Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾರ್ಮುಜ್ ಜಲಸಂಧಿಯಲ್ಲಿ ಮಾರ್ಚ್‌ನಲ್ಲಿ ದಾಟಿದವು 220 ಬೃಹತ್ ಹಡಗುಗಳು: ಯುದ್ಧದ ಭೀತಿ ಮರೆತು ಸಾಗುತ್ತಿವೆ ತೈಲ ಟ್ಯಾಂಕರ್‌ಗಳು!

04/04/2026 9:40 AM

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

04/04/2026 9:38 AM

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KPTCLನಿಂದ ‘902 ಹುದ್ದೆ’ಗಳಿಗೆ ಆಯ್ಕೆಗೊಂಡವರಿಗೆ ‘ನೇಮಕಾತಿ ಆದೇಶ ಪತ್ರ’ ವಿತರಣೆ
KARNATAKA

KPTCLನಿಂದ ‘902 ಹುದ್ದೆ’ಗಳಿಗೆ ಆಯ್ಕೆಗೊಂಡವರಿಗೆ ‘ನೇಮಕಾತಿ ಆದೇಶ ಪತ್ರ’ ವಿತರಣೆ

By kannadanewsnow0923/05/2024 8:50 PM

ಬೆಂಗಳೂರು : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (KPTCL) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ ಆದೇಶ ಹೊರಡಿಸಿತ್ತು. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಂತಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಣೆ ಮಾಡಲಾಗಿದೆ. 

ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಇಂಜಿನಿಯರ್‌(ವಿದ್ಯುತ್‌), 17 ಸಹಾಯಕ ಇಂಜಿನಿಯರ್(ಸಿವಿಲ್), 15-ಕಿರಿಯ ಇಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ.

ಅದೇ ರೀತಿ, 535 ಅಭ್ಯರ್ಥಿಗಳ ಪೈಕಿ 502 (ಕಿರಿಯ ಇಂಜಿನಿಯರ್) ಅಭ್ಯರ್ಥಿಗಳಿಗೆ ಬುಧವಾರ ಮತ್ತು ಗುರುವಾರ ಕೌನ್ಸಿಲಿಂಗ್‌ ನಡೆಸಿ ನೇಮಕ ಆದೇಶ ನೀಡಲಾಗಿದೆ. ಈ ಪೈಕಿ 73 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿದವರಾಗಿದ್ದು, ಉಳಿದ 429 ಅಭ್ಯರ್ಥಿಗಳು ಇತರೆ ವೃಂದದವರು.

ಇನ್ನುಳಿದಂತೆ, 360 ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ (ಮೇ 24, 2024) ಕಡೆಯ ದಿನವಾಗಿದೆ. ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಂಡ ನಂತರ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಮೀಸಲು ಕೋರಿರುವ ದಾಖಲೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದು ತ್ವರಿತವಾಗಿ ಸ್ಥಳ ನಿಯುಕ್ತಿ ಹಾಗೂ ನೇಮಕ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಮಾತನಾಡಿ, ರಾಜ್ಯಾದ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಿದ್ಯುತ್‌ ಪ್ರಸರಣ ಸೇವೆ ಒದಗಿಸುವುದು ನಮ್ಮ ಬದ್ಧತೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸಿ, ಅಭ್ಯರ್ಥಿಗಳಿಗೆ ಕೆಲಸದ ಆದೇಶ ನೀಡಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು ಅಂತ ತಿಳಿಸಿದ್ದಾರೆ.

ಇನ್ನೂ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರು, 902 ಹೊಸ ಉದ್ಯೋಗಿಗಳ ನೇಮಕದ ಮೂಲಕ ಕೆಪಿಟಿಸಿಎಲ್‌ ಇನ್ನಷ್ಟು ಬಲಗೊಂಡು, ಗುಣಮಟ್ಟದ ಸೇವೆಯನ್ನು ಮುಂದುವರಿಸಲಿದೆ. ಆಯ್ಕೆ ಪ್ರಕ್ರಿಯೆಯನ್ನುಅತ್ಯಂತ ಪಾರದರ್ಶಕ ಮತ್ತು ಸಮರ್ಥವಾಗಿ ನಡೆಸಲಾಗಿದೆ ಎಂದಿದ್ದಾರೆ.

