Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕೇವಲ ₹1,200 ಸಾಲಕ್ಕಾಗಿ ಬಡ ಮಹಿಳೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ: ವಿಡಿಯೋ ವೈರಲ್ | WATCH VIDEO

29/04/2026 12:00 PM

ಬೇಸಿಗೆಯ ಬಿಸಿಲಿಗೆ ಅಮೃತದಂತಹ ಪಾನೀಯ: ಈ ಡ್ರಿಂಕ್ ಕುಡಿದರೆ ದೇಹ ಕೂಲ್..!

29/04/2026 11:49 AM

ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ಅಸಲಿ ಮಾಹಿತಿ!

29/04/2026 11:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ನೋಂದಣಿ / ಪರವಾನಿಗೆ ಪಡೆದುಕೊಳ್ಳಲು ಅರ್ಜಿ ಆಹ್ವಾನ!
KARNATAKA

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ನೋಂದಣಿ / ಪರವಾನಿಗೆ ಪಡೆದುಕೊಳ್ಳಲು ಅರ್ಜಿ ಆಹ್ವಾನ!

By kannadanewsnow0724/04/2024 4:30 AM

ಬೆಂಗಳೂರು: ರಾಜ್ಯದ ಕೆಲವು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಉದ್ದಿಮೆದಾರರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರವಾನಿಗೆ/ನೊಂದಣಿ ಪಡೆಯುವ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ಮಾಡಲು ಆನ್‍ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಆಹಾರ ಪದಾರ್ಥಗಳ ತಯಾರಕರು, ಶೇಖರಣೆ ಮಾಡುವವರು, ಸಂಸ್ಕರಣೆ ಮಾಡುವ ಘಟಕಗಳು ಸಾಗಾಣಿಕೆ ಹಾಗೂ ಮಾರಾಟ ಮಾಡುವ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ನೊಂದಣಿ (ವಾರ್ಷಿಕ ವಹಿವಾಟು ರೂ.12.00 ಲಕ್ಷದ ಒಳಗೆ ಇದ್ದರೆ) ರಾಜ್ಯ ಪರವಾನಿಗೆ (ವಾರ್ಷಿಕ ವಹಿವಾಟು ರೂ.12.00 ಲಕ್ಷಕ್ಕೆ ಮೇಲ್ಪಟ್ಟು ರೂ.20.00 ಕೋಟಿ ವರೆಗೆ ಇದ್ದರೆ) ಪಡೆದುಕೊಳ್ಳಬೇಕಾಗಿರುತ್ತದೆ. ಸದರಿ ನೊಂದಣಿ/ ಪರವಾನಿಗೆಗಳನ್ನು ಆಹಾರ ಉದ್ದಿಮೆದಾರರ ಅಗತ್ಯದ ಅನುಸಾರ 1 ರಿಂದ 5 ವರ್ಷಗಳ ವರೆಗೆ ಪಡೆದುಕೊಳ್ಳಬಹುದಾಗಿರುತ್ತದೆ. ತದನಂತರ ಅವಶ್ಯಕತೆಗೆ ನವೀಕರಣವನ್ನು ಮಾಡಿಕೊಳ್ಳಬಹುದಾಗಿರುತ್ತದೆ.

ನೊಂದಣಿ/ಪರವಾನಿಗೆಗಳಿಗೆ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆನ್‍ಲೈನ್ ಮೂಲಕವೇ ಅನುಮೋದನೆ ನೀಡಲಾಗುತ್ತದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಉದ್ದಿಮೆದಾರರು ಅವರುಗಳ ಅಧಿಕೃತ/ವೈಯಕ್ತಿಕ ಇ-ಮೇಲ್ ವಿಳಾಸಗಳನ್ನು ಮತ್ತು ಫೆÇೀನ್ ಸಂಖ್ಯೆಗಳನ್ನು ಒದಗಿಸುವುದು ಅವಶ್ಯಕವಾಗಿದ್ದು, ಇದರಿಂದಾಗಿ ಇಲಾಖೆಯಿಂದ ಜಾರಿ ಮಾಡಲಾಗುವ ಪತ್ರಗಳು, ನೆನಪೆÇೀಲೆಗಳು, ಫೆÇೀನ್ ಸಂದೇಶಗಳು ಅವರುಗಳಿಗೆ ನೇರವಾಗಿ ತಲುಪುವಂತಾಗುತ್ತವೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೊಂದಣಿಗಾಗಿ ಒಂದು ವರ್ಷಕ್ಕೆ ರೂ.100/-ಗಳ ಶುಲ್ಕ ಮತ್ತು ಪರವಾನಿಗೆಗಳಿಗೆ ಆಹಾರ ಉದ್ದಿಮೆಯ ವಿಧವನ್ನು ಆಧರಿಸಿ ರೂ.2,000/- ರಿಂದ ರೂ.5,000/-ಗಳ ಶುಲ್ಕ ನಿಗದಿಸಲ್ಪಟ್ಟಿದ್ದು, ಸದರಿ ಶುಲ್ಕವನ್ನು ಆಹಾರ ಉದ್ದಿಮೆದಾರರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆನ್‍ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ.

