ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಆಟೋ ಚಾಲಕರು, ವೈಟ್ ಬೋರ್ಡ್ ಕಾರುಗಳ ಮಾಲೀಕರು ಅನಧಿಕೃತವಾಗಿ ಬಾಡಿಗೆಗಳನ್ನು ಹೊಡೆಯುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಬೇಕು. ಟ್ಯಾಕ್ಸಿ ಮಾಲೀಕರು, ಚಾಲಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮಲೆನಾಡು ಕಾರು ಚಾಲಕರ ಮತ್ತು ಮಾಲೀಕರ ಸಂಘ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಸಾರಿಗೆ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಅಲ್ಲದೇ ಸಾಗರ ಉಪ ವಿಭಾಗಿಯ ಅಧಿಕಾರಿಗಳಿಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ, ಡಿವೈಎಸ್ಪಿಗೆ ಕೂಡ ಸಂಘದ ಅಧ್ಯಕ್ಷರು, ಸದಸ್ಯರು ಜೊತೆಗೆ ಗೂಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದರು.
ಈ ಬಳಿಕ ಪ್ರೆಸ್ ಕ್ಲಬ್ ಅಸೋಸಿಯೇಷನ್ಸ್ ಆಫ್ ಸಾಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮಲೆನಾಡು ಕಾರು ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪ್ರಾನ್ಸಿಸ್ ಅವರು, ತಾಳಗುಪ್ಪ ವ್ಯಾಪ್ತಿಯ ನಿಲ್ದಾಣದಲ್ಲಿ ಅವರ ಪರಿಮಿತಿ ಮೀರಿ ಆಟೋ ಚಾಲಕರು, ವೈಟ್ ಬೋರ್ಡ್ ಕಾರು ಚಾಲಕರು ಬಾಡಿಗೆ ಮಾಡುತ್ತಿದ್ದಾರೆ. ಇದರಿಂದ ಹಳತಿ ಬೋರ್ಡ್ ಟ್ಯಾಕ್ಸಿ ಚಾಲಕರು, ಮಾಲೀಕರಿಗೆ ಬಾಡಿಗೆ ಸಿಗದೇ ಕಷ್ಟ ಉಂಟಾಗುತ್ತಿದೆ ಎಂಬುದಾಗಿ ಅಳಲು ತೋಡಿಕೊಂಡರು.
ತಾಳಗುಪ್ಪದಿಂದ ಜೋಗದ ಜಲಪಾತ, ನಿಪ್ಲಿ ಫಾಲ್ಸ್, ಸಿಗಂಧೂರಿಗೆ ಆಟೋ, ವೈಟ್ ಬೋರ್ಡ್ ಕಾರುಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ. ಹಳದಿ ಬೋರ್ಡ್ ವಾಹನಗಳಿಗಿಂತ ಕಡಿಮೆ ದರದಲ್ಲಿ ಕರೆದೊಯ್ಯುತ್ತಿರುವುದರಿಂದ ನಮಗೆ ಬಾಡಿಗೆ ಸಿಗೋದು ಕಡಿಮೆಯಾಗಿದೆ. ನಾವು ಬೀದಿಗೆ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ನಿವಾರಿಸುವಂತೆ ಸಾಗರದ ಎಸಿ, ಸಾಗಿರೆ ಇಲಾಖೆಯ ಎಆರ್ ಟಿಸಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಇನ್ನೂ ಮಲೆನಾಡು ಕಾರು ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಸಚ್ಚಿನ್ ಮಾತನಾಡಿ ನಮ್ಮ ಸಂಘ ನೋಂದಣಿಯಾಗಿ ಐದು ವರ್ಷಗಳಾಗಿದೆ. ಅಲ್ಲಿಂದಲೂ ಈ ಸಮಸ್ಯೆ ಇದೆ. ನಾವು ಪೊಲೀಸರಿಗೆ, ಸಾರಿಗೆ ಇಲಾಖೆಗೆ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದ್ರೇ ಈವರೆಗೆ ಸಮಸ್ಯೆ ಬಗೆಹರಿಸಿಲ್ಲ. ಹೀಗೆ ಮುಂದುವರೆದ್ರೆ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಾಳಗುಪ್ಪ ಟ್ಯಾಕ್ಸಿ ಚಾಲಕರು, ಮಾಲೀಕರಿಗೆ ಆಟೋ ಚಾಲಕರಿಂದಲೇ ಹೆಚ್ಚು ಸಮಸ್ಯೆ ಆಗುತ್ತಿದೆ. ಅವರು ತಮ್ಮ ಪರಿಮಿತಿ 10 ಕಿಲೋಮೀಟರ್ ಮೀರಿ ಬಾಡಿಗೆ ಹೊಡೆಯುತ್ತಿದ್ದಾರೆ. ಪ್ರಯಾಣಿಕರಿಗೆ ಒಂದು ವೇಳೆ ಈ ಸಂದರ್ಭದಲ್ಲಿ ಸಮಸ್ಯೆ ಉಂಟಾದ್ರೆ ಇನ್ಸೂರೆನ್ಸ್ ಕೂಡ ಕ್ಲಂ ಆಗೋದಿಲ್ಲ. ಅದನ್ನು ಪ್ರವಾಸಿಗರಾದಂತ ಪ್ರಯಾಣಿಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಒಂದು ವಾರದೊಳೆಗೆ ಆಟೋ ಚಾಲಕರು, ವೈಟ್ ಬೋರ್ಡ್ ಕಾರು ಚಾಲಕರಿಂದ ಆಗುತ್ತಿರುವಂತ ಸಮಸ್ಯೆಯನ್ನು ಪೊಲೀಸ್, ಸಾರಿಗೆ ಇಲಾಖೆಯವರು ಬಗೆ ಹರಿಸಬೇಕು. ಇಲ್ಲವಾದಲ್ಲಿ ನಾವು ಬೀದಿಗೆ ಬರುತ್ತೇವೆ. ರೈತರಂತೆ ನಾವು ಬಾಡಿಗೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ದಯವಿಟ್ಟು ಟ್ಯಾಕ್ಸಿ ಚಾಲಕರು, ಆಟೋ ಚಾಲಕರ ನಡುವೆ ಸಂಘರ್ಷದೊಂದಿಗೆ ಮತ್ತಷ್ಟು ಜಗಳ ಆಗಿ, ಸಮಸ್ಯೆ ಆಗೋ ಮುನ್ನ, ಬಗೆ ಹರಿಸುವಂತೆ ಆಗ್ರಹಿಸಿದರು.
ಇದು ಕೇವಲ ತಾಳಗುಪ್ಪ ವ್ಯಾಪ್ತಿಯ ಟ್ಯಾಕ್ಸಿ ಚಾಲಕರ ಸಮಸ್ಯೆ ಅಲ್ಲ. ರಾಜ್ಯವ್ಯಾಪಿ ಸಮಸ್ಯೆಯಾಗಿದೆ. ರಾಜ್ಯದ ಎಲ್ಲಾ ಟ್ಯಾಕ್ಸಿ ಚಾಲಕರು ಈ ಬಗ್ಗೆ ಧ್ವನಿ ಎತ್ತಬೇಕು. ತಮ್ಮ ಪರಿಮಿತಿ ಮೀರಿ ಬಾಡಿಗೆ ಹೊಡೆಯುತ್ತಿರುವಂತ ಆಟೋ, ವೈಟ್ ಬೋರ್ಡ್ ಕಾರು ಚಾಲಕರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಅಂತ ಒತ್ತಾಯಿಸಿದರು.
