಾಗೆ ಕಾಮಗಾರಿಯನ್ನು ನಡೆಸಿದ ಬಗ್ಗೆ ಕನ್ನಡ ನ್ಯೂಸ್ ನೌ ಆಗಸ್ಟ್.5ರಂದು ವರದಿಯನ್ನು ಪ್ರಕಟಿಸಿತ್ತು.
ಈ ಹಿನ್ನಲೆಯಲ್ಲಿ ಇಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಬ್ಬರು ಅಧಿಕಾರಿಗಳ ತಂಡವು ಉಡುವಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ವರದಿಗೆ ಸಂಬಂಧಿಸಿದಂತೆ ಕಡತಗಳನ್ನು ಸಂಪೂರ್ಣ ಪರಿಶೀಲಿಸಿದೆ. ಜೊತೆಗೆ ಸ್ಥಳದಲ್ಲಿದ್ದಂತ ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.
ಇನ್ನೂ ಕಡತಗಳೊಂದಿಗೆ ಸರ್ವೆ ನಂಬರ್.11 ನೀಡಿ, ಕಣ್ತಪ್ಪಿನಿಂದ ಮತ್ತೊಂದು ಸರ್ವೇ ನಂಬರ್ ನಲ್ಲಿ ಕಾಮಗಾರಿಯನ್ನು ಮಾಡಲಾಗಿದೆ ಎನ್ನುವ ಬಗ್ಗೆ ಸಮಜಾಯಿಸಿ ನೀಡಿದ್ದರ ಸಂಬಂಧ ಕಾಮಗಾರಿ ನಡೆದಂತ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ಇಲಾಖೆಯ ಅಧಿಕಾರಿಗಳ ತಂಡ ನಡೆಸಿತು. ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಇಂಜಿನಿಯರ್ ದಾಖಲೆಯಲ್ಲಿ ನಮೂದಿಸಿರುವಂತ ಕಾಮಗಾರಿಯ ಅಳತೆಯೇ ಒಂದಾಗಿದ್ದರೇ, ಕಾಮಗಾರಿಯ ಸ್ಥಳದಲ್ಲಿ ನಡೆಸಿರೋದೇ ಬೇರೆಯಾಗಿದೆ ಎಂಬುದನ್ನು ಸ್ವತಃ ಅಧಿಕಾರಿಗಳ ತಂಡವೇ ಟೇಪ್ ನಿಂದ ಅಳೆದು ಪರಿಶೀಲಿಸಿದರು.
ಈ ವೇಳೆಯಲ್ಲಿ ಸ್ಥಳದಲ್ಲಿದ್ದಂತ ಇಂಜಿನಿಯರ್ ಅನ್ನು ದಾಖಲೆಯಲ್ಲಿ ಒಂದು ರೀತಿ, ಇಲ್ಲಿ ನಡೆಸಿರೋದೇ ಮಗದೊಂದು ರೀತಿ ಏನಿದು ಕಾಮಗಾರಿಯಲ್ಲಿ ಅಕ್ರಮ ಎಂಬುದಾಗಿ ತರಾಟೆಗೆ ಇಲಾಖೆಯ ಅಧಿಕಾರಿಗಳು ತೆಗೆದುಕೊಂಡರು. ಜೊತೆಗೆ ನಿಮ್ಮ ಅಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ಸಂಪೂರ್ಣ ವರದಿಯನ್ನು ನೀಡಲಾಗುತ್ತದೆ. ಇಲಾಖೆಯಿಂದ ಶೀಘ್ರವೇ ಕಾಮಗಾರಿ ಕರ್ಮಾಕಂಡದ ಬಗ್ಗೆ ಕ್ರಮವಾಗಲಿದೆ ಎಂಬುದಾಗಿ ಎಚ್ಚರಿಸಿ ಅಲ್ಲಿಂದ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ ಮಾಹಿತಿಯನ್ನು ಹಿರಿಯೂರು ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಕುಮಾರ್ ಹಂಚಿಕೊಂಡಿದ್ದು, ಬೆಂಗಳೂರಿನಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇಬ್ಬರು ಅಧಿಕಾರಿಗಳು ಉಡುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ದೂರು ಹೋಗಿತ್ತು ಎನ್ನುವ ಕಾರಣದಿಂದ ಭೇಟಿ ನೀಡಿದ್ದಾರೆ. ಅವರಿಗೆ ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಶ್ರೀನಿವಾಸ್. ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕು, ಟೆಕ್ನಿಕಲ್ ಇಂಜಿನಿಯರ್ ಕುಶಾಲ್ ಕೂಡ ಜೊತೆಗಿದ್ದು, ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ನ್ಯೂಸ್ ನೌ ಸುದ್ದಿಯಿಂದ ಉಡುವಳ್ಳಿ ಗ್ರಾಮ ಪಂಚಾಯ್ತಿ ಕರ್ಮಕಾಂಡ ಉನ್ನತ ಅಧಿಕಾರಿಗಳವರೆಗೂ ತಲುಪಿ, ಗ್ರಾಮ ಪಂಚಾಯ್ತಿಯ ಇಂಚಿಂಚೂ ಕಡತವನ್ನು ಅಧಿಕಾರಿಗಳು ಪರಿಶೀಲಿಸುವಂತೆ ಆಯ್ತು ಅಂತ ಅಜ್ಜನಹಟ್ಟಿ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕಾಮಗಾರಿ ಹಣ ನುಂಗಲು ಯತ್ನಿಸಿ, ದೂರಿನ ಮೂಲಕ ಹೊರ ಬಂದ ನಂತ್ರ ಕಾಮಗಾರಿ ನಡೆಸುವಂತೆ ಆಗಿದೆ. ಇದು ಇಲ್ಲಿಗೆ ನಿಲ್ಲಬಾರದು. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಅಂತ ಎಚ್ಚರಿಸಿದ್ದಾರೆ.
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024