Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪತಿಯನ್ನು `ನಪುಂಸಕ’ ಎಂದು ಕರೆಯುವುದು ಮಾನನಷ್ಟವಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

02/08/2025 9:24 AM

ಯುಕೆ ಸಂಸದೀಯ ವರದಿಯಲ್ಲಿ ‘ಆಧಾರರಹಿತ ಆರೋಪಗಳನ್ನು’ ತಿರಸ್ಕರಿಸಿದ ಭಾರತ

02/08/2025 9:18 AM

ಇಸ್ಲಾಮಿಕ್ ಸಂಘಟನೆಯಿಂದ ಭಾರತೀಯ ಪ್ರದೇಶಗಳೊಂದಿಗೆ ‘ಗ್ರೇಟರ್ ಬಾಂಗ್ಲಾದೇಶ್’ ನಕ್ಷೆ ಬಿಡುಗಡೆ ? ಇಲ್ಲಿದೆ ಸತ್ಯ ಸಂಗತಿ

02/08/2025 9:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ, ವಾಲ್ಮೀಕಿ ನಿಗಮದ ಹಗರಣ CBI ತನಿಖೆಗೆ ಸಿ.ಟಿ.ರವಿ ಆಗ್ರಹ
KARNATAKA

ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ, ವಾಲ್ಮೀಕಿ ನಿಗಮದ ಹಗರಣ CBI ತನಿಖೆಗೆ ಸಿ.ಟಿ.ರವಿ ಆಗ್ರಹ

By kannadanewsnow0928/06/2024 4:14 PM

ಬೆಂಗಳೂರು: ಬಹುರಾಜ್ಯಗಳಿಗೆ ವಿಸ್ತರಿಸಿರುವ ಬೃಹತ್ ಮೊತ್ತದ ವಾಲ್ಮೀಕಿ ನಿಗಮದ ಹಗರಣದ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಹಾಗೂ ಇದರ ತನಿಖೆಯನ್ನು ಸಿಬಿಐ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಗ್ರಹಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಇಲಾಖೆ ವ್ಯಾಪ್ತಿಯಲ್ಲಿ ನಡೆದ ಬಹುದೊಡ್ಡ ಹಗರಣ ಇದಾಗಿದೆ. 100ಕ್ಕೆ ನೂರರಷ್ಟು ಹಣ ವರ್ಗಾಯಿಸಿ ಲೂಟಿ ಮಾಡಿದ ಹಗರಣ. ಈ ಹಗರಣದಲ್ಲಿ ಸಿಎಂ ನೈತಿಕತೆ ಪ್ರಶ್ನೆ ಬರುವ ಕಾರಣ ಹೊಣೆ ಹೊರಲು ಕೇಳಿದ್ದೆವು. ಆದರೆ, ಅವರು ವಿಷಯಾಂತರ ಮಾಡುತ್ತಾರೆ ಎಂದು ಆಕ್ಷೇಪಿಸಿದರು. ಈ ಸಂಬಂಧ ಇವತ್ತು ಚಳವಳಿ ನಡೆಸಿ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದೇವೆ ಎಂದರು.

ಸರಕಾರದ ತನಿಖೆಯ ಬಗ್ಗೆ ನಮಗೆ ಸಂಶಯ ಇದೆ. ಇದು ಬಹುರಾಜ್ಯಗಳಿಗೆ ಸಂಬಂಧಿಸಿದ ಹಗರಣ. ಆಪಾದಿತರು ಆಂಧ್ರ, ತೆಲಂಗಾಣಕ್ಕೂ ಸೇರಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯವು ಸಿಬಿಐ ತನಿಖೆ ಕೋರಿ ಪತ್ರ ಬರೆದಿದೆ. ಆದರೂ, ಕರ್ನಾಟಕ ಸರಕಾರ ಸಿಬಿಐ ತನಿಖೆಗೆ ಇದನ್ನು ಅಧಿಕೃತವಾಗಿ ವಹಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

ನಾಗೇಂದ್ರರ ಸಂಬಂಧಿ, ಸಿರಗುಪ್ಪದ ಅಭ್ಯರ್ಥಿಯಾಗಿದ್ದ ಮುರಳಿ ಪಾತ್ರ ಏನು ಎಂದು ತನಿಖೆಗೆ ಆಗ್ರಹಿಸಿದರು. ನಿಗಮಗಳ ಕಾಮಗಾರಿಯಲ್ಲೂ ನೆಕ್ಕುಂಟಿ ನಾಗರಾಜ್ ಪಾತ್ರ ಇದೆ, ಲೂಟಿಯಾಗಿದೆ ಎಂದು ಆರೋಪಿಸಿದ ಅವರು, ನೆಕ್ಕುಂಟಿ ನಾಗರಾಜ್ ಮಾವ ಅರ್ಹತೆ ಇಲ್ಲದಿದ್ದರೂ ಹಾಸ್ಟೆಲ್ ಆಹಾರ ಸರಬರಾಜಿಗೆ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿದರು.

ನಾಗೇಂದ್ರ ಅವರನ್ನು ರಕ್ಷಿಸಲು ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು. ನಾಗೇಂದ್ರ ಅವರನ್ನು ಮುಟ್ಟಿದರೆ ಅವರು ಯಾರ್ಯಾರಿಗೆ ಹಣ ಕೊಟ್ಟಿದ್ದಾಗಿ ಬಾಯಿ ಬಿಡುವ ಭಯದಿಂದ ಅವರ ರಕ್ಷಣೆಗೆ ಸರಕಾರ ಹೊರಟಿದೆ ಎಂದು ಅನುಮಾನ ವ್ಯಕ್ತಪಡಿಸಿದರು. 11 ಜನರ ಬಂಧನವಾಗಿದ್ದು, ಜಪ್ತಾದ ಹಣ 14.07 ಕೋಟಿ ಮಾತ್ರ. ಬಾಕಿ ಹಣ ಎಲ್ಲಿ ಹೋಗಿದೆ? ಇತರ ಯಾರ್ಯಾರ ಖಾತೆಗೆ ಹಣ ಹೋಗಿದೆ? ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಉಳಿಕೆ ಹಣ ಯಾಕೆ ಜಪ್ತಿ ಮಾಡಿಲ್ಲ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

700ಕ್ಕೂ ಹೆಚ್ಚು ಖಾತೆಗೆ ಹಣ ಹೋಗಿತ್ತು. ಅಲ್ಲಿಂದ ಡ್ರಾ ಮಾಡಿ ಎಲ್ಲಿಗೆ ಹೋಗಿದೆ? ಅದರ ಮೂಲವನ್ನು ಪತ್ತೆ ಮಾಡುವ ಕೆಲಸ ಆಗಬೇಕು ಎಂದ ಅವರು, ಛತ್ತೀಸಗಡ, ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿ ನಾಲ್ಕೈದು ರಾಜ್ಯಗಳ ನಂಟು ಇರುವ ಕಾರಣ ಸಮಗ್ರ ಮಾಹಿತಿಯ ಜೊತೆಗೆ ಸಿಬಿಐಗೆ ಈ ಕೇಸನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಅವರು ಉಪಸ್ಥಿತರಿದ್ದರು.

ಹಾವೇರಿ ಅಪಘಾತ ಪ್ರಕರಣ :ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಗಮನಿಸಿ: ಸೆ.15ರವರಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ

Share. Facebook Twitter LinkedIn WhatsApp Email

Related Posts

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : `CCB’ಯಿಂದ ಮೂವರು ಆರೋಪಿಗಳು ಅರೆಸ್ಟ್.!

02/08/2025 9:05 AM1 Min Read

BIG NEWS : `ಮದ್ಯಪಾನ’ ಮಾಡಿ ಅಪಘಾತವಾದರೆ ವಿಮೆ ಪರಿಹಾರ ಬೇಡ : ಕಾಯ್ದೆ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಆದೇಶ.!

02/08/2025 8:46 AM2 Mins Read

ಸಾರ್ವಜನಿಕರೇ ಗಮನಿಸಿ : ನಾಯಿಗಳು ನಿಮ್ಮನ್ನು ಕಚ್ಚಲು ಬಂದ್ರೆ ಜಸ್ಟ್ ಈ 5 ಸಲಹೆಗಳನ್ನು ತಪ್ಪದೇ ಪಾಲಿಸಿ.!

02/08/2025 8:40 AM2 Mins Read
Recent News

BIG NEWS : ಪತಿಯನ್ನು `ನಪುಂಸಕ’ ಎಂದು ಕರೆಯುವುದು ಮಾನನಷ್ಟವಲ್ಲ : ಹೈಕೋರ್ಟ್ ಮಹತ್ವದ ತೀರ್ಪು.!

02/08/2025 9:24 AM

ಯುಕೆ ಸಂಸದೀಯ ವರದಿಯಲ್ಲಿ ‘ಆಧಾರರಹಿತ ಆರೋಪಗಳನ್ನು’ ತಿರಸ್ಕರಿಸಿದ ಭಾರತ

02/08/2025 9:18 AM

ಇಸ್ಲಾಮಿಕ್ ಸಂಘಟನೆಯಿಂದ ಭಾರತೀಯ ಪ್ರದೇಶಗಳೊಂದಿಗೆ ‘ಗ್ರೇಟರ್ ಬಾಂಗ್ಲಾದೇಶ್’ ನಕ್ಷೆ ಬಿಡುಗಡೆ ? ಇಲ್ಲಿದೆ ಸತ್ಯ ಸಂಗತಿ

02/08/2025 9:08 AM

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : `CCB’ಯಿಂದ ಮೂವರು ಆರೋಪಿಗಳು ಅರೆಸ್ಟ್.!

02/08/2025 9:05 AM
State News
KARNATAKA

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್ : `CCB’ಯಿಂದ ಮೂವರು ಆರೋಪಿಗಳು ಅರೆಸ್ಟ್.!

By kannadanewsnow5702/08/2025 9:05 AM KARNATAKA 1 Min Read

ಬೆಂಗಳೂರು : ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಮಾಡಿದ್ದ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ…

BIG NEWS : `ಮದ್ಯಪಾನ’ ಮಾಡಿ ಅಪಘಾತವಾದರೆ ವಿಮೆ ಪರಿಹಾರ ಬೇಡ : ಕಾಯ್ದೆ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಆದೇಶ.!

02/08/2025 8:46 AM

ಸಾರ್ವಜನಿಕರೇ ಗಮನಿಸಿ : ನಾಯಿಗಳು ನಿಮ್ಮನ್ನು ಕಚ್ಚಲು ಬಂದ್ರೆ ಜಸ್ಟ್ ಈ 5 ಸಲಹೆಗಳನ್ನು ತಪ್ಪದೇ ಪಾಲಿಸಿ.!

02/08/2025 8:40 AM

BREAKING : `PSI’ ಹುದ್ದೆಗೆ ಆಯ್ಕೆಯಾದವರಿಗೆ ಗುಡ್ ನ್ಯೂಸ್ : ವಾರದೊಳಗೆ `ನೇಮಕಾತಿ’ ಆದೇಶ.!

02/08/2025 8:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.