ಗೌರವಾಧ್ಯಕ್ಷ ಕರಿಬಸಪ್ಪ ಮಾತನಾಡಿ ಆಟೋಗಳು ಜೋಗದ ಜಲಪಾತ, ಸಿಗಂಧೂರಿಗೆ, ಶಿರಸಿ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಬಾಡಿಗೆ ಹೊಡೆಯುತ್ತಿರುವುದರ ಬಗ್ಗೆ ಎರಡು ವರ್ಷಗಳ ಹಿಂದೆಯೇ ಪೊಲೀಸರು, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದ್ರೇ ಈವರೆಗೆ ಸಮಸ್ಯೆ ನಿವಾರಿಸಿಲ್ಲ. ಈ ದಂಧೆಯಲ್ಲಿ ಪೊಲೀಸರು, ಸಾರಿಗೆ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿದ್ದೀರಾ ಅಂತ ಪ್ರಶ್ನಿಸಿದರು.
ಮಲೆನಾಡು ಕಾರು ಚಾಲಕರ ಮತ್ತು ಮಾಲೀಕರ ಸಂಘದಿಂದ ಸಲ್ಲಿಕೆಯಾದ ಮನವಿ ಪತ್ರದಲ್ಲಿ ಏನಿದೆ?
ಸಾಗರ ತಾಲ್ಲೂಕು, ತಾಳಗುಪ್ಪ ಗ್ರಾಮದ ಪ್ಯಾಸೆಂಜರ್ ಆಟೋ ಮಾಲೀಕರು ಅವರಿಗೆ ಸರ್ಕಾರಕೊಟ್ಟಿರುವ ಪರವಾನಿಗೆ ಮೀರಿ ಪ್ರವಾಸಿ ಸ್ಥಳಗಳಾದ ಜೋಗ ಜಲಪಾತ ನಿಪ್ಪಳಿ ಜಲಪಾತ, ವಡನಬೈಲು ಪದ್ಮಾವತಿ ದೇವಸ್ಥಾನ, ಸಿಗಂಧೂರು, ಶಿರಸಿ, ಸಿದ್ದಾಪುರ, ಮುರುಡೇಶ್ವರ ಇಂತಹ ಸ್ಥಳಗಳಿಗೆ ಟ್ಯಾಕ್ಸಿ ಹೋಗುವ ಜಾಗದಲ್ಲಿ ಆಟೋ ರಿಕ್ಷಾದಲ್ಲಿ ಬಾಡಿಗೆಯನ್ನು ಮಾಡುತ್ತಿದ್ದು ಟ್ಯಾಕ್ಸಿ ಸಂಘಟನೆಯಿಂದ ಕೇಳಲು ಹೋದರೆ ಅನಾವಶ್ಯಕ ಚರ್ಚೆ ಹಾಗೂ ಘರ್ಷಣೆಗಳು ಸಂಭವಿಸುವ ಸಾಧ್ಯತೆಯಿದ್ದು, ಹಾಗೂ ತಾಳಗುಪ್ಪದಲ್ಲಿ ಇರುವಂತಹ ಆಟೋ ಮೇಲೆ ಅಂಟಿಸಬೇಕಾದ ಯಾವುದೇ ತರಹದ ಪರ್ಮಿಟ್ ಚಿಹ್ನೆಗಳು ಇರುವುದಿಲ್ಲ. ಹಾಗೂ ಸರ್ಕಾರದ ಆರ್.ಟಿ.ಒ.ಸಾಗರ ಕಛೇರಿಯಲ್ಲಿ ಇವರಿಗೆ ತಾಳಗುಪ್ಪದ ಪರವಾನಿಗೆಯನ್ನು ಮಾತ್ರ ಹೊಂದಿರುತ್ತಾರೆ. ಆದ್ದರಿಂದ ಅವರು ತಾಳಗುಪ್ಪವ್ಯಾಪ್ತಿಯಲ್ಲಿ ಓಡಾಡುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಸಾಕ್ಷಿಯಾಗಿ ಬಾಡಿಗೆ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ವಿಡಿಯೋಗಳು ನಮ್ಮಲ್ಲಿ ಲಭ್ಯವಿರುತ್ತದೆ.
