Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಒಂದೇ ದಿನಕ್ಕೆ ಸೊರಬದ ಉಳವಿಯಿಂದ ಅಂಬಲಿಗೋಳ ತಲುಪಿದ ಕಾಡಾನೆ, ನಾಳೆ ಶೆಟ್ಟಿಹಳ್ಳಿ ಕಡೆಗೆ ಕಾರ್ಯಾಚರಣೆ

13/12/2025 10:18 PM

Good News ; ಉದ್ಯೋಗಿಗಳಿಗೆ ಶುಭ ಸುದ್ದಿ ; ಖಾತೆಗೆ 52 ಸಾವಿರ ರೂ. ಜಮಾ.?

13/12/2025 10:00 PM

ಹಗಲಿನಲ್ಲಿ ‘ನಿದ್ದೆ’ ಮಾಡಿದ್ರೆ ಏನಾಗುತ್ತೆ.? ಒಂದು ಸಣ್ಣ ನಿದ್ರೆಯಿಂದ ಇಷ್ಟೆಲ್ಲಾ ಆಗಲು ಸಾಧ್ಯವೇ.?

13/12/2025 9:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಯವ್ಯ ಸಾರಿಗೆಗೆ ‘425 ಸಿಸಿ ಕ್ಯಾಮೆರಾ’ ಬಸ್: ’15 ದಿನದ ಡಾಟಾ’ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ
KARNATAKA

ವಾಯವ್ಯ ಸಾರಿಗೆಗೆ ‘425 ಸಿಸಿ ಕ್ಯಾಮೆರಾ’ ಬಸ್: ’15 ದಿನದ ಡಾಟಾ’ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ

By kannadanewsnow0913/06/2024 6:48 PM

ಬೆಂಗಳೂರು: ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಇದೇ ಸಲುವಾಗಿ ವಾಯವ್ಯ ಸಾರಿಗೆಗೆ 425 ಸಿಸಿ ಕ್ಯಾಮೆರಾ ಬಸ್ ಪರಿಚಯಿಸಲಾಗುತ್ತಿದೆ. ಈ ಬಸ್ ಗಳಲ್ಲಿ ಮುಂದೆ- ಹಿಂದೆ ಒಂದೊಂದು ಕ್ಯಾಮೆರಾಗಳು ಇರಲಿದ್ದಾವೆ. 15 ದಿನದ ಡಾಟಾ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಕೂಡ ಹೊಂದಿದೆ.

ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಸಿ ಕ್ಯಾಮೆರಾವುಳ್ಳ 425 ಬಸ್ಗಳು ಸೇರ್ಪಡೆಯಾಗಿವೆ. ಇದರಿಂದ ಚಾಲಕರ ಆಟೋಟಾಪಕ್ಕೆ ಕಡಿವಾಣ, ಸಾರಿಗೆ ಸಂಸ್ಥೆಯ ಮೇಲೆ ಅಪಘಾತ ಪರಿಹಾರಕ್ಕಾಗಿ ದಾಖಲಾಗುವ ಸುಳ್ಳು ಮೊಕದ್ದಮೆ ತಡೆಯುವ ಉದ್ದೇಶದಿಂದ ಈ ಬಸ್ ಗಳನ್ನು ಪರಿಚಯಿಸಲಾಗಿದೆ ಎಂದಿದ್ದಾರೆ.

ಆರು ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುವುದು ಮಾಮೂಲಿ. ಆದರೆ ಪ್ರತಿಸಲ ಅಪಘಾತಗಳಾದಾಗಲೂ ಪರಿಹಾರ ಕೊಡುವುದು ಮಾತ್ರ ಸಾರಿಗೆ ಸಂಸ್ಥೆಯೇ. ಕೆಲವು ಬಾರಿ ಸಂಸ್ಥೆಯ ಚಾಲಕರ ತಪ್ಪು ಇಲ್ಲದಿದ್ದರೂ ಸಂಸ್ಥೆಯ ಮೇಲೆಯೇ ಕೇಸ್ ದಾಖಲಾಗುತ್ತಿರುತ್ತದೆ. ಸಂಸ್ಥೆಯ ಚಾಲಕರ ತಪ್ಪಿಲ್ಲ ಎಂದೂ ಸಾಬೀತುಪಡಿಸಲು ಸಾಧ್ಯವಾಗಲ್ಲ. ಸಾಕ್ಷ್ಯಗಳ ಕೊರತೆಯಿಂದ ಅನಿವಾರ್ಯವಾಗಿ ಪರಿಹಾರ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸದ್ಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ರೂ 66 ಕೋಟಿ ಪರಿಹಾರ ನೀಡುವುದು ಬಾಕಿಯಿದೆ ಎಂದು ತಿಳಿಸಿದ್ದಾರೆ.

