Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 500 ಅಂಕ ಕುಸಿತ : 24,900 ಕ್ಕಿಂತ ಕೆಳಗಿಳಿದ ‘ನಿಫ್ಟಿ’ |Share Market

26/08/2025 9:35 AM

Shocking: ವರದಕ್ಷಿಣೆಗಾಗಿ ಪತ್ನಿಯನ್ನು ಕಟ್ಟಿಹಾಕಿ ಬಾಯಿಗೆ ಬಿಸಿ ಚಾಕು ಹಾಕಿದ ಪತಿ !

26/08/2025 9:29 AM

BREAKING : ಬೆಳ್ಳಂಬೆಳಗ್ಗೆ ಕೇಜ್ರಿವಾಲ್ ಆಪ್ತ `AAP’ ನಾಯಕ ಸೌರಭ್ ಭಾರದ್ವಾಜ್ ನಿವಾಸದ ಮೇಲೆ `E.D’ ದಾಳಿ

26/08/2025 9:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾಧ್ಯಂತ ‘ಬೇಸಿಗೆ ತಾಪಮಾನ’ ಹೆಚ್ಚಳ: ‘ಆರೋಗ್ಯ ಇಲಾಖೆ’ಯಿಂದ ಈ ಮಾರ್ಗಸೂಚಿ ಪ್ರಕಟ
KARNATAKA

ರಾಜ್ಯಾಧ್ಯಂತ ‘ಬೇಸಿಗೆ ತಾಪಮಾನ’ ಹೆಚ್ಚಳ: ‘ಆರೋಗ್ಯ ಇಲಾಖೆ’ಯಿಂದ ಈ ಮಾರ್ಗಸೂಚಿ ಪ್ರಕಟ

By kannadanewsnow0905/04/2024 6:40 PM

ಬೆಂಗಳೂರು: ರಾಜ್ಯದಲ್ಲಿ ಏಕಾಏಕಿ ಕಾಲರಾ, ಬಿಸಿಗಾಳಿ ಹೆಚ್ಚಾಗಿದೆ. ಬಿಸಿಲ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲ ಧಗೆಯ ಜೊತೆಗೆ ಕಾಲರಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯಂತ್ರಣ, ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಅದರಲ್ಲಿ ರಾಜ್ಯದಲ್ಲಿ ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಉಷ್ಣತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಡೆಯಲು, ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮ (NPCCHH) ಹೊರಡಿಸಿದ ನಿರ್ದೇಶನಗಳು ಮತ್ತು ಸಲಹೆಗಳ ಆಧಾರದಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA), ಕಂದಾಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಸಂಬಂಧಿತ ಅಂಶಗಳನ್ನು ರಾಜ್ಯವು ಹೊರಡಿಸಿದ ಸುತ್ತೋಲೆಗಳು ಮತ್ತು ಮಾರ್ಗಸೂಚಿಗಳಲ್ಲಿ ಸಹ ಅಳವಡಿಸಲಾಗಿದೆ.

ತಾಪಮಾನವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ವಿವರ

1. ಸದ್ಯದ ತಾಪಮಾನದ ಪರಿಸ್ಥಿತಿಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು, ದಿನಾಂಕ 2ನೇ ಮಾರ್ಚ್ 2024 ರಂದು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
2. ಮಾರ್ಚ್ 1, 2024ರಿಂದ ಶಾಖ ಸಂಬಂಧಿತ ಕಾಯಿಲೆ (HRI)ಗಳ ಕುರಿತು, ಆರೋಗ್ಯ ರಕ್ಷಣಾ ಸೌಲಭ್ಯಗಳು (HCFs) ನಿಂದ ಇಂಟಗ್ರೇಟೆಡ್ ಹೆಲ್ತ್‌ ಇನ್‌ಫಾರ್‌ಮೇಶನ್‌ ಪೋರ್ಟಲ್ (IHIP) ನಲ್ಲಿ ದೈನಂದಿನ ಆಧಾರದ ಮೇಲೆ ವರದಿ ಮಾಡಲಾಗುತ್ತಿದೆ. ಈ ಮೂಲಕ ಶಂಕಿತ ಶಾಖಾಘಾತ ಪ್ರಕರಣಗಳು ಮತ್ತು ಸಾವಿನ ಅಂಕಿಅಂಶಗಳನ್ನು ಕಲೆಹಾಕಲಾಗುತ್ತಿದೆ. ರಾಜ್ಯದಲ್ಲಿ ಏಪ್ರಿಲ್ 4, 2024 ರವರೆಗೆ ಶೇ. 56.7ರಷ್ಟು ಶಾಖ ಸಂಬಂಧಿತ ಕಾಯಿಲೆಗಳ ಡೇಟಾಗಳನ್ನು ಸಂಗ್ರಹಿಸಲಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ, ದತ್ತಾಂಶಗಳನ್ನು ಸಕಾಲಿಕವಾಗಿ ನಮೂದಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವರದಿ ಸಲ್ಲಿಕೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
3. ಶಾಖ ಸಂಬಂಧಿತ ಅನಾರೋಗ್ಯದ ಪ್ರಕರಣಗಳನ್ನು ನಿರ್ವಹಿಸಲು, ಶಾಖಾಘಾತ ನಿರ್ವಹಣಾ ಕೊಠಡಿಗಳನ್ನು (ಜಿಲ್ಲಾ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳು ಮತ್ತು ಉಪ ಜಿಲ್ಲಾ ಮಟ್ಟದಲ್ಲಿ 2 ಹಾಸಿಗೆಗಳು) ಅಗತ್ಯ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಈ ಕುರಿತ ಸುತ್ತೋಲೆಯನ್ನು ದಿನಾಂಕ: ಮಾರ್ಚ್16, 2024ರಂದು ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ನಿರ್ದೇಶಕರು ಹೊರಡಿಸಿದ್ದಾರೆ.
4. ಸುತ್ತೋಲೆಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಚಟುವಟಿಕೆಗಳ ಅನುಷ್ಠಾನದ ಕುರಿತು ಮಾರ್ಚ್ 13, 2024ರಂದು ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಕಾರ್ಯಾಗಾರವನ್ನು (ವರ್ಚುವಲ್ ಆಗಿ) ನಡೆಸಲಾಗಿದೆ.

