ನವದೆಹಲಿ: ಬಿಹಾರದಲ್ಲಿ ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು, ಇಂಡಿಯಾ ಮೈತ್ರಿಕೂಟದಿಂದ ನಿತೀಶ್ ಕುಮಾರ್ ಹೊರ ನಡೆದಿದ್ದರು. ಈ ಬೆನ್ನಲ್ಲೇ ಇಂಡಿಯಾ ಮೈತ್ರಿ ಕೂಟಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಅದೇ ಶಿವಸೇನೆ ಕೂಡ ಹೊರ ನಡೆಯಲಿದೆ ಎಂಬುದಾಗಿ ಹೇಳಲಾಗುತ್ತಿದೆ.
ಇಂಡಿಯಾ ಮೈತ್ರಿಕೂಟದೊಂದಿಗೆ ವಿವಿಧ ಮಿತ್ರ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಸಮರ ಸಾರೋದಕ್ಕೆ ಒಂದಾದ ಬೆನ್ನಲ್ಲೇ, ಅದರೊಟ್ಟಿಗೆ ಕೈ ಜೋಡಿಸಿದ್ದಂತ ಕೆಲ ಪಕ್ಷದ ನಾಯಕರು ಹೊರ ನಡೆಯೋ ಚಿಂತನೆಯಲ್ಲಿ ತೊಡಗಿದ್ದಾರೆ.
ಬಿಹಾರದಲ್ಲಿ ಮೊದಲು ಇಂಡಿಯಾ ಮೈತ್ರಿಕೂಟದಿಂದ ಹೊರ ನಡೆದಂತ ಸಿಎಂ ನಿತೀಶ್ ಕುಮಾರ್, ಮತ್ತೊಮ್ಮೆ ಸಿಎಂ ಗಾಧಿಗೆ ಏರಿದ್ದರು. ಆ ಮೂಲಕ ದೊಡ್ಡ ಶಾಕ್ ಅನ್ನು ಇಂಡಿಯಾ ಮೈತ್ರಿ ಕೂಟಕ್ಕೆ ನೀಡಿದ್ದರು.
ಇದೀಗ ಜೆಡಿಯು ಬೆನ್ನಲ್ಲೇ ಇಂಡಿಯಾ ಮೈತ್ರಿ ಕೂಡದಿಂದ ಶಿವಸೇನೆ ಹೊರಕ್ಕೆ ನಡೆಯಲಿದೆ ಎನ್ನಲಾಗುತ್ತಿದೆ. ಮೈತ್ರಿ ಕೂಟದಿಂದ ಸೀಟು ಹಂಚಿಕೆಯ ವಿಚಾರದ ಸಿಟ್ಟಿನಿಂದಾಗಿ ಹೊರ ನಡೆಯೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜೆಡಿಯು ಹೊರ ನಡೆದಂತೆ ಶಿವಸೇನೆ ಕೂಡ ಶೀಘ್ರವೇ ಇಂಡಿಯಾ ಮೈತ್ರಿ ಕೂಟದಿಂದ ಹೊರ ನಡೆಯೋ ಎಲ್ಲಾ ಲಕ್ಷಣಗಳು ತೋರಿ ಬಂದಿವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.
ಶಿವಮೊಗ್ಗ: ಜ.31ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
‘ರೈತ’ರಿಗೆ ಗುಡ್ ನ್ಯೂಸ್: ಶೇ.50ರಷ್ಟು ರಿಯಾಯಿತಿ ದರದಲ್ಲಿ ‘ಕೃಷಿ ಉಪಕರಣ’ ಪಡೆಯಲು ಅರ್ಜಿ ಆಹ್ವಾನ