ಬೆಂಗಳೂರು : ಬಿಸಿಲಿನ ಬೇಗೆ, ಕಾಲರಾ ರೋಗಕಕ್ಕೆ ರಾಜ್ಯದ ಜನರು ತತ್ತರಿಸಿದ್ದು, ರಾಜ್ಯದಲ್ಲಿ ಕಾಲರಾ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8 ಮಂದಿ ಕಾಲರಾ ಸೋಂಕು ದೃಢಪಟ್ಟಿದ್ದು, ಬೆಂಗಳೂರು ನಗರದಲ್ಲಿ 5 ಮಂದಿಗೆ ಕಾಲರಾ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜಿಲ್ಲೆಯಲ್ಲಿ 1 ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕಾಲರಾ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಕೆಲ ದಿನಗಳಿಂದ ಕಾಲರಾ ರೋಗ ಲಕ್ಷಣ ಪ್ರಕರಣಗಳು ಹೆಚ್ಚಾಗುತ್ತಿವೆ. ಕಲುಷಿತ ನೀರು ಮತ್ತು ಆಹಾರ ಸೇವನೆ, ಕಳಪೆ ನೈರ್ಮಲ್ಯ, ಅಶುಚಿತ್ವ, ಕಲುಷಿತ ನೀರಿನ ಮೂಲಗಳು ಇದಕ್ಕೆ ಕಾರಣವಾಗಿವೆ.
ಕಾಲರ ರೋಗದ ಬಗ್ಗೆ ಇರಲಿ ಜಾಗೃತೆ :
ಎಚ್ಚರಿಕೆ ಕ್ರಮಗಳು
ಕುಡಿಯುವ ನೀರಿನ ಶುದ್ಧತೆ ಬಗ್ಗೆ ಎಚ್ಚರ ವಹಿಸಿ.
ಶುದ್ದೀಕರಿಸಿದ ಅಥವಾ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.
ಲಾವಂಚ ಬೇರು ಹಾಕಿ ನೀರು ಕುಡಿಯುವುದು ಒಳ್ಳೆಯದು.