5. DNOಗಳಿಂದ AMOಗಳಿಗೆ, MO – PHCಗಳಿಗೆ ಅಗತ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರು ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ.
6. ತಾಪಮಾನವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ, ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು, ಮಾರ್ಚ್ 23, 2024ರಂದು ಸುತ್ತೋಲೆಯನ್ನು ಹೊರಡಿಸಲಾಗಿದೆ.
7. ಶಾಖಾಘಾತಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ಅಂಕಿ ಅಂಶಗಳನ್ನು ಪೋರ್ಟಲ್‌ನಲ್ಲಿ ನಮೂದಿಸಲಾಗುತ್ತಿದ್ದು, ಇದುವರೆಗೂ ಒಟ್ಟು 521 ಪುಕರಣಗಳು ವರದಿಯಾಗಿದೆ. ಆದಾಗ್ಯೂ, ಪ್ರತಿನಿತ್ಯ ನಮೂದಿಸಿದ ಅಂಕಿಅಂಶಗಳನ್ನು ಪರಿಶೀಲಿಸಲು ಮತ್ತು ನಿಖರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು DNOಗಳಿಗೆ ಸೂಚನೆ ನೀಡಲಾಗಿದೆ.
8. ರಾಜ್ಯದಲ್ಲಿ ವರದಿಯಾಗಿರುವ ಎರಡು ಸಾವಿನ ಪ್ರಕರಣಗಳು, (ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು) ಶಾಖಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಶಂಕಿಸಲಾಗಿತ್ತು. ಆದರೆ ಆಯಾ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ನೀಡಿದ ವರದಿಯಲ್ಲಿ Cardiac Tamponade & Myocardial infarction ಕಾರಣದಿಂದ ಸಾವು ಸಂಭವಿಸಿದೆ ಎಂದು ದೃಢೀಕರಿಸಿದ್ದಾರೆ. ಹೀಗಾಗಿ, ಶಾಖಾಘಾತಕ್ಕೆ ಒಳಗಾಗಿ ರಾಜ್ಯದಲ್ಲಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಅದಾಗ್ಯೂ, ‘ಶಾಖಾಘಾತ ಸಂಬಂಧಿತ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆಯ ಸಂಶೋಧನೆಗಳು’ ಕುರಿತು ಕೇಂದ್ರ ಸರ್ಕಾರದ ಸೂಚನೆಗಳನ್ನು ಎಲ್ಲಾ ಜಿಲ್ಲೆಗಳಿಗೆ ವಿತರಿಸಲಾಗಿದ್ದು, ಉಲ್ಲೇಖಿತ ವಸ್ತುವಾಗಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.
9. ಸಾರ್ವಜನಿಕರಿಗೆ ಮಾಹಿತಿ ನೀಡಲು, ಎಲ್ಲಾ ಪ್ಲಾಟ್‌ಫಾರ್ಮ್‌ಗಳ ಮೂ

