ಬೆಂಗಳೂರು : ಜನರ ಜೇಬಿಗೆ ಕನ್ನ ಹಾಕುವುದೇ ಕಾಂಗ್ರೆಸ್ ಸರ್ಕಾರದ ಆಡಳಿತದ ಧ್ಯೇಯ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಈಗಾಗಲೇ ಹಾಲು-ತರಕಾರಿ-ದಿನಸಿ ಬೆಲೆಯೇರಿಸಿರುವ ಕಾಂಗ್ರೆಸ್ ಸರ್ಕಾರ, ಈಗ ಬಸ್ ಪ್ರಯಾಣದ ದರವನ್ನು ಶೇ.15 ರಿಂದ 20ರಷ್ಟನ್ನು ಹೆಚ್ಚಿಸಲು ಚಿಂತಿಸಿರುವುದು ಕನ್ನಡಿಗರಿಗೆ ಬೆಲೆಯೇರಿಕೆಯ ಗಾಯದ ಮೇಲೆ ಬರೆ ಎಳೆಯುವುದಕ್ಕೆ ಸಮ. ಜನ ವಿರೋಧಿ ಸಿಎಂ ಸಿದ್ದರಾಮಯ್ಯನವರೇ, ಜನಾಕ್ರೋಶದ ನಡುವೆಯೂ ಬಸ್ ದರವನ್ನು ಹೆಚ್ಚಿಸಿದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.