ನಮ್ಮ ಸಂಸ್ಥೆಯು ಹಳದಿ ಪ್ಲೇಟ್ ವಾಹನವನ್ನು ಹೊಂದಿದ್ದು, ನಾವುಗಳು ವಾಹನ ಚಲಾಯಿಸಿ ಸರ್ಕಾರಕ್ಕೆ ನಿಗಧಿತ ಟ್ಯಾಕ್ಸ್ ಶುಲ್ಕವನ್ನು ಕಟ್ಟಿಕೊಂಡು ಜೀವನ್ನನು ಸಾಗಿರುತ್ತಿರುತ್ತೇವೆ. ಕೋವಿಡ್ ಬಳಿಕ ಹಾಗೂ ಸರ್ಕಾರದ ಇತ್ತೀಚಿನ ನೀತಿ ನಿಯಮಗಳಿಗೆ ಅಪಾರನಷ್ಟವನ್ನು ಅನುಭವಿಸುತ್ತಿದ್ದೇವೆ. ಬಾಡಿಗೆ ಇಲ್ಲದೇ ಸಂಸಾರ ನಡೆಸುವುದಕ್ಕೂ ಕಷ್ಟಕರವಾಗಿರುತ್ತದೆ. ಮಕ್ಕಳ ವಿದ್ಯಾಭ್ಯಾಸ ಕುಟುಂಬದ ಜವಾಬ್ದಾರಿ ಇವುಗಳನ್ನು ನಿರ್ವಹಿಸಲು ಕಷ್ಟಕರವಾಗಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಬಿಳಿ ಜೋರ್ಡಿನ ವಾಹನಗಳು ಬೇಕಾಬಿಟ್ಟಿಯಾಗಿ ಟೂರಿಸ್ಟ್ ಯಾತ್ರಾ ಸ್ಥಳಗಳಿಗೆ ಓಡಾಡುವುದು ಗಣನೀಯವಾಗಿ ಹೆಚ್ಚಾಗಿರುತ್ತದೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರಾಯಗಳು ನಷ್ಟವಾಗುತ್ತಿದೆ. ಟ್ಯಾಕ್ಸ್ ಕಟ್ಟಡ ವಾಹನಗಳನ್ನು ನಿರಾಯಾಸವಾಗಿ ಕಾನೂನಿನ ಹಂಗಿಲ್ಲದೇ ಓಳುತ್ತಿದ್ದಾರೆ, ಅಕ್ಸಿಡೆಂಟ್ಗಳು ಅದಲ್ಲಿ ಸಾರ್ವಜನಿಕರಿಗೆ ವಿಮಾ ಸೌಲಭ್ಯಕೂಡಾ ಸಿಗುತ್ತಿಲ್ಲ.
ಆದ್ದರಿಂದ ತಾವುಗಳು ಈ ಕೂಡಲೇ ಬಿಳಿ ವಾಹನ ಬೋರ್ಡ್ ಹೊಂದಿರುವ ಹಾಗೂ ದಂದೆ ಪಡೆಯುತ್ತಿರುವ ವಾಹನ ಮಾಲೀಕರ ಗಾಡಿಗಳನ್ನು ಸೀಜ್ ಮಾಡಿ ದಂಡವನ್ನು ವಿಧಿಸಿ ಹಳದಿ ಬೋರ್ಡ್ ಹೊಂದಿರುವ ನಮ್ಮಂತಹ ವಾಹನ ಮಾಲೀಕರುಗಳಿಗೆ ಸೂಕ್ತ ಕಾನೂನು ನ್ಯಾಯ ದೊರಕಿಸಿಕೊಡಬೇಕಾಗಿ ತನ್ನಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಹಾಗೂ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ನಾವುಗಳು ತಮ್ಮ ಕಛೇರಿಯ ಮುಂದೆ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು