Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಮತ್ತೆ ದಾಳಿ : 50ಕ್ಕೂ ಹೆಚ್ಚು ಡ್ರೋನ್ ಧ್ವಂಸಗೊಳಿಸಿದ ಭಾರತ | Watch Video

10/05/2025 9:23 PM

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

10/05/2025 9:02 PM

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಡೆಂಗ್ಯೂ ಪರೀಕ್ಷೆ’ಗೆ ಹೆಚ್ಚುವರಿ ಹಣ ವಸೂಲಿ: ಬೆಂಗಳೂರಲ್ಲಿ ’22 ಲ್ಯಾಬ್’ಗಳಿಗೆ ‘ಆರೋಗ್ಯ ಇಲಾಖೆ’ ನೋಟಿಸ್
KARNATAKA

‘ಡೆಂಗ್ಯೂ ಪರೀಕ್ಷೆ’ಗೆ ಹೆಚ್ಚುವರಿ ಹಣ ವಸೂಲಿ: ಬೆಂಗಳೂರಲ್ಲಿ ’22 ಲ್ಯಾಬ್’ಗಳಿಗೆ ‘ಆರೋಗ್ಯ ಇಲಾಖೆ’ ನೋಟಿಸ್

By kannadanewsnow0911/07/2024 9:43 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಡೆಂಗ್ಯೂ ಪತ್ತೆ ಪರೀಕ್ಷೆಗೆ ದರವನ್ನು ನಿಗದಿ ಪಡಿಸಲಾಗಿದೆ. ಹೀಗಿದ್ದರೂ ಕೆಲ ಲ್ಯಾಬ್ ಗಳು ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದ್ದವು. ಇಂತಹ ಲ್ಯಾಬ್ ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, 22 ಲ್ಯಾಬ್ ಗಳಿಗೆ ನೋಟಿಸ್ ನೀಡಿ, ಶಾಕ್ ನೀಡಿದ್ದಾರೆ.

ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಡೆಂಗ್ಯೂ ಚಿಕಿತ್ಸೆಗಾಗಿ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ದರವನ್ನು ಪಡೆಯುತ್ತಿದ್ದಾರೆಂದು ಮಾಧ್ಯಮದಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಇಂದು ದಿನಾಂಕ: 11/7/2024 ಕೆ.ಪಿ.ಎಂ.ಇ ನೋಡಲ್ ಅಧಿಕಾರಿಗಳ ತಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಹಾಗೂ ಆನೇಕಲ್ ತಾಲ್ಲೂಕು ರವರು ತಮ್ಮ ವ್ಯಾಪ್ತಿಯಲ್ಲಿನ 31 ಖಾಸಗಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದರು.

ವಿವಿಧ ಆಸ್ಪತ್ರೆ ಹಾಗೂ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಲಾಗಿ ಇದರಲ್ಲಿ 22 ಲ್ಯಾಬ್‌ನಲ್ಲಿ ಸರ್ಕಾರ ನಿಗಧಿ ಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆದತಂಹ ಲ್ಯಾಬ್ ಗಳಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ಹಾಗೂ ಕೆಪಿಎಂಇ ಅಧಿನಿಯಮದಂತೆ ನೋಟಿಸ್ ನೀಡಲಾಗಿದೆ ಹಾಗೂ ಸದರಿ ಕೇಂದ್ರಗಳಿಗೆ ಕಾಯ್ದೆಯಡಿ ಸೂಕ್ತಕ್ರಮ ಕೈಗೊಳಲಾಗುತ್ತದೆ.

ಸರ್ಕಾರ ನಿಗಧಿ ಪಡಿಸಿದ ಚಿಕಿತ್ಸಾ ದರ ಈ ಕೆಳಕಂಡಂತಿರುತ್ತದೆ. ಪರಿಷ್ಕೃತ ದರ ರೂ.ಗಳಲ್ಲಿ .300/- ಕ್ರಸಂ ಪರೀಕ್ಷಾ ವಿಧಾನ 1 Dengue ELISA NS1 2 Dengue ELISA IgM B.300/- 3 Screening Test Rapid 0.250/- card test for NS1, IgM & IgG ಇದಕ್ಕಿಂತ ಹೆಚ್ಚಾಗಿ ಪರೀಕ್ಷಾ ಕೇಂದ್ರಗಳು ವಸೂಲಿ ಮಾಡಿದಲ್ಲಿ ಈ ಕೆಳಕಂಡ ಕಾರ್ಯಲಯಕ್ಕೆ ದೂರು ಸಲ್ಲಿಸಬಹುದಾಗಿದೆ.

