Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

19/08/2025 5:12 PM

‘ಪ್ಯಾರಾ ಒಲಂಪಿಕ್’ ಪ್ರತಿಭೆಗಳಿಗೆ ‘ಡೆಲಾಯ್ಟ್ ಇಂಡಿಯಾ’ ಸೌಲಭ್ಯ: ‘ಬಿಲ್ಲಿಗಾರ್ತಿ ಶೀತಲ್ ದೇವಿ’ಯೊಂದಿಗೆ ಸಹಯೋಗ

19/08/2025 4:58 PM

ಕಂಠಪಾಠದ ಯುಗ ಅಂತ್ಯ ; CBSE ಮಹತ್ವದ ನಿರ್ಧಾರ, ಶಾಲೆಗಳಲ್ಲಿ ‘ಓಪನ್-ಬುಕ್ ಪರೀಕ್ಷೆ’

19/08/2025 4:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬಿಎಸ್ ಯಡಿಯೂರಪ್ಪ’ ಮುಂದೆ ಈ ಪ್ರಶ್ನೆಗಳನ್ನಿಟ್ಟ ‘ಮಾಜಿ MLC ರಮೇಶ್ ಬಾಬು’: ಉತ್ತರಿಸ್ತಾರಾ ‘BSY’?
KARNATAKA

‘ಬಿಎಸ್ ಯಡಿಯೂರಪ್ಪ’ ಮುಂದೆ ಈ ಪ್ರಶ್ನೆಗಳನ್ನಿಟ್ಟ ‘ಮಾಜಿ MLC ರಮೇಶ್ ಬಾಬು’: ಉತ್ತರಿಸ್ತಾರಾ ‘BSY’?

By kannadanewsnow0904/08/2024 3:35 PM

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ 10 ಪ್ರಶ್ನೆಗಳನ್ನು ಮಾಜಿ ಪರಿಷತ್ ಸದಸ್ ರಮೇಶ್ ಬಾಬು ಕೇಳಿದ್ದಾರೆ. ಆ ಪ್ರಶ್ನೆಗಳು ಏನು ಅನ್ನುವ ಬಗ್ಗೆ ಮುಂದೆ ಓದಿ.

ಈ ಕುರಿತಂತೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರು ಹಾಗೂ ಮಾಜಿ ಪರಿಷತ್ ಸದಸ್ಯರಾದಂತ ರಮೇಶ್ ಬಾಬು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ ಜನನಾಯಕರಾಗಿ ಬೆಳೆದವರಲ್ಲಿ ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪನವರೂ ಒಬ್ಬರು. ಜನನಾಯಕರು ಸಂದರ್ಭಕ್ಕೆ ಪೂರಕವಾಗಿ ತಮ್ಮ ನಿಲುವು ಮತ್ತು ಹೇಳಿಕೆಗಳನ್ನು ಬದಲಾಯಿಸಿದರೆ ಅವರು ಜನನಾಯಕರಾಗುವುದಿಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಕುಮಾರ ಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಿದ ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಂದ ಅಧಿಕಾರ ವಂಚಿತರಾಗಿ ವಚನ ಭ್ರಷ್ಟತೆಯ ಆರೋಪ ಮಾಡಿ ಇದೇ ಕಾರಣಕ್ಕಾಗಿ ಹೋರಾಟ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರು. ತದನಂತರ ಬೇರೆಬೇರೆ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದ ಮೇಲೆ, ದೇವೇಗೌಡರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗುರುತರವಾದ ಆರೋಪಗಳನ್ನು ಮಾಡಿ ಆ ಆರೋಪಗಳು ಧಾಖಲೆ ಆಗಿರುತ್ತವೆ. ಆದರೆ ಮಗನ ರಾಜಕಾರಣದ ಭವಿಷ್ಯದ ಅನಿವಾರ್ಯತೆಗಾಗಿ ಜೆಡಿಎಸ್ ಪಕ್ಷ ಮತ್ತು ಹೆಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿ ನೆನ್ನೆ ದಿನ ಪಾದಯಾತ್ರೆಗೆ ಚಾಲನೆ ನೀಡುವುದರ ಮೂಲಕ ವರ್ತಮಾನ ಕಾಲದ ದುರಂತ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.  ಯಡಿಯೂರಪ್ಪನವರು ಕರ್ನಾಟಕದ ಜನರಿಗೆ ಕೆಳಕಂಡ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸಲು ಕಾಂಗ್ರೆಸ್ ಪಕ್ಷದ ಪರವಾಗಿ ಒತ್ತಾಯಿಸಿದ್ದಾರೆ.

