ಬೆಂಗಳೂರು : ರಾಜ್ಯಾದ್ಯಂತ ಮಳೆಯ ಆರ್ಭಟ ಶುರುವಾಗಿದ್ದು, ಹಲವಡೆ ಗುಡ್ಡ ಕುಸಿತ, ಭೂಕುಸಿತ ಸಂಭವಿಸುತ್ತಿವೆ ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಭೂಕುಸಿತದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಚಾರಣಕ್ಕೆ ಹೋಗುವ ಮುನ್ನ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಬಂಡೆಗಳು ಬಿರುಕು ಬಿಡುವುದು, ಮರಗಳು ಬೇರು ಸಮೇತ ಬೀಳುವ ಶಬ್ಧಗಳನ್ನು ಆಲಿಸಿ. ಭೂ ಕುಸಿತವಾಗುವಂತಹ ಪ್ರದೇಶಗಳಲ್ಲಿ ನೀವು ವಾಸವಾಗಿದ್ದಲ್ಲಿ ಸಮಯ ವ್ಯರ್ಥ ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳಿ. ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣವೇ ಗ್ರಾಮ ಪಂಚಾಯತಿಗೆ ತಿಳಿಸಿ ಎಂದು ಹೇಳಿದೆ.