Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Big News: ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ : ಹಳಿಗಳ ಮೇಲೆ ಮರದ ತುಂಡುಗಳು ಪತ್ತೆ

20/05/2025 11:06 AM

‘ತುಮ್ನೆ ಕಿಯಾ ಹೈ ಶುರು, ಮೋದಿ ಕರೇಗಾ ಖತಮ್’: ಬಿಜೆಪಿಯ ಆಪರೇಷನ್ ಸಿಂಧೂರ್ ಹಾಡು ಬಿಡುಗಡೆ |Watch video

20/05/2025 10:42 AM

Breaking : ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸನ್ ನಿಧನ | M R Srinivasan passes away

20/05/2025 10:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲಿಂಗನಮಕ್ಕಿ ಜಲಾಶಯದಿಂದ 10,000 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ: ಶಾಸಕ ಬೇಳೂರು ಗೋಪಾಲಕೃಷ್ಣ
KARNATAKA

ಲಿಂಗನಮಕ್ಕಿ ಜಲಾಶಯದಿಂದ 10,000 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ: ಶಾಸಕ ಬೇಳೂರು ಗೋಪಾಲಕೃಷ್ಣ

By kannadanewsnow0901/08/2024 8:59 PM

ಶಿವಮೊಗ್ಗ: ಲಿಂಗನಮಕ್ಕೆ ಜಲಾಶಯದಿಂದ 10,000 ಕ್ಯೂಸೆಕ್ಸ್ ನೀರನ್ನು ಶರಾವದಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ನದಿ ತೀರದ ಜನರ ಮುಂಜಾಗ್ರತಾ ಕ್ರಮದಂತೆ ಇಷ್ಟು ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಡ್ಯಾಂನಿಂದ ಐದು ಗೇಟ್ ಗಳ ಮೂಲಕ ಶರಾವತಿ ನದಿಗೆ ಬಿಡುಗಡೆ ಮಾಡಿದ ಬಳಿಕ, ಕಾರ್ಗಲ್ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

10,000 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ

ಈ ವರ್ಷ ಉತ್ತಮ ಮಳೆಯಿಂದಾಗಿ ಲಿಂಗನಮಕ್ಕಿ ಡ್ಯಾಂ ತುಂಬಿದೆ. ಡ್ಯಾಂ ಸಂಪೂರ್ಣ ಭರ್ತಿಯಾಗಲು 6 ಅಡಿ ಮಾತ್ರವೇ ಬಾಕಿ ಇದೆ. ಆದರೇ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಶರಾವತಿ ನದಿಗೆ 10,000 ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಲಿಂಕನಮಕ್ಕಿ ಡ್ಯಾಂ ಐದು ಗೇಟ್ ಓಪನ್ ಮಾಡಿ, ನದಿ ತೀರದ ಜನರ ಸುರಕ್ಷತೆಯ ದೃಷ್ಠಿಯಿಂದ 10,000 ಕ್ಯೂಸೆಕ್ಸ್ ನೀರನ್ನು ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ನೀರು ಮುಂದಿನ ದಿನಗಳಲ್ಲಿ ಬಿಡಗಡೆ ಮಾಡಬಹುದು. ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.

50,000 ಅಥವಾ 1 ಲಕ್ಷ ಕ್ಯೂಸೆಕ್ಸ್ ನೀರನ್ನು ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಂನಿಂದ ಬಿಟ್ಟರೇ ನದಿ ತೀರದ ಹಳ್ಳಿಗಳಲ್ಲಿ ನೆರೆ ಹಾನಿ ಉಂಟಾಗುವ ಸಾಧ್ಯತೆ ಇದೆ. 10 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದರಿಂದ ಶರಾವತಿ ನದಿ ತೀರದ 48 ಕುಟುಂಬಗಳು ನೆರೆಯನ್ನು ಎದುರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ತಾಲ್ಲೂಕು ಆಡಳಿತ ಮಾಡಲಿದೆ. ಈ ಎಲ್ಲಾ ಮುಂಜಾಗ್ರತಾ ಕ್ರಮವಾಗಿಯೇ ನಾವು ಈಗ 10,000 ಕ್ಯೂಸೆಕ್ಸ್ ಮಾತ್ರವೇ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.

ಸಾಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ

ಸಾಗರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ, ಮನೆ ಹಾನಿಗೊಂಡಿದ್ದಾವೆ. ಮಳೆಯಿಂದ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಎಲ್ಲಿ ಎಲ್ಲಿ ರಸ್ತೆ, ಮನೆಗಳು ಹಾನಿಯಾಗಿದ್ದಾವೆ ಎನ್ನುವ ಸರ್ವೇ ಕಾರ್ಯವನ್ನು ಮಾಡಲಾಗುತ್ತಿದೆ. ಹಾನಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕಾಮಗಾರಿಗೆ ಅನುದಾನ ಬಿಡುಗಡೆಗಾಗಿ ಮನವಿ ಮಾಡಲಾಗುತ್ತದೆ ಎಂದರು.

ಮನೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಣೆ

ಸಾಗರ ನಗರದಲ್ಲಿ ನಗರಸಭೆಯಿಂದ ಮಳೆಯಿಂದ ಹಾನಿಗೊಂಡ ಮನೆಗಳಿಗೆ 20,000 ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ. ನಾನು ಕೂಡ ವೈಯಕ್ತಿಕವಾಗಿ ಸಹಾಯ ಮಾಡುತ್ತಿದ್ದೇನೆ. ಪ್ರತಿ ಮನೆಗೆ 1.20 ಲಕ್ಷ ಪರಿಹಾರವನ್ನು ನಿಗದಿ ಪಡಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ಕೊಟ್ತೀವಿ ಅಂತ ಹೇಳಿದ್ರು. ಕೊಟ್ಟಿಲ್ಲ. ನಾವು 1.20 ಸಾವಿರ ಪರಿಹಾರವನ್ನು ಕೊಡುವುದಾಗಿ ಹೇಳಿದರು.

ನಾನು ವಿದೇಶಕ್ಕೆ ಹೋಗಿದ್ದು ಮಜಾ ಮಾಡೋದಕ್ಕಲ್ಲ, ಮಗಳ ಮನೆಗೆ

ನಾನು ವಿದೇಶಕ್ಕೆ ತೆರಳಿದಂತ ಸಂದರ್ಭದಲ್ಲಿಯೇ ಮಳೆ ಹೆಚ್ಚಾಗಿ ಹಾನಿಯಾಗಿವೆ. ಇದನ್ನೇ ಅನೇಕರು ಟೀಕಿಸಿದ್ದಾರೆ. ವಿದೇಶಕ್ಕೆ ಮಜಾ ಮಾಡೋದಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಗೂಂಡಾಗಳು ಅಂತನೂ ಕರೆದಿದ್ದಾರೆ. ಆದರೇ ನಾನು ಮಜಾ ಮಾಡೋದಕ್ಕೆ ಹೋಗಿರಲಿಲ್ಲ. ಮಗಳನ್ನು ನೋಡುವುದಕ್ಕೆ ಹೋಗಿದ್ದೆ. ನಾನು, ಪತ್ನಿ ಹಾಗೂ ಮಗ ಹೋಗಿದ್ವಿ ಎಂಬುದಾಗಿ ಸ್ಪಷ್ಟ ಪಡಿಸಿದರು.

ಪ್ರತಿ ದಿನವೂ ನೆರೆ ಪೀಡಿತ, ಮಳೆಹಾನಿ ಪ್ರದೇಶಗಳಿಗೆ ಭೇಟಿ

ವಿದೇಶದಲ್ಲಿ ಇದ್ದಾಗಲೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆನು. ತಾಲ್ಲೂಕು ಆಡಳಿತದ ಮೂಲಕ ಪರಿಹಾರ ಕಾರ್ಯದ ಕ್ರಮವಹಿಸುವ ಕಾರ್ಯ ಮಾಡಿದ್ದೆನು. ಈಗ ವಾಪಾಸ್ ಆಗಿದ್ದೇನೆ. ಸಾಗರ ಹಾಗೂ ಹೊಸನಗರ ತಾಲ್ಲೂಕಿನ ಪ್ರತಿ ಹೋಬಳಿಕ, ಪ್ರತಿ ಗ್ರಾಮಕ್ಕೆ ಪ್ರತಿ ದಿನವೂ  ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವಂತ ಕೆಲಸ ಮಾಡುವೆ ಎಂದು ತಿಳಿಸಿದರು.