1. ಯಡಿಯೂರಪ್ಪನವರು 2008ರಲ್ಲಿ ಜೆಡಿಎಸ್ ಪಕ್ಷದ ಮೇಲೆ, ಹೆಚ್. ಡಿ. ಕುಮಾರ ಸ್ವಾಮಿ ಅವರ ಮೇಲೆ ಮಾಡಿದ್ದ ವಚನ ಭ್ರಷ್ಟತೆಯ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
2. 17-03-2011 ರಲ್ಲಿ ಈ ರಾಜ್ಯದ ಮುಖ್ಯ ಮಂತ್ರಿಯಾಗಿ ಕರ್ನಾಟಕದ ವಿಧಾನ ಪರಿಷತ್ ನಲ್ಲಿ ಮಾತನಾಡಿ ದೇವೇಗೌಡರು ಅವರ ಕುಟುಂಬದವರಿಗೆ ಮೈಸೂರಿನ ಮೂಡ ದಲ್ಲಿ ಅಕ್ರಮವಾಗಿ 48 ನಿವೇಶನಗಳನ್ನು ನೀಡಿರುವುದಾಗಿ ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
3. ಅದೇ ದಿನ ವಿಧಾನ ಪರಿಷತಿನಲ್ಲಿ ಆರೋಪ ಮಾಡಿ ಜಂತ್ ಕಲ್ ಮೈನಿಂಗ್ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುಗರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
4. ಕುಮಾರ ಸ್ವಾಮಿ ಅವರಿಗೆ ಮೂಡದಲ್ಲಿ ನಿವೇಶನ ಸಂಖ್ಯೆ. 17B(1) ವಿಸ್ತೀರ್ಣ 75X280 ಅಡಿ 1984 ರಲ್ಲಿ ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
5. 25-05-2018 ರಲ್ಲಿ ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡುವಾಗ, ಹೆಚ್. ಡಿ. ಕುಮಾರ ಸ್ವಾಮಿ ರವರು ತಾವು ಬೆಂಬಲ ವಾಪಸ್ಸು ಪಡೆದ ನಂತರ ಅಂದಿನ ಮುಖ್ಯ ಮಂತ್ರಿಯಾಗಿ 22 ಗಣಿಗಾರಿಕೆ ಗುತ್ತಿಗೆ ಅನುಮೋದನೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
6. ಅದೇ ದಿನ ವಿಧಾನ ಸಭೆಯಲ್ಲಿ ಮಾತನಾಡುವಾಗ 1984 ರಲ್ಲಿ ದೇವೇಗೌಡರು ಅವರ ಕುಟುಂಬದವರಿಗೆ ಮೂಡದಲ್ಲಿ 46 ನಿವೇಶನ ಹಂಚಿಕೆ ಮಾಡಿದ್ದರು ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
7. ಬಿ. ಎಸ್. ಯಡಿಯೂರಪ್ಪನವರು ಅಂದಿನ ರಾಜ್ಯಪಾಲರು ತಮ್ಮ ವಿರುದ್ದ ಬಂದ ಆರೋಪದ ಮೇಲೆ Prosecution ವಿಚಾರಣೆಗೆ ಅನುಮತಿ ನೀಡಿದ್ದನ್ನು ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಪಿಟಿಷನ್ ಮುಖಾಂತರ ಪ್ರಶ್ನೆ ಮಾಡಿದ್ದು, ಹೈ ಕೋರ್ಟ್ ಇವರ ಅರ್ಜಿಯನ್ನು ಮಾನ್ಯ ಮಾಡಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದು, ತಪ್ಪು ಎಂದು ಹೇಳಿರುತ್ತದೆ. ಯಡಿಯೂರಪ್ಪನವರು ಈ ತೀರ್ಪುನ್ನು ಒಪ್ಪುತ್ತಾರೆಯೇ ಅಥವಾ ನಿರಾಕರಿಸುತ್ತಾರೆಯೇ?
8. ಯಡಿಯೂರಪ್ಪನರು ತಮ್ಮ ಪ್ರಕರಣದಲ್ಲಿ ಅರ್ಜಿದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷಾ ರವರನ್ನು ಬಳಸಿಕೊಂಡು ಶ್ರೀ ಹೆಚ್. ಡಿ. ದೇವೇಗೌಡರು ತಮ್ಮ ವಿರುದ್ಧ ದೂರು ದಾಖಲಿಸಿದ್ದರು ಎಂದು ಅನೇಕ ಸಂಧರ್ಭಗಳಲ್ಲಿ ಆರೋಪ ಮಾಡಿದ್ದರು. ಯಡಿಯೂರಪ್ಪನವರು ಈ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
9. ಯಡಿಯೂರಪ್ಪನವರು ಪಾದಯಾತ್ರೆಯ ಉದ್ಘಾಟನೆಗೆ ತಮ್ಮ ಪ್ರಕರಣದ ದೂರುದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ತಮ್ಮ ಪಕ್ಷದ ಹೈ ಕಮಾಂಡ್ ನಿಂದ ಯಾವುದೇ ನಿರ್ಬಂಧ ಇತ್ತೇ?
10. ಮೂಡ ಪ್ರಕರಣದಲ್ಲಿ ಪಾದಯಾತ್ರೆ ಉದ್ಘಾಟಿಸಿದ ಯಡಿಯೂರಪ್ಪನವರು ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ ಬಿ. ಎಂ. ಕಾವಲು ಗ್ರಾಮದ ಸುಮಾರು 2500 ಎಕರೆ ಅಕ್ರಮ ಭೂಮಿ ಹಂಚಿಕೆ ಆರೋಪದ ಸಂಬಂಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ತನಿಖೆಗೆ ಒತ್ತಾಯಿಸುವರೇ?