ನೊಂದಣಿ/ಪರವಾನಿಗೆಗಳಿಗೆ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯ ಮಾಡಲ್ಪಟ್ಟಿರುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವುದು ಅಗತ್ಯವಾಗಿರುತ್ತದೆ. ಅಗತ್ಯ ದಾಖಲಾತಿಗಳನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಅಥವಾ ತಪ್ಪು ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಸದರಿ ಅರ್ಜಿಯನ್ನು ತಿರಸ್ಕರಿಸಿ ಅರ್ಜಿ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ನೊಂದಣಿ/ಪರವಾನಿಗೆಗಳನ್ನು ಅವಧಿ ಮೀರಿದ ನಂತರ ನವೀಕರಿಸಲು ಸಂಬಂಧಿಸಿದ ಪರವಾನಿಗೆ/ನೊಂದಣಿ ಶುಲ್ಕದ ಮೂರರಷ್ಟು ದಂಡವು ಅನ್ವಯವಾಗುತ್ತದೆ. ಇದಲ್ಲದೆ ಆಹಾರ ಪದಾರ್ಥಗಳ ತಯಾರಿಕೆ ಮತ್ತು ರೀಪ್ಯಾಕ್ ಮಾಡುವವರು ಪ್ರತೀ ವರ್ಷ ಮೇ ಅಂತ್ಯದೊಳಗೆ ತಮ್ಮ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಆನ್‍ಲೈನ್ ಮೂಲಕ  FoSCoS  ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಮಾಡಬೇಕಾಗಿರುತ್ತದೆ. ಇಲ್ಲವಾದಲ್ಲಿ ವಿಳಂಬವಾಗುವ ದಿನ ಒಂದಕ್ಕೆ ರೂ.100/-ಗಳ ದಂಡವು ಅನ್ವಯವಾಗುತ್ತದೆ.

ಆಹಾರ ಉದ್ದಿಮೆದಾರರು ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು, ಆದೇಶಗಳನ್ನು https://foscos.fssai.gov.in/ ಪಡೆಯಬಹುದಾಗಿರುತ್ತದೆ. ಹಾಗೂ https://www.fssai.gov.in/  ವೆಬ್‍ಸೈಟ್‍ಗಳಿಂದ ಪಡೆಯಬಹುದಾಗಿದೆ.

ಆಹಾರ ಉದ್ದಿಮೆದಾರರಿಗೆ ನೆರವಾಗಲು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಆಹಾರ ಸುರಕ್ಷತಾ ಮಿತ್ರ (ಈooಜ Sಚಿಜಿeಣಥಿ ಒiಣಡಿಚಿ) ಯೋಜನೆಯಡಿ ದೇಶಾದ್ಯಂತ ಸದರಿ -ಕೆಲಸ ಮಾಡಲು ಇಚ್ಛಿಸುವವರಿಗೆ ಇಲಾಖೆಯಿಂದ ತರಬೇತಿಯನ್ನು ನೀಡಿ ನೊಂದಣಿ/ಪರವಾನಿಗೆ ಪಡೆದುಕೊಳ್ಳಲು ಆಗತ್ಯವಿರುವ ಮಾಹಿತಿಯನ್ನು ನೀಡಲಾಗಿರುತ್ತದೆ.

ಈ ಆಹಾರ ಸುರಕ್ಷತಾ ಮಿತ್ರರುಗಳು ಇಲಾಖಾ ಅಧಿಕಾರಿಗಳಾಗಿರುವುದಿಲ್ಲ ಆದರೆ ಇಲಾಖೆಯಿಂದ ತರಬೇತಿ ಪಡೆದ ವ್ಯಕ್ತಿಗಳಾಗಿದ್ದು, ಇವರುಗಳು ನೊಂದಣಿ/ಪರವಾನಿಗೆ ಅರ್ಜಿಯನ್ನು ಸಲ್ಲಿಸಲು ಸೇವಾ ಶುಲ್ಕವಾಗಿ ರೂ.100/-ಗಳನ್ನು ಮಾತ್ರ ಪಡೆದುಕೊಳ್ಳಲು ಅರ್ಹರಿರುತ್ತಾರೆ. ಅಲ್ಲದೆ ಈ ಆಹಾರ ಸುರಕ್ಷತಾ ಮಿತ್ರರುಗಳು ಯಾವುದೇ ಆಹಾರ ಉದ್ದಿಮೆಗಳಿಗೆ ಪರಿಶೀಲನಾ ಪೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಸಂಬಂಧಿಸಿದಂತೆ ಆಹಾರ ಉದ್ದಿಮೆದಾರರು ಆಹಾರ ಸುರಕ್ಷತಾ ಮಿತ್ರರುಗಳಿಂದ ಸೇವೆ ಪಡೆಯುವ ಬದಲು ಅವರುಗಳ ಗುರುತಿನ ಚೀಟಿಯನ್ನು ನೋಡಿ ಖಚಿತಪಡಿಸಿಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ಅಂಕಿತಾಧಿಕಾರಿಗಳನ್ನು ಸಂಪರ್ಕಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Food Safety and Standards Department invites applications for registration/license!
Share. Facebook Twitter LinkedIn WhatsApp Email

Related Posts

ಬೇಸಿಗೆಯ ಬಿಸಿಲಿಗೆ ಅಮೃತದಂತಹ ಪಾನೀಯ: ಈ ಡ್ರಿಂಕ್ ಕುಡಿದರೆ ದೇಹ ಕೂಲ್..!

29/04/2026 11:49 AM1 Min Read

ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ಅಸಲಿ ಮಾಹಿತಿ!

29/04/2026 11:41 AM1 Min Read

BIG NEWS : ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

29/04/2026 11:34 AM1 Min Read
Recent News

SHOCKING : ಕೇವಲ ₹1,200 ಸಾಲಕ್ಕಾಗಿ ಬಡ ಮಹಿಳೆಗೆ ಸಾರ್ವಜನಿಕವಾಗಿ ಕಪಾಳಮೋಕ್ಷ: ವಿಡಿಯೋ ವೈರಲ್ | WATCH VIDEO

29/04/2026 12:00 PM

ಬೇಸಿಗೆಯ ಬಿಸಿಲಿಗೆ ಅಮೃತದಂತಹ ಪಾನೀಯ: ಈ ಡ್ರಿಂಕ್ ಕುಡಿದರೆ ದೇಹ ಕೂಲ್..!

29/04/2026 11:49 AM

ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ಅಸಲಿ ಮಾಹಿತಿ!

29/04/2026 11:41 AM

BIG NEWS : ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

29/04/2026 11:34 AM
State News
KARNATAKA

ಬೇಸಿಗೆಯ ಬಿಸಿಲಿಗೆ ಅಮೃತದಂತಹ ಪಾನೀಯ: ಈ ಡ್ರಿಂಕ್ ಕುಡಿದರೆ ದೇಹ ಕೂಲ್..!

By kannadanewsnow5729/04/2026 11:49 AM KARNATAKA 1 Min Read

ಸದ್ಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳುವುದು ದೊಡ್ಡ ಸವಾಲು. ದಣಿವಿನ…

ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ಅಸಲಿ ಮಾಹಿತಿ!

29/04/2026 11:41 AM

BIG NEWS : ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

29/04/2026 11:34 AM

BREAKING : ಜಾಮೀನು ಕೋರಿ ನಟ ದರ್ಶನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ.!

29/04/2026 11:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.