Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರಿಗೆ ಮಾಡಿದ ದ್ರೋಹ ನೆನಪು ಮಾಡಿಕೊಳ್ಳಿ: ಆರ್. ಅಶೋಕ್ ಗೆ CM ಸಿದ್ಧರಾಮಯ್ಯ ತರಾಟೆ

05/08/2025 7:03 PM

ನವೆಂಬರ್ ನಲ್ಲಿ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಸುವರ್ಣ ಮಹೋತ್ಸವ: ಶಾಸಕ ಗೋಪಾಲಕೃಷ್ಣ ಬೇಳೂರು

05/08/2025 7:02 PM

ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’: ತಪ್ಪಿತಸ್ಥರನ್ನು ಬಚಾವ್ ಪ್ರಯತ್ನ ಮಾಡಬೇಡಿ- MLA ವಾರ್ನಿಂಗ್

05/08/2025 6:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫೆ.16ಕ್ಕೆ ಸಿಎಂ ಅವರಿಂದ ‘ಬಜೆಟ್ ಮಂಡನೆ’: ಜನಪ್ರಿಯ ಯೋಜನೆ ಘೋಷಣೆ ಸಾಧ್ಯತೆ
INDIA

ಫೆ.16ಕ್ಕೆ ಸಿಎಂ ಅವರಿಂದ ‘ಬಜೆಟ್ ಮಂಡನೆ’: ಜನಪ್ರಿಯ ಯೋಜನೆ ಘೋಷಣೆ ಸಾಧ್ಯತೆ

By kannadanewsnow0706/02/2024 5:48 AM

ಬೆಂಗಳೂರು: ಫೆಬ್ರವರಿ 16ರಂದು ಸಿಎಂ ಅವರು ಬಜೆಟ್ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಖಾದರ್ ಅವರು ವಿವರಿಸಿದರು.

ಫೆಬ್ರವರಿ 12ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾಡಲಾಗುವ ಭಾಷಣದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ಅಂಗೀಕಾರವಾಗಲಿದೆ. ರಾಜ್ಯಪಾಲರ ಭಾಷಣದ ನಂತರ 16ನೇ ವಿಧಾನಸಭೆಯ 2ನೇ ಅಧಿವೇಶನ ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿದ ಗಣ್ಯ ವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯಗಳನ್ನು ಮಂಡಿಸಲಾಗುವುದು.

ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. 10 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪಗಳನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದರು.

ಶಾಸಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳಿಗಾಗಿ ವಿಧಾನಸಭೆಯ ಸಭಾಂಗಣದಲ್ಲಿದ್ದ ಕ್ಯಾಂಟೀನ್ ಸೌಲಭ್ಯವನ್ನು ಈ ಹಿಂದಿನಂತೆ ವಿಧಾನಸೌಧದ ಮೊದಲನೇ ಮಹಡಿಯ ಪೂರ್ವಭಾಗದಲ್ಲಿರುವ ಸೆಂಟ್ರಲ್ ಹಾಲ್‍ನಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಸದನದಲ್ಲಿ ಉತ್ತರಿಸಲಾಗುವ ಪ್ರಶ್ನೆಗಳು, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಇತ್ಯಾದಿ ಸೂಚನೆಗಳನ್ನು ಸರಕಾರದವರು ನೀಡುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಮಾನ್ಯ ಸಂಸದರಿಗೆ ಹಾಗೂ ಪತ್ರಕರ್ತರಿಗೆ ಇ-ಮೇಲ್ ಮುಖಾಂತರ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಪತ್ರಕರ್ತರಿಗೆ ವಾರ್ತಾ ಇಲಾಖೆಯ ಮುಖಾಂತರ ಇ-ಮೇಲ್ ಕಳುಹಿಸಲಾಗುವುದು. ಅಲ್ಲದೇ ಸಚಿವಾಲಯದ ವೆಬ್‍ಸೈಟಿನಲ್ಲಿಯೂ ದೊರೆಯುತ್ತದೆ ಎಂದರು.

ಶಾಸಕರಿಗೆ ವೈವಿಧ್ಯಮಯ ಭೋಜನ: ಅಧಿವೇಶನ ಆರಂಭವಾದಾಗಿನಿಂದ ಮುಕ್ತಾಯವಾಗುವವರೆಗೆ 10 ದಿನಗಳ ಕಾಲ ಬೆಳಗ್ಗೆ 8ರಿಂದ 9ರವರೆಗೆ ಸದನದ ಸದಸ್ಯರಿಗೆ ಲಘು ಉಪಹಾರ ಮತ್ತು ನಿತ್ಯ ಮಧ್ಯಾಹ್ನ ಬೆಂಗಳೂರಿನ ವಿವಿಧ ಹೋಟಲ್‍ಗಳ ವೈವಿಧ್ಯಮಯವಾದ ರುಚಿಕರ, ಆರೋಗ್ಯ ಪೂರ್ಣವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಸ್ಪೀಕರ್ ಖಾದರ್ ಅವರು ವಿವರಿಸಿದರು. ಭದ್ರತೆಯನ್ನು ಇನ್ನಷ್ಟು ಉತ್ತಮಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಮಾಧ್ಯಮದವರು ಅತ್ಯುತ್ತಮ ವಿಷಯಗಳ ಕುರಿತು ಬೆಳಕು ಚೆಲ್ಲಿ ಸದನದ ಕಲಾಪಕ್ಕೆ ಮೆರಗು ನೀಡಬೇಕು ಎಂದು ಅವರು ಹೇಳಿದರು.

BIGG NEWS: ಮುಂದಿನ ಚುನಾವಣೆಯಲ್ಲಿ BJPಗೆ 370 CM to present budget on Feb 16 likely to announce populist schemes NDAಗೆ 405: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭವಿಷ್ಯ!
Share. Facebook Twitter LinkedIn WhatsApp Email

Related Posts

BREAKING : ’24 ಗಂಟೆಗಳಲ್ಲಿ ಭಾರತದ ಮೇಲೆ ಭಾರೀ ಸುಂಕ ವಿಧಿಸುತ್ತೇನೆ’, ಭಾರತ-ರಷ್ಯಾ ಸ್ನೇಹದಿಂದ ಸಿಟ್ಟಾದ ‘ಟ್ರಂಪ್’ ದೊಡ್ಡ ಘೋಷಣೆ

05/08/2025 6:28 PM1 Min Read

VIDEO : ಪ್ರವಾಹದಲ್ಲಿ ಪವಾಡ ; ಉತ್ತರಕಾಶಿಯಲ್ಲಿ ಅವಶೇಷಗಳಡಿ ಸಿಲುಕಿದ್ದ ಇಬ್ಬರು ಸಾವು ಸೋಲಿಸಿದ್ಹೇಗೆ ನೋಡಿ!

05/08/2025 6:10 PM1 Min Read

SHOCKING : ಉತ್ತರಾಖಂಡದ`ಮೇಘಸ್ಪೋಟ’ದಲ್ಲಿ ಕೊಚ್ಚಿ ಹೋದ ಜನ : ಭಯಾನಕ ವಿಡಿಯೋ ವೈರಲ್ | WATCH VIDEO

05/08/2025 6:08 PM1 Min Read
Recent News

BIG NEWS : ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರಿಗೆ ಮಾಡಿದ ದ್ರೋಹ ನೆನಪು ಮಾಡಿಕೊಳ್ಳಿ: ಆರ್. ಅಶೋಕ್ ಗೆ CM ಸಿದ್ಧರಾಮಯ್ಯ ತರಾಟೆ

05/08/2025 7:03 PM

ನವೆಂಬರ್ ನಲ್ಲಿ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಸುವರ್ಣ ಮಹೋತ್ಸವ: ಶಾಸಕ ಗೋಪಾಲಕೃಷ್ಣ ಬೇಳೂರು

05/08/2025 7:02 PM

ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’: ತಪ್ಪಿತಸ್ಥರನ್ನು ಬಚಾವ್ ಪ್ರಯತ್ನ ಮಾಡಬೇಡಿ- MLA ವಾರ್ನಿಂಗ್

05/08/2025 6:56 PM

ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಯನ ಪ್ರವಾಸಕ್ಕೆ ಅಪಸ್ವರ: ಒಲ್ಲೆಯೆಂದ ಆಡಳಿತ ಪಕ್ಷದ ಸದಸ್ಯರು

05/08/2025 6:49 PM
State News
KARNATAKA

BIG NEWS : ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರಿಗೆ ಮಾಡಿದ ದ್ರೋಹ ನೆನಪು ಮಾಡಿಕೊಳ್ಳಿ: ಆರ್. ಅಶೋಕ್ ಗೆ CM ಸಿದ್ಧರಾಮಯ್ಯ ತರಾಟೆ

By kannadanewsnow5705/08/2025 7:03 PM KARNATAKA 2 Mins Read

ಬೆಂಗಳೂರು: ಸಾರಿಗೆ ನೌಕರರ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರ…

ನವೆಂಬರ್ ನಲ್ಲಿ ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜು ಸುವರ್ಣ ಮಹೋತ್ಸವ: ಶಾಸಕ ಗೋಪಾಲಕೃಷ್ಣ ಬೇಳೂರು

05/08/2025 7:02 PM

ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’: ತಪ್ಪಿತಸ್ಥರನ್ನು ಬಚಾವ್ ಪ್ರಯತ್ನ ಮಾಡಬೇಡಿ- MLA ವಾರ್ನಿಂಗ್

05/08/2025 6:56 PM

ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಯನ ಪ್ರವಾಸಕ್ಕೆ ಅಪಸ್ವರ: ಒಲ್ಲೆಯೆಂದ ಆಡಳಿತ ಪಕ್ಷದ ಸದಸ್ಯರು

05/08/2025 6:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.