Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಾಯಗಳಿಲ್ಲದಿದ್ದರೂ ನ್ಯಾಯ ಸಿಗಲೇಬೇಕು: ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಪರಿಹಾರ ನೀಡಲು ಹೈಕೋರ್ಟ್ ಮಹತ್ವದ ಆದೇಶ!

17/01/2026 8:29 AM

BREAKING : `ಇರಾನ್‌’ ನಿಂದ ದೆಹಲಿಗೆ ಆಗಮಿಸಿದ ಭಾರತೀಯ ನಾಗರಿಕರ ಮೊದಲ ಬ್ಯಾಚ್  |WATCH VIDEO

17/01/2026 8:25 AM

BREAKING: ಬಿಜೆಪಿಗೆ ಹೊಸ ಸಾರಥಿ: ಜನವರಿ 20 ರಂದು ನೂತನ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಘೋಷಣೆ!

17/01/2026 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಖಾಸಗಿ ಶಾಲೆಗಳು ‘RTE’ ಅಡಿ ಮಾನ್ಯತೆ ಪಡೆಯುವುದು ಕಡ್ಡಾಯ : ರಾಜ್ಯ ಸರ್ಕಾರ ಮಹತ್ವದ ಆದೇಶ
KARNATAKA

BIG NEWS : ಖಾಸಗಿ ಶಾಲೆಗಳು ‘RTE’ ಅಡಿ ಮಾನ್ಯತೆ ಪಡೆಯುವುದು ಕಡ್ಡಾಯ : ರಾಜ್ಯ ಸರ್ಕಾರ ಮಹತ್ವದ ಆದೇಶ

By kannadanewsnow5731/05/2024 10:15 AM

ಬೆಂಗಳೂರು : ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2009 ಮತ್ತು ಕಾಯ್ದೆಯಡಿ ರೂಪಿಸಲಾದ ನಿಯಮಗಳು-2012 ರಡಿ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು (ಇತರೆ ಪಠ್ಯಕ್ರಮ ಒಳಗೊಂಡ ಶಾಲೆಗಳು) ಮಾನ್ಯತೆಯನ್ನು ಪಡೆಯುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಶಿಕ್ಷಣ ಹಕ್ಕು ಕಾಯ್ದೆ-2009 ರ ಸೆಕ್ಷನ್-18ರ ಅಡಿಯಲ್ಲಿ ಎಲ್ಲಾ ಖಾಸಗಿ ಅನುದಾನಿತ ಮತ್ತು ಎಲ್ಲಾ ಪಠ್ಯಕ್ರಮದ ಖಾಸಗಿ ಅನುದಾನರಹಿತ ಶಾಲೆಗಳು ನಿಗದಿಪಡಿಸಿರುವ ಮಾನದಂಡಗಳನ್ನು ಅನುಪಾಲಿಸಿ, ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-11 ರಂತೆ ನಿಗದಿಪಡಿಸಿರುವ ನಮೂನೆ-1 (Form-1)ರಲ್ಲಿ ಸ್ವಯಂ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಿ, ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ರೀತಿ ಪಡೆದ ಮಾನ್ಯತೆಯ ಅವಧಿಯು 05 ವರ್ಷಗಳಾಗಿರುತ್ತದೆ. ಯಾವುದೇ ಶಾಲೆಯು ನಿಗದಿಪಡಿಸಿರುವ ಮಾನದಂಡಗಳನ್ನು ಅಥವಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ (ಕೇಂದ್ರ ಪಠ್ಯಕ್ರಮ ಮಂಡಳಿ ಅಫಿಲೇಷನ್ ನೀಡಿ ಕಾಲಕಾಲಕ್ಕೆ ನವೀಕರಿಸಿಕೊಂಡಿದಾಗ್ಯೂ) ಅಂತಹ ಶಾಲೆಯ ಮಾನ್ಯತೆಯನ್ನು ಹಿಂಪಡೆಯುವ ಕ್ರಮದ ಬಗ್ಗೆ ಸೆಕ್ಷನ್-18(3) ಮತ್ತು ನಿಯಮ-12 ರಲ್ಲಿ ಸ್ಪಷ್ಟ ನಿರ್ದೇಶನ ನೀಡಲಾಗಿರುತ್ತದೆ. ಯಾವುದೇ ಶಾಲೆಯು ಮಾನ್ಯತೆ ಪಡೆಯದೇ/ಮಾನ್ಯತೆ ನವೀಕರಿಸದೇ ಶಾಲೆಯನ್ನು ಮುಂದುವರಿಸುತ್ತಿದ್ದಲ್ಲಿ ಅಥವಾ ಮಾನ್ಯತೆಯನ್ನು ಹಿಂಪಡೆದ ನಂತರವೂ ಶಾಲೆಯನ್ನು ಮುಂದುವರೆಸುತ್ತಿದ್ದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸೆಕ್ಷನ್-18(5) ರಲ್ಲಿ ನಿರ್ದೇಶನ ನೀಡಲಾಗಿದೆ.

ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-11ರಡಿ ಮಾನ್ಯತೆ ನೀಡಲು ಸಕ್ರಮ ಪ್ರಾಧಿಕಾರಿ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರು ಆಗಿದ್ದು, ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳು ಕಾಯ್ದೆ ಮತ್ತು ನಿಯಮಾನುಸಾರ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಕಡ್ಡಾಯವಾಗಿ ಮಾನ್ಯತೆ ಪಡೆಯುವ /ಮಾನ್ಯತೆ ನವೀಕರಿಸಿಕೊಳ್ಳುವ ಬಗ್ಗೆ ಅಗತ್ಯ ಕ್ರಮವಹಿಸಲು ಸೂಚಿಸಿದೆ. ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್-18(5) ರ ಉಲ್ಲಂಘನೆಯ ಪ್ರಕರಣದಲ್ಲಿ ಅಂತಹ ಶಾಲೆಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-23 ರಲ್ಲಿ ಸೂಚಿಸಿರುವಂತೆ ಅಗತ್ಯ ಕ್ರಮ ವಹಿಸಲು ಸೂಚಿಸಿದೆ. ನಿಯಮ-11(6) ರಂತೆ ಮಾನ್ಯತೆ ಪಡೆದ ಶಾಲೆಗಳ ಪಟ್ಟಿಯನ್ನು ಉಪನಿರ್ದೇಶಕರು(ಆಡಳಿತ) ರವರು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಲು ಸೂಚಿಸಿದೆ.

ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರಾಜ್ಯ/ಕೇಂದ್ರ ಪಠ್ಯಕ್ರಮದಲ್ಲಿ ನೋಂದಾಯಿತ ಶಾಲೆಯಾಗಿದಾಗ್ಯೂ RTE ಅಡಿ ಮಾನ್ಯತೆ ಪಡೆಯದೇ ಹಾಗೂ ಮಾನ್ಯತೆ ನವೀಕರಿಸದೇ ನಡೆಯುತ್ತಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ತಿಳಿಸಿದೆ.

 

 

BIG NEWS : ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ʻಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆʼ ಮಾನ್ಯತೆ ಪಡೆಯುವುದು ಕಡ್ಡಾಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ BIG NEWS: It is mandatory for all private schools in the state to get recognition under the Free and Compulsory Education Act: Education Department
Share. Facebook Twitter LinkedIn WhatsApp Email

Related Posts

50 ವರ್ಷ ಮೇಲ್ಪಟ್ಟ ಪುರುಷರೇ ಗಮನಿಸಿ : ಈ 5 ಜೀವಸತ್ವಗಳು ಅಮೃತವಿದ್ದಂತೆ, ಪ್ರತಿದಿನ ತಪ್ಪದೇ ಸೇವಿಸಿ.!

17/01/2026 7:15 AM2 Mins Read

ಉದ್ಯೋಗಿಗಳೇ ಗಮನಿಸಿ : ನೀವು ಯಾವ ಉದ್ದೇಶಗಳಿಗಾಗಿ `PF’ ಹಣ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

17/01/2026 7:11 AM2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

17/01/2026 7:04 AM2 Mins Read
Recent News

ಗಾಯಗಳಿಲ್ಲದಿದ್ದರೂ ನ್ಯಾಯ ಸಿಗಲೇಬೇಕು: ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಪರಿಹಾರ ನೀಡಲು ಹೈಕೋರ್ಟ್ ಮಹತ್ವದ ಆದೇಶ!

17/01/2026 8:29 AM

BREAKING : `ಇರಾನ್‌’ ನಿಂದ ದೆಹಲಿಗೆ ಆಗಮಿಸಿದ ಭಾರತೀಯ ನಾಗರಿಕರ ಮೊದಲ ಬ್ಯಾಚ್  |WATCH VIDEO

17/01/2026 8:25 AM

BREAKING: ಬಿಜೆಪಿಗೆ ಹೊಸ ಸಾರಥಿ: ಜನವರಿ 20 ರಂದು ನೂತನ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಘೋಷಣೆ!

17/01/2026 8:21 AM

BIG NEWS : ಮಾರಾಟ ಒಪ್ಪಂದಕ್ಕೆ ‘ಮುದ್ರಾಂಕ ಶುಲ್ಕ’ ಅಗತ್ಯವಿಲ್ಲ : ` ಸ್ಟ್ಯಾಂಪ್ ಕಾಯ್ದೆ’ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

17/01/2026 8:14 AM
State News
KARNATAKA

50 ವರ್ಷ ಮೇಲ್ಪಟ್ಟ ಪುರುಷರೇ ಗಮನಿಸಿ : ಈ 5 ಜೀವಸತ್ವಗಳು ಅಮೃತವಿದ್ದಂತೆ, ಪ್ರತಿದಿನ ತಪ್ಪದೇ ಸೇವಿಸಿ.!

By kannadanewsnow5717/01/2026 7:15 AM KARNATAKA 2 Mins Read

ವಯಸ್ಸಾದಂತೆ ದೇಹದ ಪೌಷ್ಟಿಕಾಂಶದ ಅಗತ್ಯಗಳು ಬದಲಾಗುತ್ತವೆ. ವಿಶೇಷವಾಗಿ ಪುರುಷರಿಗೆ 50 ವರ್ಷ ವಯಸ್ಸು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು…

ಉದ್ಯೋಗಿಗಳೇ ಗಮನಿಸಿ : ನೀವು ಯಾವ ಉದ್ದೇಶಗಳಿಗಾಗಿ `PF’ ಹಣ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

17/01/2026 7:11 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

17/01/2026 7:04 AM

5 ಲಕ್ಷದವರೆಗೆ ಚಿಕಿತ್ಸೆ : `ಯಶಸ್ವಿನಿ ವಿಮೆ ಯೋಜನೆ’ ನವೀಕರಣ, ಹೊಸ ಸದಸ್ಯತ್ವ ನೋಂದಣಿಗೆ ಅರ್ಜಿ ಆಹ್ವಾನ

17/01/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.