ಬೆಂಗಳೂರು : ಶಾಲೆಗಳಲ್ಲಿ ವಿಶಿಷ್ಟ ಕಡ್ಡಾಯ ಆಧಾರ್ ಬಯೋಮೆಟ್ರಿಕ್ ನವೀಕರಣ ಶಿಬಿರಗಳನ್ನು ಹಮ್ಮಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ-2 ರ ಪತ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು DBT ಮೂಲಕ ಪಾವತಿಸಲು, ವಿವಿಧ ಪ್ರವೇಶ ಪರೀಕ್ಷೆಗಳ ಹಾಜರಾತಿಗೆ ಹಾಗೂ ಇನ್ನಿತರ ಸೇವೆಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಉಪಯೋಗಿಸಲಾಗುತ್ತಿದ್ದು, ಆಧಾರ್ ಅನ್ನು ಪೂರ್ಣ ನವೀಕರಣಗೊಳಿಸುವುದು ಸೂಕ್ತ ಎಂದು ತಿಳಿಸಿ, ಕಡ್ಡಾಯ ಆಧಾರ್ ಬಯೋಮೆಟ್ರಿಕ್ ನವೀಕರಿಸುವ ಶಿಬಿರಗಳನ್ನು ಹಮ್ಮಿಕೊಳ್ಳಲು ತಿಳಿಸಲಾಗಿದೆ. ಉಲ್ಲೇಖ-1 ರ ಸಭೆಯಲ್ಲಿ SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ Demographic Authentication ಪ್ರಕ್ರಿಯೆಯನ್ನು ಯಶಸ್ವಿಯಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಪೂರ್ಣಗೊಳಿಸಲು ಇರುವ ತೊಂದರೆಗಳು ಮತ್ತು ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿರುತ್ತದೆ.
ಈ ಹಿನ್ನಲೆಯಲ್ಲಿ ಈ ಕೆಳಗಿನ ಕಾರ್ಯಗಳಿಗೆ ಶಾಲೆಗಳಲ್ಲಿ ಆಧಾರ್ ಕ್ಯಾಂಪ್ಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
1. ಶಾಲೆಗಳಲ್ಲಿ ವಿದ್ಯಾರ್ಥಿಗಳ MBU (Mandatory Bio-metric update) ನವೀಕರಣ
2. ಶಿಭಿರದಲ್ಲಿ ಆಧಾರ್ ಇಲ್ಲದ ವಿದ್ಯಾರ್ಥಿಗಳು UIDAI ನಿರ್ದೇಶನದಂತೆ ಗುರುತಿನ ಮತ್ತು ವಿಳಾಸದ
ಪುರಾವೆಗಳನ್ನು ಸಲ್ಲಿಸುವ ಮೂಲಕ ಶಿಬಿರದಲ್ಲಿ ಆಧಾರಗಾಗಿ ನೋಂದಾಯಿಸಿಕೊಳ್ಳುವುದು.
3. ವಿದ್ಯಾರ್ಥಿಗಳ ಆಧಾರ್ನಲ್ಲಿ ಹೆಸರು ಅಥವಾ ಮಾಹಿತಿಗಳು ತಪ್ಪಿದಲ್ಲಿ UIDAI ಸ್ವೀಕಾರಾರ್ಹ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳುವುದು.
ಈಗಾಗಲೇ ಬೆಂಗಳೂರು ಉತ್ತರ, ಕಾರವಾರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಆಧಾರ್ ಶಿಬಿರಗಳು ಆರಂಭಗೊಂಡಿವೆ. ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಆಧಾರ್ ಶಿಬಿರಗಳನ್ನು ಏರ್ಪಡಿಸುವ ಸಂಬಂಧ, UIDAI/ಆಧಾರ್ ತಂಡದ ಸಂಯೋಜಕರ ಸಂಪರ್ಕ ಮಾಹಿತಿಯನ್ನು ಹಾಗೂ ಅವಶ್ಯಕ ಸೂಚನೆಗಳನ್ನು ಜೂನ್ 4, 2024 ರಂದು ಇಮೇಲ್ ಮೂಲಕ ಎಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಇಮೇಲ್ಗೆ ಕಳುಹಿಸಲಾಗಿದೆ. ಈ ಮಾಹಿತಿಯನ್ನು ಬಳಸಿಕೊಂಡು, ಸಂಬಂಧಿತ ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಆಧಾರ್ ಶಿಬಿರಗಳನ್ನು ಏರ್ಪಡಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ
ಈ ಪ್ರಕ್ರಿಯೆ ಬಗ್ಗೆ ಯಾವುದೇ ಸ್ಪಷ್ಟತೆ ಅಗತ್ಯವಿದ್ದಲ್ಲಿ ಈ ಕಛೇರಿಯ ಸ್ಯಾಟ್ಸ್ ಶಾಖೆಯನ್ನು ಸಂಪರ್ಕಿಸಿ ಅಥವಾ cpisatskarnataka@gmail.com ಗೆ ಇ-ಮೇಲ್ ಮಾಡುವ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿದೆ.