ಬೆಂಗಳೂರು: ತಂತ್ರ-ಕುತಂತ್ರ ರಾಜಕಾರಣಿ, ಸಿಎಂ ಸಿದ್ದರಾಮಯ್ಯ ಹೇಳುವುದು ಒಂದು, ಮಾಡುವುದ ಮತ್ತೊಂದು ಅಂತ ನಟ ಚೇತನ್ ಅಹಿಂಸ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಮತದಾರರಿಗೆ ಭರವಸೆ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆಟ್ರೋಲ್ ತೆರಿಗೆಯನ್ನು ಶೇಕಡಾ 29.84 ರಷ್ಟು ಮತ್ತು ಡೀಸೆಲ್ ತೆರಿಗೆಯನ್ನು ಶೇಕಡಾ 18.44 ರಷ್ಟು ಹೆಚ್ಚಿಸಿದ್ದಾರೆ. ಇದು ರಾಜ್ಯ ಸರ್ಕಾರವು ತನ್ನ ಯೋಜಿತವಲ್ಲದ, ತ್ಯಾಪೆ ಹಚ್ಚೋ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ಮಾಡಿದ ಹಿಂಬಾಗಿಲ ಕಳ್ಳತನವಾಗಿದೆ ಅಂತ ಕಿಡಿಕಾರಿದ್ದಾರೆ.