Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಗಲಕೋಟೆಯಲ್ಲಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನ ಮೇಲೆ ಹಲ್ಲೆ : ಆರೋಪಿ ಯುವಕ ಅರೆಸ್ಟ್

14/05/2025 8:37 PM

ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ: ಸಿಎಂ ಸಿದ್ದರಾಮಯ್ಯ

14/05/2025 8:26 PM

BREAKING : ಬಿಳಿಗಿರಿರಂಗನ ಬೆಟ್ಟದ ತಿರುವಿನಲ್ಲಿ ಸಚಿವ ವೆಂಕಟೇಶ್ ಪೈಲಟ್ ವಾಹನ ಪಲ್ಟಿ : PSI, ಚಾಲಕನಿಗೆ ಗಂಭೀರ ಗಾಯ

14/05/2025 8:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕ್ಯಾನ್ಸರ್‌ ರೋಗಿಗಳ ಆರೈಕೆಗಾಗಿ ‘HCG ಕೇರ್‌ ಆಪ್‌’ ಬಿಡುಗಡೆ ಮಾಡಿದ ‘ಎಚ್‌ಸಿಜಿ ಆಸ್ಪತ್ರೆ’
INDIA

ಕ್ಯಾನ್ಸರ್‌ ರೋಗಿಗಳ ಆರೈಕೆಗಾಗಿ ‘HCG ಕೇರ್‌ ಆಪ್‌’ ಬಿಡುಗಡೆ ಮಾಡಿದ ‘ಎಚ್‌ಸಿಜಿ ಆಸ್ಪತ್ರೆ’

By kannadanewsnow0925/03/2024 1:28 PM

ನವದೆಹಲಿ: ಹೆಲ್ತ್‌ ಕೇರ್‌ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್, ಭಾರತದ ಅತಿದೊಡ್ಡ ಕ್ಯಾನ್ಸರ್ ಆರೈಕೆ ಜಾಲ, ಎಚ್‌ಸಿಜಿ ಕೇರ್ ಆಪ್‌ ಅನ್ನು ಪ್ರಾರಂಭಿಸಿದೆ. ಇದು ಆಂಕೊಲಾಜಿ ಆರೈಕೆ ವಿಭಾಗದಲ್ಲಿ ಇದು ಈ ರೀತಿಯ ಮೊದಲ ಪ್ರಯತ್ನ. ವೈಯಕ್ತಿಕ ಕ್ಯಾನ್ಸರ್ ಆರೈಕೆಯನ್ನು ಸುಲಭವಾಗಿ, ನಿರಂತರವಾಗಿ ಮತ್ತು ಪೂರ್ವಭಾವಿಯಾಗಿ ಕ್ಯಾನ್ಸರ್ ರೋಗಿಗಳಿಗೆ, ಅವರು ಎಲ್ಲಿದ್ದರೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಈ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಎಚ್‌ಸಿಜಿ ಕೇರ್ ಅಪ್ಲಿಕೇಶನ್ ಒಂದು ಡ್ಯಾಶ್‌ ಬೋರ್ಡ್‌ ನಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಸಮಗ್ರ ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ. ಇದು ಕ್ಯಾನ್ಸರ್ ಇರುವವರಿಗೆ ವೈದ್ಯರ ನೇಮಕಾತಿಗಳನ್ನು ಕಾಯ್ದಿರಿಸಲು, ಎಚ್‌ಸಿಜಿ ಸಂಸ್ಥೆಗಳಲ್ಲಿ ತಮ್ಮ ಆಯ್ಕೆಯ ಯಾವುದೇ ಆಸ್ಪತ್ರೆ ಅಥವಾ ಡೇ ಕೇರ್‌ ಕೇಂದ್ರವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಅವರು ಮತ್ತು ಅವರ ಕುಟುಂಬಗಳು ತಮ್ಮ ವೈದ್ಯಕೀಯ ವರದಿಗಳನ್ನು ಹಂಚಿಕೊಳ್ಳಬಹುದು. ಕ್ಯಾನ್ಸರ್ ತಜ್ಞರನ್ನು ಸಂಪರ್ಕಿಸಬಹುದು ಮತ್ತು ಅವರ ಸ್ಮಾರ್ಟ್‌ ಫೋನ್‌ ಗಳಲ್ಲಿ ವೀಡಿಯೊ ಕರೆ ಮೂಲಕ ಅವರೊಂದಿಗೆ ವರ್ಚುವಲ್ ಸಂವಹನ ನಡೆಸಬಹುದು. ಇದು ಎಚ್‌ಸಿಜಿ ದತ್ತಾಂಶ ನೋಂದಣಿಯಲ್ಲಿ ತಮ್ಮ ವೈದ್ಯಕೀಯ ದಾಖಲೆಗಳನ್ನು ನೋಡಲು ಅವರಿಗೆ ಅಧಿಕಾರ ನೀಡುತ್ತದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ ಎಚ್‌ಸಿಜಿ ರೋಗಿಗಳು, ಕಸ್ಟಮೈಸ್ ಮಾಡಿದ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದು ಅವರ ಅನುಕೂಲಕ್ಕೆ ಅನುಗುಣವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್ನಿನ ಮೂಲಕ ಅವರು ಔಷಧಿ ಖರೀದಿಸಬಹುದು, ತಜ್ಞರ ಮತ್ತು ಅಗತ್ಯ ಸಮಾಲೋಚನೆಯನ್ನು ಪಡೆಯಬಹುದು, ಜೊತೆಗೆ ಪೌಷ್ಟಿಕಾಂಶ ಮತ್ತು ಡಯಟ್‌ ಕುರಿತ ಸಲಹೆ ಪಡೆಯಬಹುದು. ಮನೆಯಿಂದಲೇ ಆರೋಗ್ಯ ಸೇವೆಗಳು ಮತ್ತು ಪುನರ್ವಸತಿ ಆರೈಕೆಯನ್ನು ಮಿತಿಯಿಲ್ಲದೆ ಬಳಸಿಕೊಳ್ಳಬಹುದು.

