ಬೆಂಗಳೂರು: ಕರ್ನಾಟಕದಲ್ಲಿ ಉಳಿದಿರುವ ಏಕೈಕ ರಿಯಲ್ ಲೀಡರ್ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಹೀಗೆ ಕೇಂದ್ರದ ವಿರುದ್ಧ ದ್ವನಿ ಎತ್ತುವ ಏಕೈಕ ಕಾರಣಕ್ಕೆ ಸಿದ್ಧರಾಮಯ್ಯ ಮುಗಿಸಲು ಬಿಜೆಪಿ ಕುತಂತ್ರ ಪಾದಯಾತ್ರೆಯನ್ನು ಮಾಡಲಾಗುತ್ತಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಾದಯಾತ್ರೆ ಮಾಡುತ್ತಿರುವುದು ಯಾಕೆ ಅಂದ್ರೆ ಜೆಡಿಎಸ್ ಬೆಲ್ಟ್ ರಾಮನಗರ, ಮಂಡ್ಯ, ಮೈಸೂರು ಇಲ್ಲಿ ಇರುವಂತ ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಯು ಬುಟ್ಟಿ ಒಳಗಡೆ ಹಾಕಿಕೊಳ್ಳುವುದಾಗಿದೆ. ಇದರೊಂದಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮುಗಿಸುವುದಾಗಿ ಎಂದರು.
ಇದಷ್ಟೇ ಬಿಜೆಪಿಗರ ಉದ್ದೇಶವಲ್ಲ, ಕರ್ನಾಟಕಕ್ಕೆ ಧ್ವನಿ ಎತ್ತಿ ಹೋರಾಟ ಮಾಡುತ್ತಿರುವವರು, ಕರ್ನಾಟಕದ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿರುವಂತ ನಮ್ಮ ಮುಖ್ಯಮಂತ್ರಿಯವರನ್ನು, ಕರ್ನಾಟಕದಲ್ಲಿ ಉಳಿದಿರುವಂತ ಒಬ್ಬ ರಿಯಲ್ ಲೀಡರ್ ಅಂದ್ರೆ ಸಿದ್ಧರಾಮಯ್ಯ ಅವರನ್ನು ಕೆಡವಬೇಕು. ಇದೇ ಉದ್ದೇಶದಿಂದ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ ಎಂಬುದಾಗಿ ಗುಡುಗಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ‘ಡಿಪಿಆರ್’ಗೆ ಕೇಂದ್ರದ ಒಪ್ಪಿಗೆ: ಇಂಧನ ಸಚಿವ ಜಾರ್ಜ್ ಹರ್ಷ
ಸಾಗರ ತಾಲ್ಲೂಕಲ್ಲಿ ‘ಮಳೆಹಾನಿ’: ಅಧಿಕಾರಿಗಳಿಗೆ ಈ ಖಡಕ್ ಸೂಚನೆ ಕೊಟ್ಟ ‘ಶಾಸಕ ಬೇಳೂರು ಗೋಪಾಲಕೃಷ್ಣ’