ಯಡಿಯೂರಪ್ಪನವರು ಈ ರಾಜ್ಯದ ಒಬ್ಬ ಜನನಾಯಕರಾಗಿದ್ದು, ಸದನದ ಒಳಗಡೆ ಅವರು ಹೆಚ್. ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಮೇಲೆ ಆರೋಪಗಳನ್ನು ಮಾಡಿದ್ದು, ಇವುಗಳು ಅಧಿಕೃತ ದಾಖಲೆಗಳಾಗಿ ಉಳಿದುಕೊಂಡಿರುತ್ತವೆ. ಮಾನ್ಯ ಯಡಿಯೂರಪ್ಪನವರು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅವರ ನಾಯಕತ್ವಕ್ಕೆ ಅನುಗುಣವಾಗಿ ಮೇಲಿನ 10 ಪ್ರಶ್ನೆಗಳಿಗೆ ಉತ್ತರಿಸಲು ಕೋರಿದ್ದಾರೆ.

BREAKING: ‘ಒಲಂಪಿಕ್ಸ್’ನಲ್ಲಿ ಬ್ರಿಟನ್ ಮಣಿಸಿ ಭಾರತದ ಹಾಕಿ ತಂಡ ‘ಸೆಮಿಫೈನಲ್’ಗೆ ಲಗ್ಗೆ | Hockey Paris Olympics 2024

BREAKING : ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಭೀಕರ ಅಗ್ನಿ ದುರಂತ : ಸುಟ್ಟು ಕರಕಲಾದ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು!