ಇದಲ್ಲದೆ, ಈ ವೇದಿಕೆ ಎಚ್‌ಸಿಜಿ ಯ ವೈದ್ಯರು ಮತ್ತು ವೈದ್ಯಕೀಯ ತಂಡಗಳಿಗೆ ರೋಗಿಗಳ ದಾಖಲೆಗಳನ್ನು ಕ್ರೋಢೀಕರಿಸಲು ಮತ್ತು ಒಂದೊಂದನ್ನು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ. ಸರಿಯಾಗಿ ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಚಿಕಿತ್ಸೆಯ ಕ್ರಮವನ್ನು ನಮಗೆ ಬೇಕಾದಂತೆ ಕಸ್ಟಮೈಸ್ ಮಾಡಲು ಸುಧಾರಿತ ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಳ್ಳಲು ಈ ಅಪ್ಲಿಕೇಶನ್ ಎಚ್‌ಸಿಜಿ ಯ ವೈದ್ಯರಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಉತ್ತಮ ಫಲಿತಾಂಶ ಪಡೆಯಲು, ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಕ್ರಾಂತಿ ಮಾಡಲು ಇದು ನೆರವಾಗುತ್ತದೆ. ಎಚ್‌ಸಿಜಿ ಕೇರ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್‌ ನಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಇದು ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್‌ ಗಳಿಗೆ ಲಭ್ಯವಿದೆ.

ಹೆಲ್ತ್‌ ಕೇರ್‌ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಿಇಒ ಶ್ರೀ ರಾಜ್ ಗೋರೆ, “ಎಚ್‌ಸಿಜಿ ಕೇರ್ ಅಪ್ಲಿಕೇಶನ್‌ ನ ಮೂಲಕ ನಾವು ನಮ್ಮ ವೈದ್ಯರು, ಸಲಹೆಗಾರರು, ಪೌಷ್ಟಿಕಾಂಶ ತಜ್ಞರು, ಆಹಾರ ತಜ್ಞರು, ಔಷಧಿ ಸೂಚಿಸುವವರನ್ನು ಕ್ಯಾನ್ಸರ್ ಆರೈಕೆ ಮತ್ತು ಮಾರ್ಗದರ್ಶನ ಬಯಸುವವರಿಗೆ ಇನ್ನಷ್ಟು ಹತ್ತಿರ ತಂದಿದ್ದೇವೆ. ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳು ಚಿಕಿತ್ಸೆಯ ಸಮಯದಲ್ಲಿ ಒತ್ತಡದ ಪರಿಸ್ಥಿತಿ ಎದುರಿಸುತ್ತಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅವರಿಗೆ ಎಲ್ಲವನ್ನೂ ನಿಭಾಯಿಸಬಲ್ಲ ಸಹಾನುಭೂತಿಯುಳ್ಳ ಸಂಗಾತಿಯ ಅಗತ್ಯವಿರುತ್ತದೆ. ಈ ಡಿಜಿಟಲ್ ಸಾಧ್ಯತೆ, ಕ್ಯಾನ್ಸರ್ ಆರೈಕೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಹೀಗಾಗಿ ಕ್ಯಾನ್ಸರ್ ರೋಗಿಗಳು ಮತ್ತು ಅದನ್ನು ಗೆದ್ದು ಬಂದವರ ಚಿಕಿತ್ಸಾ ಚಕ್ರದುದ್ದಕ್ಕೂ ವೈಯಕ್ತಿಕ ಕ್ಯಾನ್ಸರ್ ಆರೈಕೆ ಮತ್ತು ಬೆಂಬಲವನ್ನು ಸ್ಥಿರವಾಗಿಸುವ ನಮ್ಮ ಬದ್ಧತೆಗೆ ಇದೇ ಸಾಕ್ಷಿ. ಆರೋಗ್ಯ ರಕ್ಷಣೆಯ ಉತ್ಕೃಷ್ಟತೆಗೆ ಮತ್ತು ಅತ್ಯುತ್ತಮ ಚಿಕಿತ್ಸೆಯ ಮೂಲಕ ಒಳ್ಳೆಯ ಫಲಿತಾಂಶಗಳನ್ನು ಸಾಧಿಸಲು ಬೇಕಾದ ದೃಢತೆ ನಮ್ಮ ಆದ್ಯತೆ. ಎಚ್‌ಸಿಜಿ ಮುಂದುವರಿದ ಜಾಗತಿಕ ಕ್ಯಾನ್ಸರ್ ಆರೈಕೆಯ ಮಟ್ಟ ತಲುಪಲು, ಹೊಸತನಕ್ಕೆ ಒಗ್ಗಿಕೊಂಡು, ಬೆಳವಣಿಗೆಯನ್ನು ಮೈಗೂಡಿಸಿಕೊಂಡಿದೆ. ರೋಗಿಯ ವೈಯಕ್ತಿಕ ಆರೋಗ್ಯ ಕಾಪಾಡಲು ಪ್ರಾಮುಖ್ಯತೆ ನೀಡುವುದು ನಮ್ಮ ಮೊದಲ ಆದ್ಯತೆ,” ಎನ್ನುತ್ತಾರೆ.

ಡಿಜಿಟಲ್ ಹೆಲ್ತ್‌ ಕೇರ್‌ ಪರಿವರ್ತನೆಯನ್ನು ಸಾಧಿಸಲು ಎಚ್‌ಸಿಜಿ ಮತ್ತು ಟೆಕ್ ಲೀಡರ್‌ ಗಳಾದ ಪಿಡಬ್ಲ್ಯೂಸಿ, ಸೇಲ್ಸ್‌ ಪೋರ್ಸ್‌ ಎ&ಎಂ, ಕ್ಲೌಡಾರ್ಕ್ ಮತ್ತು ಟಿಸಿಎಸ್ ನಡುವಿನ ಸಹಯೋಗದೊಂದಿಗೆ ಎಚ್‌ಸಿಜಿ ಕೇರ್ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ. ದಣಿದಿರುವ ರೋಗಿಗಳ ಹರಿವಿನ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತು ಎಚ್‌ಸಿಜಿ ಯ ಕ್ಯಾನ್ಸರ್ ತಜ್ಞರು ಮತ್ತು ರೋಗಿಗಳ ನಡುವೆ ಸಂವಹನ ಮಾರ್ಗಗಳನ್ನು ಹೆಚ್ಚಿಸುವ ಮೂಲಕ, ಇದು ಆರೋಗ್ಯ ತಂಡಗಳ ವಿಶ್ರಾಂತಿರಹಿತ ಸೇವೆಯನ್ನು ಖಚಿತಪಡಿಸುತ್ತದೆ.

`ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಸಿಗಲಿದೆ 2 ಲಕ್ಷ ರೂ.ವರೆಗೆ ಪ್ರೋತ್ಸಾಹಧನ

ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲಿ ಶೇ.75 ಕ್ಕಿಂತ ಹೆಚ್ಚಳ : ಇದೇ ಮೊದಲ ಬಾರಿಗೆ 1,300 ದಾಟಿದ ಸಿರಿವಂತರ ಸಂಖ್ಯೆ!

