ಬೆಂಗಳೂರು : ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಸಣ್ಣ ತಪ್ಪು, ಅವ್ಯವಹಾರ ಮಾಡದೆ ಪ್ರಾಮಾಣಿಕವಾಗಿ ಮುನ್ನಡೆಯುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ʻಮುಡಾʼ ಹಗರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಕುಟುಂಬದ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡು ನಿವೇಶನ, ರಸ್ತೆ, ಪಾರ್ಕ್ ಮಾಡಿ ಹಂಚಿದವರು ಮುಡಾದವರು, ತಮ್ಮಿಂದ ತಪ್ಪಾಗಿದೆ ಎಂದು ಮುಡಾ ಒಪ್ಪಿಕೊಂಡಿರುವುದಕ್ಕೆ ದಾಖಲೆಗಳಿದೆ. ನಮ್ಮ ಜಮೀನಿಗೆ ಬದಲಿ ಜಮೀನು ನೀಡಿ ಎಂದು ಮನವಿ ಮಾಡಿದ್ದೇವೆಯೇ ವಿನಃ ವಿಜಯನಗರದಲ್ಲೇ ಕೊಡಿ ಎಂದು ಕೇಳಿಲ್ಲ. ಎಲ್ಲಿ ಜಮೀನು ಕೊಡಬೇಕು ಎಂಬ ನಿರ್ಣಯ ಕೈಗೊಂಡವರು ಮುಡಾದವರು. ಇದರಲ್ಲಿ ನಮ್ಮ ತಪ್ಪೇನಿದೆ? ಎಂದು ಪ್ರಶ್ನೆಸಿದ್ದಾರೆ.
ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಸಣ್ಣ ತಪ್ಪು, ಅವ್ಯವಹಾರ ಮಾಡದೆ ಪ್ರಾಮಾಣಿಕವಾಗಿ ಮುನ್ನಡೆಯುತ್ತಿದ್ದೇನೆ. ಇದರಿಂದ ಹತಾಶಗೊಂಡಿರುವ ವಿಪಕ್ಷಗಳು ನನ್ನ ಕುಟುಂಬದವರು ಕಾನೂನು ಬದ್ಧವಾಗಿ ಜಮೀನು ಖರೀದಿಸಿದ್ದನ್ನು ಅಕ್ರಮ ಎಂದು ಅಪಪ್ರಚಾರ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.