ನವದೆಹಲಿ : ಸೈಬರ್ ಕ್ರಿಮಿನಲ್ಗಳು ಜನರಿಂದ ಹಣ ವಸೂಲಿ ಮಾಡುವ ಯಾವ ಅವಕಾಶವನ್ನೂ ಬಿಡುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಯಾವುದೇ ವಿಷಯವನ್ನ ಲೂಟಿ ಮಾಡುವ ಮಾರ್ಗವಾಗಿ ಪರಿವರ್ತಿಸಿಕೊಳ್ತಾರೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ರಾಮಮಂದಿರದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋಟ್ಯಾಂತರ ಹಿಂದೂಗಳು ರಾಮಮಂದಿರ ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಸೈಬರ್ ಕ್ರಿಮಿನಲ್ಗಳು ಇದನ್ನೇ ಟಾರ್ಗೇಟ್ ಮಾಡಿಕೊಂಡಿದ್ದಾರೆ. ಅಂದ್ಹಾಗೆ, ಇದೇ ತಿಂಗಳ 22ರಂದು ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ರಾಮಮಂದಿರ ಉದ್ಘಾಟನೆಯಾಗಲಿದೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ವಿಐಪಿ ಟಿಕೆಟ್ ಹೆಸರಿನಲ್ಲಿ ಎಪಿಕೆ ಫೈಲ್ ವಾಟ್ಸಾಪ್’ಗೆ ರವಾನೆಯಾಗುತ್ತಿದೆ. ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದನ್ನು ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ವಿವರಗಳು ಹಾಗೂ ಬ್ಯಾಂಕ್ ಖಾತೆ ವಿವರಗಳು ಕಳ್ಳತನವಾಗುವ ಸಾಧ್ಯತೆ ಇದೆ. ಈ ಬಗ್ಗೆ ಟಿಎಸ್ಆರ್ಟಿಸಿ ಎಂಡಿ ಸಜ್ಜನರ್ ಟ್ವೀಟ್ ಮಾಡಿದ್ದಾರೆ.
Beware of the APK file in the name of Ram Mandir Inaugural
‘అయోధ్య రామ మందిర ప్రారంభోత్సవ ఈవెంట్కు వీఐపీ టికెట్లు కావాలా? అయితే ఈ లింక్ క్లిక్ చేయండి. డైరక్ట్గా ఈ ఏపీకే ఫైల్ ను డౌన్లోడ్ చేసుకోండి." అని మీకు వాట్సాప్లో మెసేజ్ వచ్చిందా? అయితే తస్మాత్ జాగ్రత్త! ఇలాంటి… pic.twitter.com/u0ta3bznBO
— V.C. Sajjanar, IPS (@SajjanarVC) January 13, 2024
“‘ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ವಿಐಪಿ ಟಿಕೆಟ್ ಬೇಕೇ? ಹಾಗಿದ್ರೆ, ಈ ಲಿಂಕ್ ಕ್ಲಿಕ್ ಮಾಡಿ. ಈ apk ಫೈಲ್ ನೇರವಾಗಿ ಡೌನ್ಲೋಡ್ ಮಾಡಿ’ ಎನ್ನುವ ನಿಮಗೆ WhatsApp ಸಂದೇಶ ಬಂದಿದೆಯೇ.? ಹಾಗಿದ್ರೆ, ತಸ್ಮಾತ್ ಎಚ್ಚರ.! ಅಂತಹ ಸಂದೇಶದಲ್ಲಿರುವ ಲಿಂಕ್ಗಳ ಮೇಲೆ ನೀವು ಕ್ಲಿಕ್ ಮಾಡಿದರೂ ಅಥವಾ APK ಫೈಲ್ಗಳನ್ನ ಡೌನ್ಲೋಡ್ ಮಾಡಿದ್ರೆ ಅಷ್ಟೇ! ಸೈಬರ್ ಅಪರಾಧಿಗಳು ನಿಮ್ಮ ಡೇಟಾವನ್ನ ಕದಿಯುತ್ತಾರೆ. ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ ವಿವರಗಳನ್ನು ಕಳುವಾಗಲಿದೆ ಮತ್ತು ವಂಚನೆಗಳನ್ನ ಮಾಡಲಾಗುತ್ತದೆ ಎಂದು ಸಜ್ಜನರ್ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
BIGG NEWS : ಇನ್ಸ್ಟಾಗ್ರಾಂ ಸಹ ಸಂಸ್ಥಾಪಕರು ರಚಿಸಿದ ಸುದ್ದಿ ಸಂಗ್ರಹಣೆ ಸ್ಟಾರ್ಟ್ಅಪ್ ‘Artifact’ ಕ್ಲೋಸ್
BIG NEWS: ‘ಆಪರೇಷನ್ ಸರ್ವಶಕ್ತಿ’: ಜಮ್ಮು-ಕಾಶ್ಮೀರದಲ್ಲಿ ‘ಭಾರತೀಯ ಸೇನೆ’ಯಿಂದ ‘ಭಯೋತ್ಪಾದನಾ ವಿರೋಧಿ ಅಭಿಯಾನ’
“ಭಾರತದ ಜೊತೆ ಸಮಾಲೋಚನೆ ನಡೆಸದೇ ವಿಶ್ವದ ಯಾವುದೇ ಪ್ರಮುಖ ವಿಷಯ ನಿರ್ಧರಿಸೋದಿಲ್ಲ” : ಸಚಿವ ಜೈಶಂಕರ್