ಕ್ಯಾನ್ಸರ್‌ ರೋಗಿಗಳ ಆರೈಕೆಗಾಗಿ 'HGC ಕೇರ್‌ ಆಪ್‌' ಬಿಡುಗಡೆ ಮಾಡಿದ 'ಎಚ್‌ಸಿಜಿ ಆಸ್ಪತ್ರೆ' HCG Hospital launches 'HGC Care App' for care of cancer patients
Share. Facebook Twitter LinkedIn WhatsApp Email

Related Posts

ನೇಪಾಳದಲ್ಲಿ 3.8 ತೀವ್ರತೆಯ ಭೂಕಂಪ | Earthquake In Nepal

14/05/2025 7:28 PM1 Min Read

ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ: ಭಾರತದ ಹಣ್ಣಿನ ವ್ಯಾಪಾರಿಗಳಿಂದ ಟರ್ಕಿಶ್ ಸರಕು ಬಹಿಷ್ಕಾರ | #BoycottTurkey

14/05/2025 7:26 PM1 Min Read

ಟರ್ಕಿಯ ಇನೋನು ವಿಶ್ವವಿದ್ಯಾಲಯದೊಂದಿಗಿನ ಒಪ್ಪಂದ ಸ್ಥಗಿತಗೊಳಿಸಿದ ಜೆಎನ್‌ಯು

14/05/2025 6:55 PM1 Min Read
Recent News

ಬಾಗಲಕೋಟೆಯಲ್ಲಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನ ಮೇಲೆ ಹಲ್ಲೆ : ಆರೋಪಿ ಯುವಕ ಅರೆಸ್ಟ್

14/05/2025 8:37 PM

ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ: ಸಿಎಂ ಸಿದ್ದರಾಮಯ್ಯ

14/05/2025 8:26 PM

BREAKING : ಬಿಳಿಗಿರಿರಂಗನ ಬೆಟ್ಟದ ತಿರುವಿನಲ್ಲಿ ಸಚಿವ ವೆಂಕಟೇಶ್ ಪೈಲಟ್ ವಾಹನ ಪಲ್ಟಿ : PSI, ಚಾಲಕನಿಗೆ ಗಂಭೀರ ಗಾಯ

14/05/2025 8:08 PM

BREAKING : ಕೆಲಸ ಕೊಡಿಸೋದಾಗಿ ಆಮಿಷ ಒಡ್ಡಿ, 14 ಲಕ್ಷಕ್ಕೂ ಅಧಿಕ ವಂಚನೆ : ಸಿಸಿಬಿ ಪೊಲೀಸರಿಂದ ಕಂಪನಿ HR ಅರೆಸ್ಟ್

14/05/2025 7:48 PM
State News
KARNATAKA

ಬಾಗಲಕೋಟೆಯಲ್ಲಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನ ಮೇಲೆ ಹಲ್ಲೆ : ಆರೋಪಿ ಯುವಕ ಅರೆಸ್ಟ್

By kannadanewsnow0514/05/2025 8:37 PM KARNATAKA 1 Min Read

ಬಾಗಲಕೋಟೆ : ಕೇವಲ ಕ್ರಿಕೆಟ್ ಆಟದ ವಿಚಾರವಾಗಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನಿಗೆ ಯುವಕನೊಬ್ಬ ಇರಿದು ಹಲ್ಲೆಗೈದಿರುವ ಘಟನೆ…

ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ: ಸಿಎಂ ಸಿದ್ದರಾಮಯ್ಯ

14/05/2025 8:26 PM

BREAKING : ಬಿಳಿಗಿರಿರಂಗನ ಬೆಟ್ಟದ ತಿರುವಿನಲ್ಲಿ ಸಚಿವ ವೆಂಕಟೇಶ್ ಪೈಲಟ್ ವಾಹನ ಪಲ್ಟಿ : PSI, ಚಾಲಕನಿಗೆ ಗಂಭೀರ ಗಾಯ

14/05/2025 8:08 PM

BREAKING : ಕೆಲಸ ಕೊಡಿಸೋದಾಗಿ ಆಮಿಷ ಒಡ್ಡಿ, 14 ಲಕ್ಷಕ್ಕೂ ಅಧಿಕ ವಂಚನೆ : ಸಿಸಿಬಿ ಪೊಲೀಸರಿಂದ ಕಂಪನಿ HR ಅರೆಸ್ಟ್

14/05/2025 7:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.