Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೇಜಾನ್ ಪ್ರೈಮ್ ಚಂದಾದಾರರ ಗಮನಕ್ಕೆ: ಜೂ.17ರಿಂದ ಭಾರತದಲ್ಲಿ ಚಲನಚಿತ್ರದ ವೇಳೆ ಜಾಹೀರಾತು ಪ್ರಸಾರ | Amazon Prime Video

13/05/2025 5:29 PM

ರಷ್ಯಾದಿಂದ ಹೆಚ್ಚುವರಿ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾದ ಭಾರತ: ಮೂಲಗಳು | S-400 missile defence systems

13/05/2025 5:15 PM

8 ಸೆಂ.ಮೀ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

13/05/2025 5:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ಇಂದಿನ ‘ಡಿಸಿಎಂ ಡಿಕೆಶಿ’ ಬೆಂಗಳೂರಿನ ‘ಬಾಗಿಲಿಗೆ ಬಂತು ಸರ್ಕಾರ’ ಕಾರ್ಯಕ್ರಮದ ಹೈಲೈಟ್ಸ್
KARNATAKA

ಹೀಗಿದೆ ಇಂದಿನ ‘ಡಿಸಿಎಂ ಡಿಕೆಶಿ’ ಬೆಂಗಳೂರಿನ ‘ಬಾಗಿಲಿಗೆ ಬಂತು ಸರ್ಕಾರ’ ಕಾರ್ಯಕ್ರಮದ ಹೈಲೈಟ್ಸ್

By kannadanewsnow0905/01/2024 7:16 PM

ಬೆಂಗಳೂರು : ದೃಷ್ಟಿಯಿಲ್ಲದ ಯುವತಿಗೆ ಕೆಲಸ, ಬಿಡಿಎ ಫ್ಲಾಟ್, ಬಡವರ ಜಾಗ ರಕ್ಷಣೆಗೆ ಅಧಿಕಾರಿಗಳಿಗೆ ತಾಕೀತು, ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡದ ಅಧಿಕಾರಿಗಳ ತರಾಟೆ, ದಯಾಮರಣ ಕೋರಿ ಬಂದವರಿಗೆ ಸಾಂತ್ವನ, ಆರ್ಥಿಕ ನೆರವು. ಹೀಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟ ಹೊತ್ತು ಬಂದ ಜನರಿಗೆ ಪರಿಹಾರ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಕಾರ್ಯವೈಖರಿ ಮೂಲಕ ಜನರ ಮನಗೆದ್ದರು.

ಯಲಹಂಕ ನ್ಯೂ ಟೌನ್ ನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಮನವಿ ಸಲ್ಲಿಸಲು ಬಂದಂತಹ ಸಾರ್ವಜನಿಕರ ಅಹವಾಲುಗಳನ್ನು ಕೂಲಂಕುಷವಾಗಿ ಆಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಮಸ್ಯೆಗಳಿಗೆ ಪರಿಹಾರ ಹೇಳಿದರು.

ನಿನ್ನ ಭೂಮಿಯನ್ನು ಯಾರಿಗೂ ಕೊಡಬೇಡ.., ಜಾಗ ಉಳಿಸಿಕೋ…, ಅಳಬೇಡಮ್ಮ ನಮ್ಮ ಸರ್ಕಾರವಿದೆ, ನಾನಿದ್ದೇನೆ, ನಿನ್ನ ಜಾಗದಲ್ಲೇ ಇರು, ಅದನ್ನು ಬಿಡಬೇಡ, ಎಂಜಿನಿಯರ್ ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಯಬೇಕು ಎಂಬ ತಾಕೀತು ಮತ್ತು ಸಾಂತ್ವನದ ಮಾತುಗಳು ಕಂಗಾಲಾಗಿ ಬಂದವರ ಮುಖದಲ್ಲಿ ಭರವಸೆಯ ರೇಖೆ ಮೂಡಿಸಿತು.

ಸುಮಾರು 3 ಸಾವಿರ ಮನವಿಗಳನ್ನು ಸ್ವೀಕರಿಸಿದ ಅವರು, ಸ್ಥಳದಲ್ಲೇ ಇದ್ದಂತಹ ಕಂದಾಯ ಅಧಿಕಾರಿಗಳಿಗೆ “ಏನ್ರೀ ಇದು, ಈ ಭಾಗದಲ್ಲಿ ಇಷ್ಟೊಂದು ಭೂಮಿಯ ಸಮಸ್ಯೆ ಇದೆ. ಎಲ್ಲಾ ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡಲು ಏನಾಗಿದೆ ನಿಮಗೆ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದೃಷ್ಟಿದೋಷವುಳ್ಳ ಯುವತಿಗೆ ಬಿಡಿಎ ಫ್ಲಾಟ್, ಬಿಬಿಎಂಪಿ ಕೆಲಸ

“ಬಿಬಿಎಂಪಿ ಆಫೀಸ್ ಅಲ್ಲಿ ಕೆಲಸ ಮತ್ತು ಬಿಡಿಎ ಫ್ಲಾಟ್ ಕೊಡುವ ವ್ಯವಸ್ಥೆ ಮಾಡುತ್ತೇನೆ” ಎಂದು ದಾಸರಹಳ್ಳಿಯ ಹಿವ್ಯಾಂಜಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಯ ನೀಡಿದರು.

ದೃಷ್ಟಿದೋಷವಿದ್ದರೂ ಬಿ.ಎ ಪದವಿ ಪೂರ್ಣ ಮಾಡಿದ್ದೇನೆ. ಮನೆ ಮತ್ತು ಕೆಲಸ ಬೇಕು ಎಂದು ಹಿವ್ಯಾಂಜಲಿ ಮನವಿ ಸಲ್ಲಿಸಿದಾಗ, ಬಿಡಿಎ ಆಯುಕ್ತ ಜಯರಾಮ್ ಅವ್ರಿಗೆ “ಅಂಗವಿಲರ ಕೋಟಾದ ಅಡಿಯಲ್ಲಿ ಫ್ಲಾಟ್ ವ್ಯವಸ್ಥೆ ಮಾಡಿ” ಎಂದರು. ಅದೇ ರೀತಿ ಪಾಲಿಕೆಯಲ್ಲಿ ಕೆಲಸ ಕೊಡುವಂತೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.

ಇಂತಹ ಅನೇಕ ಭಾವುಕ ಕ್ಷಣಗಳಿಗೆ ಯಲಹಂಕದಲ್ಲಿ ಇಂದು ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ಸಾಕ್ಷಿಯಾಯಿತು.

ದಯಾಮರಣ ಕೊಡಲು ಬಂದಿಲ್ಲ, ಸಮಸ್ಯೆ ಬಗೆಹರಿಸಲು ಬಂದಿದ್ದೇನೆ

“ನಾನು ದಯಾಮರಣ ಕೊಡಲು ಬಂದಿಲ್ಲಮ್ಮ. ನಿನ್ನ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ” ಎಂದು ದಾಸರಹಳ್ಳಿಯ ರಾಧಮ್ಮ ಅವರಿಗೆ ಭರವಸೆ ನೀಡಿದರು.

ಬಿಪಿಎಲ್ ಕಾರ್ಡಿಲ್ಲ, ಕಿಡ್ನಿ ಹಾಳಾಗಿರುವುದರಿಂದ ಜೀವನವೇ ಸಾಕಾಗಿದೆ, ದಯಾಮರಣ ಕೊಡಿ ಎಂದು ಕಣ್ಣೀರಾದ ರಾಧಮ್ಮ ಅವರಿಗೆ ಜೇಬಲ್ಲಿ ಕೈಗೆ ಸಿಕ್ಕಷ್ಟು ಹಣ ತೆಗೆದು ನೀಡಿದ ಡಿಸಿಎಂ ಅವರು “ಅಳಬೇಡಮ್ಮ ನಾನಿದ್ದೇನೆ” ಎಂದರು.

“ಸಾರ್ ನಮ್ಮ ಮನೆ ನೀರಿನ ಮೀಟರ್ ಓಡುತ್ತದೆ, ಆದರೆ ನೀರೆ ಬರುತ್ತಿಲ್ಲ” ಎಂಬ ಗಂಗೇಗೌಡ ಅವರ ಮನವಿಗೆ ಸ್ಪಂದಿಸಿದ ಡಿಸಿಎಂ,
“ಜಲಮಂಡಳಿ ಎಂಜಿನಿಯರ್ ಒಂದು ವಾರದೊಳಗೆ ಇವರ ಮನೆ ನೀರಿನ ಸಮಸ್ಯೆ ಬಗೆಹರಿಯಬೇಕು. ಗಂಗೇಗೌಡರೇ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದ ಡಿಸಿಎಂ ಮಾತಿಗೆ ಸಭಿಕರಿಂದ ಚಪ್ಪಾಳೆ

ಮಹಿಳೆಯರಿಗೆ ಕೊಟ್ಟಿದ್ದಕ್ಕೆ ಕಣ್ಣು ಹಾಕುತ್ತಿದ್ದಾರೆ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದಂತೆ ಪುರುಷರಿಗೂ ನೀಡಿ ಎಂದು ಯಲಹಂಕ ಹಿರಿಯ ನಾಗರಿಕರ ವೇದಿಕೆಯವರ ಮನವಿಗೆ “ಮಹಿಳೆಯರಿಗೆ ಕೊಟ್ಟಿದ್ದಕ್ಕೆ ಕಣ್ಣು ಹಾಕುತ್ತಿದ್ದಾರೆ. ಪುರುಷರಿಗೆ ಕೊಡಲು ಆಗಲ್ಲ” ಎಂದು ನಗುತ್ತಲೇ ಡಿಸಿಎಂ ಉತ್ತರಿಸಿದರು.

ವಿದ್ಯಾರಣ್ಯಪುರದ ಬೀದಿ ಬದಿ ಪಡ್ಡು ವ್ಯಾಪಾರಿ ವಲ್ಲಿಮಾ ಅವರು ರಸ್ತೆ ಬದಿ ವ್ಯಾಪಾರ ಮಾಡಲು ಅವಕಾಶ ನೀಡಿ ಎಂದಾಗ “ತಳ್ಳುವ ಗಾಡಿ ಕೊಡಿಸುತ್ತೇನೆ, ಆಗಬಹುದಾ” ಎಂದರು.

“ಯಾವುದೇ ಕಾರಣಕ್ಕೂ ಜಾಗ ಬಿಡಬೇಡ, ಅಲ್ಲಿಯೇ ಇರು ನಾನಿದ್ದೇನೆ ” ಎಂದು ಲೇಔಟ್ ನವರು ನನ್ನ ಜಾಗ ನುಂಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡ ಗಾಣಿಗರಹಳ್ಳಿಯ ಜಗದೀಶನಿಗೆ ಅಭಯ ನೀಡಿದರು.

“ಸಾರ್ 450 ಅಡಿ ಜಾಗಕ್ಕೆ 1.90 ಲಕ್ಷ ತೆರಿಗೆ ಬಂದಿದೆ ಎಂದು ಹೆಬ್ಬಾಳ ಅಮಾನಿಕೆರೆ ನಿವಾಸಿ ರಾಮಚಂದ್ರ ಅವರ ಮನವಿ ಪಡೆದು ಅಧಿಕಾರಿಗಳ ಬಳಿ ಸಮಾಲೋಚನೆ ನಡೆಸಿ”, ಇಷ್ಟೊಂದು ತೆರಿಗೆ ಹಾಕುವುದು ಅನ್ಯಾಯ. ತೆರಿಗೆಯನ್ನು ಪರಿಷ್ಕರಿಸಿ, ನಂತರದ ಬೆಳವಣಿಗೆಯನ್ನು ನನ್ನ ಗಮನಕ್ಕೆ ತನ್ನಿ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.

“ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ಡಿಸಿ ಮನೆಗೇ ಹೋಗು, ಅವರನ್ನು ಬಿಡಬೇಡ” ಎಂದು ಜಮೀನು ವಿವಾದ ಬಗೆಹರಿಸಿ ಎಂದು ಮನವಿ ಸಲ್ಲಿಸಿದ ಅರಕೆರೆಯ ಓಬಣ್ಣ ಅವರಿಗೆ ಹೇಳಿದರು.

ನಿವೃತ್ತ ಸೈನಿಕರ ನಿವೇಶನ ತೊಂದರೆ, ರಾಜಕಾಲುವೆ ಒತ್ತುವರಿ, ಶಿವರಾಂ ಕಾರಂತ ಬಡಾವಣೆ ಸಮಸ್ಯೆ ಎನ್ಇಎಸ್ ಮೇಲ್ಸೇತುವೆ ಕಾಮಗಾರಿ, ಅಂಗನವಾಡಿ ಸಮಸ್ಯೆ, ಮಾಶಾಸನ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಡಿಸಿಎಂ ಪರಿಹಾರ ನೀಡಿದರು.

ಸರ್ಕಾರ ಮತ್ತು ಡಿಸಿಎಂ ಅವರ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರ ಶ್ಲಾಘನೆ

ಬಾಗಿಲಿಗೆ ಬಂತು ಸರಕಾರ ಸೇವೆ ಎನ್ನುವುದು ವಿನೂತನ ಮತ್ತು ವಿಶಿಷ್ಠವಾದ ಕಾರ್ಯಕ್ರಮವಾಗಿದ್ದು, ಇದಕ್ಕೆ ನಮ್ಮ ಬೆಂಬಲಿದೆ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೆಲಸಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರ ಪುತ್ರ ಎಂದ ವಿಶ್ವನಾಥ್

ಡಿಸಿಎಂ ಅವರ ಒಂದಷ್ಟು ಗುಣಗಳನ್ನು ನಾನು ಅಳವಡಿಸಿಕೊಂಡಿದ್ದೇನೆ. ಹಿಡಿದ ಕೆಲಸ ಮುಗಿಸುವ ಛಲ ಉಳ್ಳವರು, ಆತ್ಮಸ್ಥೈರ್ಯದಿಂದ ಎಲ್ಲವನ್ನು ಎದುರಿಸುವ ಗುಣ ಉಳ್ಳವರು ಎಂದರು.

ಬೆಂಗಳೂರನ್ನು ಅಭಿವೃದ್ಧಿ ಮಾಡುವ ಇಚ್ಚಾಶಕ್ತಿ, ಧೈರ್ಯ ಮತ್ತು ತಾಕತ್ತು ಎರಡೂ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಬೆಂಗಳೂರಿನ ಅಭಿವೃದ್ಧಿಗೆ ಮುಂದಿನ ಬಜೆಟ್ ಅಲ್ಲಿ ಉತ್ತಮ ಅನುದಾನ ಕೊಡಬೇಕು. ಪಕ್ಷ ಭೇದ ಮರೆತು ನಾವು ಡಿ.ಕೆ.ಶಿವಕುಮಾರ್ ಅವರಿಗೆ ಸಹಕಾರ ಕೊಡುತ್ತೇವೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಅವರು ಹೇಳಿದರು.

ನಿಮ್ಮ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಬೇಕು. ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಬೆಂಗಳೂರಿಗೆ ಶಾಶ್ವತ ಕೊಡುಗೆ ಕೊಟ್ಟಂತೆ ನೀವೂ ಶಾಶ್ವತ ಕೊಡುಗೆಯನ್ನು ನಿಮ್ಮ ಅವಧಿಯಲ್ಲಿ ಬೆಂಗಳೂರಿಗೆ ಕೊಡಬೇಕು ಎಂದು ಮನವಿ ಮಾಡಿದರು.

BREAKING: ‘ಡಿಸಿಎಂ ಡಿಕೆಶಿ’ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್: ಹೈಕೋರ್ಟ್ ‘ವಿಸ್ತೃತ ಪೀಠ’ಕ್ಕೆ ಪ್ರಕರಣ ವರ್ಗಾವಣೆ

ಗಮನಿಸಿ: ‘KSRTC ತಾಂತ್ರಿಕ ಸಹಾಯಕ ಹುದ್ದೆ’ಯ ‘ಸಂಭವನೀಯ ಆಯ್ಕೆ ಪಟ್ಟಿ’ ಪ್ರಕಟ

Share. Facebook Twitter LinkedIn WhatsApp Email

Related Posts

8 ಸೆಂ.ಮೀ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

13/05/2025 5:09 PM1 Min Read

BIG NEWS : ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ : ಹಲವಾರು ಅವಾಂತರ, ವಾಹನ ಸವಾರರ ಪರದಾಟ

13/05/2025 5:04 PM1 Min Read

ಅಗ್ನಿ ಅವಘಡದ ಗೋದಾಮು ಟೂಲ್ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ್ದು, ತಮ್ಮ ಒಡೆತನದಲ್ಲಿಲ್ಲ: ಶೆಲ್ ಕಂಪನಿ ಸ್ಪಷ್ಟನೆ

13/05/2025 4:51 PM1 Min Read
Recent News

ಅಮೇಜಾನ್ ಪ್ರೈಮ್ ಚಂದಾದಾರರ ಗಮನಕ್ಕೆ: ಜೂ.17ರಿಂದ ಭಾರತದಲ್ಲಿ ಚಲನಚಿತ್ರದ ವೇಳೆ ಜಾಹೀರಾತು ಪ್ರಸಾರ | Amazon Prime Video

13/05/2025 5:29 PM

ರಷ್ಯಾದಿಂದ ಹೆಚ್ಚುವರಿ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾದ ಭಾರತ: ಮೂಲಗಳು | S-400 missile defence systems

13/05/2025 5:15 PM

8 ಸೆಂ.ಮೀ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

13/05/2025 5:09 PM

ಹೀಗಿದೆ ಪ್ರಧಾನಿ ಮೋದಿ ಭಾರತೀಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಭಾಷಣದ ಪ್ರಮುಖ ಹೈಲೈಟ್ಸ್ | PM Modi Speech

13/05/2025 5:04 PM
State News
KARNATAKA

8 ಸೆಂ.ಮೀ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

By kannadanewsnow0913/05/2025 5:09 PM KARNATAKA 1 Min Read

ಬೆಂಗಳೂರು: ಅತಿ ಅಪರೂಪದಲ್ಲಿ 8 ಸೆಂ.ಮೀಟರ್‌ನ ಅತಿದೊಡ್ಡ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ಶಾಲಾ ವಿದ್ಯಾರ್ಥಿಗೆ ಫೋರ್ಟಿಸ್‌ ಆಸ್ಪತ್ರೆ…

BIG NEWS : ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ : ಹಲವಾರು ಅವಾಂತರ, ವಾಹನ ಸವಾರರ ಪರದಾಟ

13/05/2025 5:04 PM

ಅಗ್ನಿ ಅವಘಡದ ಗೋದಾಮು ಟೂಲ್ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ್ದು, ತಮ್ಮ ಒಡೆತನದಲ್ಲಿಲ್ಲ: ಶೆಲ್ ಕಂಪನಿ ಸ್ಪಷ್ಟನೆ

13/05/2025 4:51 PM

GOOD NEWS: ‘PF ಚಂದಾದಾರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಬಡ್ಡಿದರ ‘ಶೇ.7.1’ರಷ್ಟು ನಿಗದಿ | PF Interest Rate

13/05/2025 4:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.