ಕಛೇರಿ ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಹಳೆ ಕ್ಷಯರೋಗಿಗಳ ಆಸ್ಪತ್ರೆ ಆವರಣ, ಹಳೇ ಮದ್ರಾಸ್ ರಸ್ತೆ, ಇ-ಮೆಲ್ ಇಂದಿರಾನಗರ, ಬೆಂಗಳೂರು, 38. : dhobangaloreurban@gmail.com 30: 9449843037.

ಹೀಗಿದೆ ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಿದ 22 ಲ್ಯಾಬ್ ಗಳ ಪಟ್ಟಿ

  1. ಪ್ರೈಮ್ ಡಯಾಗ್ನೋಸ್ಟಿಕ್ಸ್, ಯಲಹಂಕ
  2. ಆಸ್ಟರ್ ಕ್ಲಿನಿಕ್, ಯಲಹಂಕ
  3. ಶ್ರೀ ರಾಘವ್ ಕ್ಲಿನಿಕ್, ದೊಡ್ಡಬೊಮ್ಮಸಂದ್ರ
  4. ಸಿಗ್ಮಾ ಡಯಾಗ್ನಿಸ್ಟಿಕ್ಸ್, ಯಲಹಂಕ
  5. ಆರ್.ಲಾಲ್ ಪಥ್ ಲ್ಯಾಬ್ಸ್, ಅಲೆನ್ ಕ್ಯಾರಿಯರ್ ಇನ್ಸ್ಟಿಟ್ಯೂಟ್ ಬಳಿ, ವೈಟ್ ಫೀಲ್ಡ್.
  6. ಹೊರಮಾವು ಮುಖ್ಯರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಟ್ರಸ್ಟ್
  7. ಎಸ್ ಜೆಪಿ ಆಸ್ಪತ್ರೆ, ಕಲ್ಕೆರೆ ಮುಖ್ಯರಸ್ತೆ, ಹೊರಮಾವು.
  8. ಮೆಡಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್, ಹೊರಮಾವು ಮುಖ್ಯ ರಸ್ತೆ
  9. ಟಿಕೆಎಸ್ ಡಯಾಗ್ನೋಸ್ಟಿಕ್ ಸೆಂಟರ್, ಹೊಸೂರು ರಸ್ತೆ
  10. ವಿನೋದ ಡಯಾಗ್ನೋಸ್ಟಿಕ್ಸ್
  11. ಮಹೇಶ ಹೆಲ್ತ್ ಕೇರ್, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ
  12. ಕ್ರಿಯಾ ಆಸ್ಪತ್ರೆ, ಜೆ.ಪಿ.ನಗರ.
  13. ಸ್ಪ್ರಿಂಗ್ ಲೈಫ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಎಲೆಕ್ಟ್ರಾನಿಕ್ ಸಿಟಿ
  14. ಇ-ಸಿಟಿ ಆಸ್ಪತ್ರೆಗಳು, ಎಲೆಕ್ಟ್ರಾನಿಕ್ ಸಿಟಿ
  15. ಬಯೋ ಲೈನ್ ಲ್ಯಾಬೊರೇಟರ್ಸ್, ಜಯನಗರ
  16. ಆಂಕ್ವೆಸ್ಟ್, ಜಯನಗರ
  17. ಪ್ರಣವ್ ಡಯಾಗ್ನೋಸ್ಟಿಕ್ಸ್ ಕಮ್ಮನಹಳ್ಳಿ
  18. ಬಾಲಾಜಿ ಲ್ಯಾಬ್ ಡಯಾಗ್ನೋಸ್ಟಿಕ್, ಬಾಗಲೂರು
  19. ಎಸ್ ಎಲ್ ವಿ ಡಯಾಗ್ನೋಸ್ಟಿಕ್, ಬಾಗಲೂರು
  20. ಅಲ್ಟಿಯಸ್ ಆಸ್ಪತ್ರೆ, ನಾಗವಾರ ಮುಖ್ಯ ರಸ್ತೆ
  21. ಕಾರ್ಟುಲಸ್ ಡಯಾಗ್ನೋಸ್ಟಿಕ್ಸ್, ನಾಗವಾರ ಮುಖ್ಯ ರಸ್ತೆ
  22. ಈಶಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಮ್ಮನಹಳ್ಳಿ