BREAKING : ಛತ್ತೀಸ್‌ಗಢದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಎನ್‌ಕೌಂಟರ್‌ : ಏಳು ಮಾವೋವಾದಿಗಳು ಹತ

BREAKING : ದೆಹಲಿಯ ‘ಲೇಡಿ ಶ್ರೀರಾಮ್ ಕಾಲೇಜು, ಶ್ರೀ ವೆಂಕಟೇಶ್ವರ ಕಾಲೇಜಿ’ಗೆ ಬಾಂಬ್ ಬೆದರಿಕೆ

Share. Facebook Twitter LinkedIn WhatsApp Email

Related Posts

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

04/04/2026 9:38 AM3 Mins Read

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM2 Mins Read

ALERT : ಅಡುಗೆಮನೆಯಲ್ಲಿ ಅಡಗಿದೆ ‘ಸೈಲೆಂಟ್ ಕಿಲ್ಲರ್’: ಇಂದೇ ಇವುಗಳನ್ನು ಹೊರಹಾಕಿ, ಇಲ್ಲದಿದ್ದರೆ ಕ್ಯಾನ್ಸರ್ ಗ್ಯಾರಂಟಿ!

04/04/2026 9:08 AM2 Mins Read
Recent News

ಹಾರ್ಮುಜ್ ಜಲಸಂಧಿಯಲ್ಲಿ ಮಾರ್ಚ್‌ನಲ್ಲಿ ದಾಟಿದವು 220 ಬೃಹತ್ ಹಡಗುಗಳು: ಯುದ್ಧದ ಭೀತಿ ಮರೆತು ಸಾಗುತ್ತಿವೆ ತೈಲ ಟ್ಯಾಂಕರ್‌ಗಳು!

04/04/2026 9:40 AM

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

04/04/2026 9:38 AM

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM

ಇರಾನ್ ದಾಳಿಗೆ ಧೂಳೀಪಟವಾಯ್ತು ಎ-10 ‘ವಾರ್ಟ್‌ಹಾಗ್’! ವಿಡಿಯೋ ಬಿಡುಗಡೆ ಮಾಡಿ ಅಮೆರಿಕಕ್ಕೆ ಸವಾಲು ಹಾಕಿದ ಇರಾನ್ ಸೇನೆ | Watch video

04/04/2026 9:31 AM
State News
KARNATAKA

ಆಂಜನೇಯನನ್ನು ಈ ರೀತಿ ಪೂಜಿಸುವುದರಿಂದ ವಾಹನಗಳಿಂದ ಆಗುವ ಎಲ್ಲಾ ಅಪಘಾತಗಳು ನಿವಾರಣೆಯಾಗುತ್ತವೆ.!

By kannadanewsnow5704/04/2026 9:38 AM KARNATAKA 3 Mins Read

ಅಪಘಾತಗಳನ್ನು ತಪ್ಪಿಸಲು ಪೂಜೆ ಪ್ರತಿಯೊಂದು ಊರಿನ ಗಡಿಯಲ್ಲಿ ಕ್ಷೇತ್ರ ಪಾಲಕ ರಕ್ಷಕ ದೇವತೆ ಇರುತ್ತದೆ. ಈ ರಕ್ಷಕ ದೇವತೆಯನ್ನು ಪೂಜಿಸುವುದರಿಂದ…

ಮನೆ ಕಟ್ಟುವವರಿಗೆ `GBA’ ಭರ್ಜರಿ ಗುಡ್ ನ್ಯೂಸ್ : ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

04/04/2026 9:32 AM

ALERT : ಅಡುಗೆಮನೆಯಲ್ಲಿ ಅಡಗಿದೆ ‘ಸೈಲೆಂಟ್ ಕಿಲ್ಲರ್’: ಇಂದೇ ಇವುಗಳನ್ನು ಹೊರಹಾಕಿ, ಇಲ್ಲದಿದ್ದರೆ ಕ್ಯಾನ್ಸರ್ ಗ್ಯಾರಂಟಿ!

04/04/2026 9:08 AM

ಬೆಳ್ಳಂಬೆಳಗ್ಗೆ ಕೋಳಿಗಳು ಕೂಗುವುದೇಕೆ? ಬಯಲಾಯಿತು ವರ್ಷಗಳ ಹಿಂದಿನ ರಹಸ್ಯ!

04/04/2026 8:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.