ಲಕ ಪ್ರಸಾರ ಮಾಡಲು ಅನುಕೂಲವಾಗುವಂತೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ IEC ವಿಭಾಗದಿಂದ ಮಾಹಿತಿಗಳನ್ನು ಎಲ್ಲಾ ಜಿಲ್ಲೆಗಳಿಗೆ ತಲುಪಿಸಲಾಗಿದೆ.
ಪುಸ್ತುತ, ಬೇಸಿಗೆ ತಾಪಮಾನ ಹೆಚ್ಚುತ್ತಿದ್ದು, ಶಾಖಾಘಾತ ಸೇರಿದಂತೆ ಮುಂಬರುವ ದಿನಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇಲಾಖೆಯ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ‘ಸುನೀಲ್ ಬೋಸ್ ನಾಮಪತ್ರ’ ತಿರಸ್ಕೃತಗೊಳಿಸುವಂತೆ ‘ಚುನಾವಣಾ ಆಯೋಗ’ಕ್ಕೆ ಬಿಜೆಪಿ ದೂರು

BIG NEWS : ನಾನು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೆ ಗೊತ್ತಿಲ್ಲ : ನಿವೃತ್ತಿ ಬಗ್ಗೆ ಡಿಸಿಎಂ ಡಿಕೆ ಅಚ್ಚರಿ ಹೇಳಿಕೆ

Share. Facebook Twitter LinkedIn WhatsApp Email

Related Posts

Ganesh Chaturthi 2025 : ನಾಳೆ ‘ಗಣೇಶ ಚತುರ್ಥಿ’: ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಪೂಜಾ ವಿಧಾನದ ಕುರಿತು ಇಲ್ಲಿದೆ ಮಾಹಿತಿ

26/08/2025 9:18 AM2 Mins Read

Rain Alert : ರಾಜ್ಯಾದ್ಯಂತ ಇಂದು, ನಾಳೆ ಭಾರೀ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’

26/08/2025 8:45 AM1 Min Read

SHOCKING : ರೀಲ್ಸ್ ಗಾಗಿ `ಫ್ಲೈಓವರ್’ ಮೇಲಿಂದ ಜಿಗಿದ ಯುವಕ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

26/08/2025 8:28 AM1 Min Read
Recent News

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 500 ಅಂಕ ಕುಸಿತ : 24,900 ಕ್ಕಿಂತ ಕೆಳಗಿಳಿದ ‘ನಿಫ್ಟಿ’ |Share Market

26/08/2025 9:35 AM

Shocking: ವರದಕ್ಷಿಣೆಗಾಗಿ ಪತ್ನಿಯನ್ನು ಕಟ್ಟಿಹಾಕಿ ಬಾಯಿಗೆ ಬಿಸಿ ಚಾಕು ಹಾಕಿದ ಪತಿ !

26/08/2025 9:29 AM

BREAKING : ಬೆಳ್ಳಂಬೆಳಗ್ಗೆ ಕೇಜ್ರಿವಾಲ್ ಆಪ್ತ `AAP’ ನಾಯಕ ಸೌರಭ್ ಭಾರದ್ವಾಜ್ ನಿವಾಸದ ಮೇಲೆ `E.D’ ದಾಳಿ

26/08/2025 9:29 AM

Ganesh Chaturthi 2025 : ನಾಳೆ ‘ಗಣೇಶ ಚತುರ್ಥಿ’: ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಪೂಜಾ ವಿಧಾನದ ಕುರಿತು ಇಲ್ಲಿದೆ ಮಾಹಿತಿ

26/08/2025 9:18 AM
State News
KARNATAKA

Ganesh Chaturthi 2025 : ನಾಳೆ ‘ಗಣೇಶ ಚತುರ್ಥಿ’: ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಪೂಜಾ ವಿಧಾನದ ಕುರಿತು ಇಲ್ಲಿದೆ ಮಾಹಿತಿ

By kannadanewsnow5726/08/2025 9:18 AM KARNATAKA 2 Mins Read

ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಗೆ ವಿಶೇಷ ಮಹತ್ವವಿದೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ…

Rain Alert : ರಾಜ್ಯಾದ್ಯಂತ ಇಂದು, ನಾಳೆ ಭಾರೀ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’

26/08/2025 8:45 AM

SHOCKING : ರೀಲ್ಸ್ ಗಾಗಿ `ಫ್ಲೈಓವರ್’ ಮೇಲಿಂದ ಜಿಗಿದ ಯುವಕ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

26/08/2025 8:28 AM

BREAKING : ರೌಡಿ ಶೀಟರ್ `ಬಿಕ್ಲು ಶಿವ’ ಕೊಲೆ ಕೇಸ್ : `CID’ಯಿಂದ A-1 ಆರೋಪಿ `ಜಗದೀಶ್ ಅಲಿಯಾಸ್ ಜಗ್ಗ’ ಅರೆಸ್ಟ್.!

26/08/2025 8:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.