ಸಾಗರ ತಾಲ್ಲೂಕಿನಲ್ಲಿ 100 ಮನೆ ಹಾನಿ

ಭಾರೀ ಮಳೆಯಿಂದಾಗಿ ಸಾಗರ ತಾಲ್ಲೂಕಿನಲ್ಲಿ 100 ಮನೆಗಳು ಹಾನಿಕೊಂಡಿದ್ದಾವೆ. ಸಾಗರ ನಗರದಲ್ಲಿ 60 ಮನೆಗಳು ಬಿದ್ದು ಹೋಗಿದ್ದರೇ, ಗ್ರಾಮಾಂತರ ಭಾಗದಲ್ಲಿ 40 ಮನೆಗಳು ಬಿದ್ದಿದ್ದಾವೆ. ಸದ್ಯಕ್ಕೆ ಅಧಿಕೃತ, ಅನಧಿಕೃತ ಮನೆಗಳಿಗೂ 20,000 ಪರಿಹಾರವನ್ನು ನೀಡಲಾಗುತ್ತಿದೆ. ಸಿಎಂ ಸಿದ್ಧರಾಮಯ್ಯ ಕೂಡ ಅದನ್ನೇ ಸೂಚಿಸಿದ್ದಾರೆ. ನಾವು ನೀಡುತ್ತಿರುವಂತ 1.20 ಸಾವಿರ ಮಳೆಹಾನಿ ಪರಿಹಾರ ಸಾಕಾಗುತ್ತಿಲ್ಲ. 5 ಲಕ್ಷ ನೀಡುವಂತೆಯೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ನಾನು ಸಚಿವ ಸ್ಥಾನಕ್ಕೆ ಬೇಡಿಕೆಯೂ ಇಟ್ಟಿಲ್ಲ, ಒತ್ತಾಯವನ್ನೂ ಮಾಡಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ

ಸಿಎಂಗೆ ನೀಡಿರುವ ಶೋಕಾಸ್ ನೋಟೀಸ್ ಹಿಂಪಡೆಯುವಂತೆ ಸಚಿವ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ: DKS

Share. Facebook Twitter LinkedIn WhatsApp Email

Related Posts

BREAKING : ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ : ಸಚಿವ ಕೆ.ಎನ್. ರಾಜಣ್ಣ ಘೋಷಣೆ.!

20/05/2025 8:46 AM1 Min Read

BIG NEWS : ಬೆಂಗಳೂರಿನ `ವಾಹನ ಸವಾರರೇ’ ಗಮನಿಸಿ : ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತ, ಇಲ್ಲಿದೆ ಪರ್ಯಾಯ ಮಾರ್ಗ.!

20/05/2025 8:42 AM2 Mins Read

BREAKING : ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರಕ್-ಬಸ್ ನಡುವೆ ಡಿಕ್ಕಿಯಾಗಿ ನಾಲ್ವರು ಸಾವು, 17 ಮಂದಿ ಗಂಭೀರ.!

20/05/2025 8:33 AM1 Min Read
Recent News

Big News: ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ : ಹಳಿಗಳ ಮೇಲೆ ಮರದ ತುಂಡುಗಳು ಪತ್ತೆ

20/05/2025 11:06 AM

‘ತುಮ್ನೆ ಕಿಯಾ ಹೈ ಶುರು, ಮೋದಿ ಕರೇಗಾ ಖತಮ್’: ಬಿಜೆಪಿಯ ಆಪರೇಷನ್ ಸಿಂಧೂರ್ ಹಾಡು ಬಿಡುಗಡೆ |Watch video

20/05/2025 10:42 AM

Breaking : ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸನ್ ನಿಧನ | M R Srinivasan passes away

20/05/2025 10:33 AM

ಭದ್ರತಾ ಅನುಮತಿ ರದ್ದತಿ : ಟರ್ಕಿಯ ಸೆಲೆಬಿ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ವಿರೋಧ

20/05/2025 10:28 AM
State News
KARNATAKA

BREAKING : ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ : ಸಚಿವ ಕೆ.ಎನ್. ರಾಜಣ್ಣ ಘೋಷಣೆ.!

By kannadanewsnow5720/05/2025 8:46 AM KARNATAKA 1 Min Read

ಮೈಸೂರು : ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಸಹಕಾರಿ ಕ್ಷೇತ್ರ ಹಾಗೂ ಸಕ್ರಿಯ ರಾಜಕಾರಣದಲ್ಲಿರುವೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

BIG NEWS : ಬೆಂಗಳೂರಿನ `ವಾಹನ ಸವಾರರೇ’ ಗಮನಿಸಿ : ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತ, ಇಲ್ಲಿದೆ ಪರ್ಯಾಯ ಮಾರ್ಗ.!

20/05/2025 8:42 AM

BREAKING : ಮತ್ತೊಂದು ಭೀಕರ ರಸ್ತೆ ಅಪಘಾತ : ಟ್ರಕ್-ಬಸ್ ನಡುವೆ ಡಿಕ್ಕಿಯಾಗಿ ನಾಲ್ವರು ಸಾವು, 17 ಮಂದಿ ಗಂಭೀರ.!

20/05/2025 8:33 AM

SHOCKING : ಧಾರವಾಡದಲ್ಲಿ ಬೈಕ್ ಓಡಿಸುತ್ತಿರುವಾಗಲೇ ‘ಹೃದಯಾಘಾತದಿಂದ’ ವ್ಯಕ್ತಿ ಸಾವು!

20/05/2025 8:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.