ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಯಿಲ್ಲದೇ ಸುಳ್ಳು ಆರೋಪ ಮಾಡಿ, ಪತ್ರಕರ್ತರ ಬಗ್ಗೆ ಬರೆದವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಉಪ ವಿಭಾಗೀಯ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ವೇಳೆ ಮಾತನಾಡಿದಂತ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಸಾಗರ ಶಾಖೆಯಿಂದ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ ಅವರು, ಇತ್ತೀಚಿನ ದಿನಗಳಲ್ಲಿ ಸಾಗರ ತಾಲ್ಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದರಂತೆ ದಾಖಲೆಯಿಲ್ಲದೇ ಬರೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದಾಗಿ ಒತ್ತಾಯಿಸಿದರು.
ದಾಖಲೆಯಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಾಗರದ ಪತ್ರಕರ್ತರ ಬಗ್ಗೆ ಬರೆಯಲಾಗುತ್ತಿದೆ. ನಗರಸಭೆ ಆಯುಕ್ತರು ಐಪೋನ್ ಗಿಫ್ಟ್ ನೀಡಿದ್ದಾರೆ ಪತ್ರಕರ್ತರೊಬ್ಬರಿಗೆ ಅಂತ ಆರೋಪಿಸಲಾಗಿದೆ. ಆಯುಕ್ತರು ಕೊಟ್ಟಿದ್ದು ಯಾರಿಗೆ.? ಪಡೆದ ಪತ್ರಕರ್ತ ಯಾರು ಎನ್ನುವುದನ್ನು ಕೊಟ್ಟವರು, ಬರೆದವರನ್ನು ಕರೆದು ಎಸಿಯವರು ವಿಚಾರಿಸಿ, ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಸಾಗರದ ಅಧಿಕಾರಿಗಳ ಹತ್ತಿರ ಹೋಗಿ ನಾನು ಪತ್ರಕರ್ತ ಎಂದು ವಿಡಿಯೋ ಮಾಡಿ ಬೆದರಿಕೆ ಹಾಕುವುದು ಹೆಚ್ಚಾಗಿದೆ. ಅವರು ಪತ್ರಕರ್ತರೇ? ಅವರ ಐಡೆಂಟಿಟಿ ಏನು? ಮಾನ್ಯತೆ ಪಡೆದಂತ ಪತ್ರಕರ್ತರ ಸಂಘದಲ್ಲಿ ಇದ್ದಾರೆಯೇ.? ಎಂಬುದನ್ನೆಲ್ಲ ಪ್ರಶ್ನಿಸಬೇಕು. ನಕಲಿ ಆಗಿದ್ದಲ್ಲಿ ಪೊಲೀಸರಿಗೆ ದೂರು ನೀಡಿ, ಕಾನೂನು ಕ್ರಮದಂತೆ ಶಿಕ್ಷೆಯಾಗುವಂತ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂಬುದಾಗಿ ತಿಳಿಸಿದರು.
ಈಗ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾದರಿಯಲ್ಲೇ ನಕಲಿ ಸಂಘಟನೆಗಳು ಹುಟ್ಟಿಕೊಂಡಿದ್ದಾವೆ. ಆ ಬಗ್ಗೆಯೂ ಸಾರ್ವಜನಿಕರು, ಸಾಗರ ತಾಲ್ಲೂಕಿನ ಜನತೆ, ಅಧಿಕಾರಿಗಳು ಗಮನಿಸಬೇಕು. ಪತ್ರಕರ್ತ ಅಂತ ಹೇಳಿಕೊಳ್ಳುವುದಲ್ಲ. ಅವರ ಬಳಿಯಲ್ಲಿ ಐಡಿ ಕಾರ್ಡ್ ಇದ್ಯಾ ಎಂಬಿದ್ಯಾದಿಯನ್ನು ಪರಿಶೀಲಿಸಬೇಕು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಕಾರ್ಡಿನಲ್ ಇರಬೇಕು. ಇಲ್ಲದಿದ್ದಾಗ ಪೋಲಿಸ್ ಇಲಾಖೆ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಈ ಬಳಿಕ ಮಾತನಾಡಿದಂತ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಅವರು, ಪತ್ರಕರ್ತರ ಮೇಲೆಯೇ ಬರಯುವ ಪ್ರವೃತ್ತಿ ಹೆಚ್ಚಾಗಿದೆ. ಪತ್ರಕರ್ತ ಅಂದ್ರೆ ಅವರೇನು ದೇವಲೋಕದಿಂದ ಇಳಿದವರಲ್ಲ. ಯಾರೇ ತಪ್ಪು ಮಾಡಿದ್ದರೂ ಕ್ರಮವಹಿಸಬೇಕು. ಈ ವಿಚಾರವನ್ನು ರಾಜ್ಯ, ಜಿಲ್ಲಾ ಪತ್ರಕರ್ತರ ಸಂಘಕ್ಕೂ ಗಮನಕ್ಕೆ ತರಲಾಗಿದೆ. ಇದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂತವರ ವಿರುದ್ಧ ಕ್ರಮವಹಿಸುವ ಕೆಲಸ ಆಗಲಿದೆ ಎಂದರು.