Share. Facebook Twitter LinkedIn WhatsApp Email

Related Posts

ಉದ್ಯೋಗಸ್ಥರಿಗಾಗಿ ಫುಡ್‌ ಡೆಲಿವರಿ ಮಾಡಲು ‘ಡೆಸ್ಕ್‌ ಈಟ್ಸ್‌’ ಪರಿಚಯಿಸಿದ ‘ಸ್ವಿಗ್ಗಿ’

19/08/2025 4:47 PM2 Mins Read

ಸುಜಾತ ಭಟ್ ಮೃತ ಯುವತಿ ಪೋಟೋ ತೋರಿಸಿದ ಆರೋಪ: ದೂರುದಾರೆಯ ಫಸ್ಟ್ ರಿಯಾಕ್ಷನ್ ಇಲ್ಲಿದೆ

19/08/2025 4:44 PM1 Min Read

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

19/08/2025 4:32 PM1 Min Read
Recent News

‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

19/08/2025 5:12 PM

‘ಪ್ಯಾರಾ ಒಲಂಪಿಕ್’ ಪ್ರತಿಭೆಗಳಿಗೆ ‘ಡೆಲಾಯ್ಟ್ ಇಂಡಿಯಾ’ ಸೌಲಭ್ಯ: ‘ಬಿಲ್ಲಿಗಾರ್ತಿ ಶೀತಲ್ ದೇವಿ’ಯೊಂದಿಗೆ ಸಹಯೋಗ

19/08/2025 4:58 PM

ಕಂಠಪಾಠದ ಯುಗ ಅಂತ್ಯ ; CBSE ಮಹತ್ವದ ನಿರ್ಧಾರ, ಶಾಲೆಗಳಲ್ಲಿ ‘ಓಪನ್-ಬುಕ್ ಪರೀಕ್ಷೆ’

19/08/2025 4:56 PM

ಉದ್ಯೋಗಸ್ಥರಿಗಾಗಿ ಫುಡ್‌ ಡೆಲಿವರಿ ಮಾಡಲು ‘ಡೆಸ್ಕ್‌ ಈಟ್ಸ್‌’ ಪರಿಚಯಿಸಿದ ‘ಸ್ವಿಗ್ಗಿ’

19/08/2025 4:47 PM
State News
KARNATAKA

ಉದ್ಯೋಗಸ್ಥರಿಗಾಗಿ ಫುಡ್‌ ಡೆಲಿವರಿ ಮಾಡಲು ‘ಡೆಸ್ಕ್‌ ಈಟ್ಸ್‌’ ಪರಿಚಯಿಸಿದ ‘ಸ್ವಿಗ್ಗಿ’

By kannadanewsnow0919/08/2025 4:47 PM KARNATAKA 2 Mins Read

ಬೆಂಗಳೂರು: ಭಾರತದ ಪ್ರಮುಖ ಆನ್-ಡಿಮಾಂಡ್ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಲಿಮಿಟೆಡ್, ಐಟಿ ಹಾಗೂ ಇತರೆಡೆ ಕೆಲಸ ಮಾಡುವರಿಗಾಗಿ ಡೆಸ್ಕ್‌ಈಟ್ಸ್‌ ಪ್ರಾರಂಭಿಸುವುದಾಗಿ ಘೋಷಿಸಿದೆ.…

ಸುಜಾತ ಭಟ್ ಮೃತ ಯುವತಿ ಪೋಟೋ ತೋರಿಸಿದ ಆರೋಪ: ದೂರುದಾರೆಯ ಫಸ್ಟ್ ರಿಯಾಕ್ಷನ್ ಇಲ್ಲಿದೆ

19/08/2025 4:44 PM

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

19/08/2025 4:32 PM

BREAKING: ಧರ್ಮಸ್ಥಳ ಕೇಸ್: ‘SIT ತನಿಖೆ’ ಸ್ವಾಗತಿಸಿದ ‘ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ’

19/08/2025 4:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.