ಅಂದಹಾಗೇ ಡೆಂಗ್ಯೂ ಎಲಿಸಾ ಎನ್ ಎಸ್1 ಪರೀಕ್ಷೆಗೆ ರೂ.300 ನಿಗದಿ ಪಡಿಸಲಾಗಿದೆ. ಡೆಂಗ್ಯೂ ಎಲಿಸಾ ಐಜಿಎಂ ಪರೀಕ್ಷೆಗೆ ರೂ.300, ಸ್ಕ್ರೀನಿಂಗ್ ಟೆಸ್ಟ್, ರಾಪಿಡ್ ಕಾರ್ಡ್ ಟೆಸ್ಟ್ ಫಾರ್ ಎನ್ಎಸ್1, ಐಜಿಎಂ ಮತ್ತು ಐಜಿಜಿ ಪರೀಕ್ಷೆಗೆ ರೂ.250 ಅನ್ನು ರಾಜ್ಯ ಸರ್ಕಾರ ನಿಗದಿ ಪಡಿಸಿದೆ. ಇದಕ್ಕಿಂತ ಹೆಚ್ಚು ಹಣವನ್ನು ಲ್ಯಾಬ್ ಗಳು ವಸೂಲಿ ಮಾಡಿದ್ರೆ 9449843037ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ

BIG NEWS: ರಾಜ್ಯಾಧ್ಯಂತ ‘ಲೋಕಾಯುಕ್ತ’ದಿಂದ 11 ಭ್ರಷ್ಟರ ಬೇಟೆ: ಸಿಕ್ಕ ಅಸಮತೋಲನ ಆಸ್ತಿ ಎಷ್ಟು ಗೊತ್ತಾ?

BREAKING : ‘CISF, BSF, RPF’ನಲ್ಲಿ ‘ಮಾಜಿ ಅಗ್ನಿವೀರರಿಗೆ’ ‘10% ಮೀಸಲಾತಿ’, ವಯಸ್ಸಿನ ಮಿತಿ ಸಡಿಲಿಕೆ’ : ಕೇಂದ್ರ ಸರ್ಕಾರ ಮಹತ್ವದ ಆದೇಶ

Share. Facebook Twitter LinkedIn WhatsApp Email

Related Posts

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

10/05/2025 9:02 PM1 Min Read

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM1 Min Read

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM2 Mins Read
Recent News

BREAKING : ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಮತ್ತೆ ದಾಳಿ : 50ಕ್ಕೂ ಹೆಚ್ಚು ಡ್ರೋನ್ ಧ್ವಂಸಗೊಳಿಸಿದ ಭಾರತ | Watch Video

10/05/2025 9:23 PM

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

10/05/2025 9:02 PM

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM

BREAKING: ತನ್ನ ವಾಯುಪ್ರದೇಶ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಪಾಕಿಸ್ತಾನ ಘೋಷಣೆ | India-Pakistan ceasefire

10/05/2025 8:04 PM
State News
KARNATAKA

BREAKING : ಕದನ ವಿರಾಮ ಘೋಷಣೆಯಾದರು, ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ : CM ಸಿದ್ದರಾಮಯ್ಯ

By kannadanewsnow0510/05/2025 9:02 PM KARNATAKA 1 Min Read

ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದ್ದು, ಇದೀಗ ಇಂದು ಸಂಜೆ 5 ಗಂಟೆಗೆ ಭಾರತ ಮತ್ತು…

BIG NEWS : ಮೇ 12 ರಂದು ‘ಬುದ್ಧ ಪೂರ್ಣಿಮ’ ಹಿನ್ನೆಲೆ, ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

10/05/2025 8:26 PM

BREAKING: ಆಪರೇಷನ್ ಸಿಂಧೂರ್: ಎಲ್ಲಾ ಜಿಲ್ಲೆಗಳಲ್ಲಿ ಸಹಾಯ ಕೇಂದ್ರ ತೆರೆದು, ಸಹಾಯವಾಣಿ ಆರಂಭಿಸಿ- ಸಿಎಂ ಸಿದ್ಧರಾಮಯ್ಯ

10/05/2025 5:44 PM

BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಮಾಕ್ ಡ್ರಿಲ್’ ನಡೆಸಿ : ಅಧಿಕಾರಿಗಳಿಗೆ CM ಸಿದ್ದರಾಮಯ್ಯ ಸೂಚನೆ

10/05/2025 5:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.