ಈ ಥರದ ಯಾರೋ ತಪ್ಪು ಮಾಡಿದ್ದಾರೆ, ಪತ್ರಕರ್ತರು ತಪ್ಪು ಮಾಡಿದ್ದಾರೆ. ಪತ್ರಕರ್ತರಿಂದ ಯಾರಿಗೋ ಸಮಸ್ಯೆಯಾಗಿದೆ. ಬೆದರಿಕೆ ಒಡ್ಡಿದ್ದಾರೆ ಎಂಬುದು ಗಮನಕ್ಕೆ ಬಂದರೇ, ಅಧಿಕೃತ ದಾಖಲಾತಿಗಳು ನಿಮ್ಮ ಬಳಿ ಇದ್ದರೇ, ಅದನ್ನು ನೀವು ಬಿತ್ತರಿಸಿ. ಅದಕ್ಕೆ ಸಂಬಂಧ ಪಟ್ಟಂತ ಯಾವುದೇ ಇಲಾಖೆಗೆ ಕೊಡಿ. ಅದು ಬಿಟ್ಟು ಇಡೀ ಪತ್ರಕರ್ತರ ಸಮೂಹದ ಮೇಲೆ ಜನ ತಪ್ಪು ತಿಳುವಳಿಕೆ ಮೂಡುವಂತ ಕೆಲಸ ಆಗಬಾರದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಾಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷರಾದ ಜಿ.ನಾಗೇಶ್, ಹಿರಿಯ ವಕೀಲರಾದ ಎಂ ರಾಘವೇಂದ್ರ, ಮಾ.ವೆಂ.ಸ ಪ್ರಸಾದ್, ಎಂ.ಜಿ ರಾಘವನ್, ವಸಂತ ಬಿ ಈಶ್ವರಗೆರೆ, ಇಮ್ರಾನ್ ಸಾಗರ್, ಜಮೀಲ್, ಶಿವಕುಮಾರ ಗೌಡ, ಉಮೇಶ್ ಮೊಗವೀರ, ನಂಜುಂಡಸ್ವಾಮಿ, ರಾಜೇಶ್ ಬಡ್ತಿ, ರಮೇಶ್ ಹೆಗಡೆ ಗುಂಡುಮನೆ, ಲೋಕೇಶ್ ಗುಡಿಗಾರ್, ಗಿರೀಶ್ ರಾಯ್ಕರ್, ಅಖಿಲೇಶ್ ಚಿಪ್ಳಿ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಕುಮಾರಸ್ವಾಮಿ ತಮ್ಮ ಹಿಂದಿನ ಯು-ಟರ್ನ್ ಹೇಳಿಕೆಗಳ ಬಗ್ಗೆ ಮಂಡ್ಯದಲ್ಲಿ ಉತ್ತರ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್
BREAKING: KPTCL ಇಂಜಿನಿಯರ್ ಶಾಂತಕುಮಾರ ಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ: ಶಾಸಕ ಬೇಳೂರು ಗೋಪಾಲಕೃಷ್ಣ
BIG NEWS: ಇಂಜಿನಿಯರ್ ‘ಶಾಂತಕುಮಾರ ಸ್ವಾಮಿ’ಗೆ ಬೆದರಿಕೆ, ಸುಳ್ಳು ಕೇಸ್ ಆರೋಪ: ಸಾಗರ ಶಾಸಕ, DYSP ಹೇಳಿದ್ದೇನು?