ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಮಠಾಧಿಪತಿಗಳನ್ನು ಹೊರಗಡೆ ನಿಲ್ಲಿಸುವ ಜಾತಿ ವ್ಯವಸ್ಥೆ ಮಾಡಿದನ್ನು ಕಂಡು ಹೊಸದುರ್ಗ ಕೆಲ್ಲೋಡಿನ ಕನಕ ಶಾಖಾ ಮಠ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ಕಳೆದ ತಿಂಗಳು ಏಕಾದಶಿ ಪ್ರಯುಕ್ತ ದೇವರ ದರ್ಶನಕ್ಕೆ ಭಗೀರಥ ಶ್ರೀ, ಕುಂಚಿಟಿಗ ಶ್ರೀಗಳು ಜೊತೆ ಹೊಸದುರ್ಗ ತಾಲ್ಲೂಕಿನ ಬಾಗೂರಿನ ಚನ್ನಕೇಶವ ದೇವಾಲಯಕ್ಕೆ ತೆರಳಿದ್ದೆವು. ಆ ದೇಗುಲದಲ್ಲಿ ಗರ್ಭಗುಡಿಗೆ ಪೂಜಾರಿ ಹೆಣ್ಣು ಮಕ್ಕಳು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ, ಆದರೆ ನಮಗೆ ಒಳಗೆ ಹೋಗಲು ಅನುಕೂಲ ಮಾಡಿಕೊಟ್ಟಿಲ್ಲ ಅಂತ ಹೇಳಿದರು . ಇನ್ನೂ ನಾವು ಯಾರೂ ಗರ್ಭಗುಡಿ ಪ್ರವೇಶ ಮಾಡುವ ಚಿಂತನೆ ಇಲ್ಲ ಆದರೆ ಆ ತಾರತಮ್ಯ ಯಾರೂ ಕೂಡ ಮಾಡಬಾರದು. ಪೂಜಾರಿ ಹೆಣ್ಣ ಮಕ್ಕಳಿಗೆ ಅವಕಾಶ ಇದೆ, ಬೇರೆಯವರಿಗೆ ಅವಕಾಶ ಇಲ್ಲ ಅಂದರೆ ಹೇಗೆ? ಅಂತ ಪ್ರಶ್ನೆ ಮಾಡಿದರು. ಇನ್ನೂ ಅರ್ಚಕ ಶ್ರೀನಿವಾಸ್ ಅವರು ಮಾತನಾಡಿದ್ದು, ನಮ್ಮ ದೇವಸ್ತಾನದಲ್ಲಿ ಈ ಕೆಲಸ ಮಾಡಿಲ್ಲ, ಎಲ್ಲೂ ಕೂಡ ಲೋಪ ಆಗಿಲ್ಲ, ಮುಂದೆ ಕೂಡ ಆಗೋದಿಲ್ಲ. ಈ ಹಿಂದೆ ಮಾಡಿದ್ದ ಸತ್ಕಾರವನ್ನು ಅವರಿಗೆ ಮಾಡಲಾಗಿದೆ ಅಂತ ಹೇಳಿದರು. ಇನ್ನೂ