ಇನ್ನು ಚಾಲಕರು ಕೂಡ ನಿರ್ಲಕ್ಷ್ಯ ಚಾಲನೆ, ಎಲ್ಲಿ ಬೇಕೋ ಅಲ್ಲಿ ನಿಲ್ಲಿಸುವುದು. ಕೆಲವೊಂದು ಬಸ್ ನಿಲ್ದಾಣಗಳನ್ನು ಮರೆಮಾಚಿ ತೆರಳುವುದು, ಸ್ಪೀಡ್ ಲಿಮಿಟ್ ಮೀರಿ ಓವರ್ ಸ್ಪೀಡ್ನಲ್ಲೇ ವಾಹನ ಚಲಾಯಿಸುವುದು ಈ ಬಗ್ಗೆ ಪ್ರಯಾಣಿಕರಿಂದ, ಸಾರ್ವಜನಿಕರಿಂದ ದೂರುಗಳು ನಿತ್ಯ ಬರುತ್ತಲೇ ಇರುತ್ತವೆ. ಇವೆಲ್ಲಕ್ಕೂ ಪರಿಹಾರವೆಂದರೆ ಸಿಸಿ ಕ್ಯಾಮೆರಾ ಅಳವಡಿಸುವುದು. ಅಂತಹ ಬಸ್ ಗಳನ್ನಿಗ ಸರ್ಕಾರವೇ ಸಂಸ್ಥೆಗೆ ನೀಡಿದೆ ಅಂತ ಹೇಳಿದ್ದಾರೆ.

ಅದು ಕೂಡ ಬರೋಬ್ಬರಿ 425 ಬಸ್ ಗಳು ಸಂಸ್ಥೆಗೆ ಹೊಸದಾಗಿ ಸೇರ್ಪಡೆಯಾಗಿವೆ. ಈ ಬಸ್ ಗಳಿಗೆ ಹಿಂದೊಂದು, ಮುಂದೊಂದು ಸಿಸಿ ಕ್ಯಾಮೆರಾಗಳಿವೆ. ಬಸ್ ನಲ್ಲೇ ಕ್ಯಾಮೆರಾ ಫುಟೇಜ್ ಸಂಗ್ರಹಿಸುವ ವ್ಯವಸ್ಥೆಯಿದೆ. ಬರೋಬ್ಬರಿ 1 ಟಿಬಿಯಷ್ಟು ಫುಟೇಜ್ ಸಂಗ್ರಹಿಸಬಹುದಾಗಿದೆ. 15 ದಿನದ ದೃಶ್ಯಾವಳಿಗಳೆಲ್ಲ ಬಸ್ ಸ್ಟೋರೇಜ್ ನಲ್ಲಿ ಲಭ್ಯವಾಗಿರುತ್ತವೆ. ಅವುಗಳನ್ನು ಪೆನ್ಡ್ರೈವ್ ಮೂಲಕ ಡೌನ್ಫೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಬಸ್ ಹಿಂದೆಯಾಗಲಿ, ಮುಂದಿನಿಂದಾಗಲಿ ಯಾವುದೇ ವಾಹನದೊಂದಿಗೆ ಅಪಘಾತವಾದರೂ ಆ ದೃಶ್ಯಗಳೆಲ್ಲ ರೆಕಾರ್ಡ್ ಆಗುತ್ತವೆ. ಜತೆಗೆ ವಾಹನ ಪಾರ್ಕ್ ಮಾಡಲು ಈ ಕ್ಯಾಮೆರಾ ನೆರವಾಗುತ್ತದೆ. ಯಾರೇ ಆಗಲಿ ಸಾರಿಗೆ ಸಂಸ್ಥೆಯ ಬಸ್ಸೇ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಮೊಕದ್ದಮೆ ದಾಖಲಿಸಲು ಸಾಧ್ಯವಾಗಲ್ಲ. ಜತೆಗೆ ಚಾಲಕ ಕೂಡ ಎಲ್ಲಿ ಎಷ್ಟು ಗಂಟೆಗೆ ತೆರಳಿದ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದನೇ ಎಂಬಂತಹ ಮಾಹಿತಿ ಕೂಡ ಲಭ್ಯವಾಗುತ್ತದೆ. ಹೀಗಾಗಿ ಸಿಸಿ ಕ್ಯಾಮೆರಾ ದಿಂದ ಅನುಕೂಲವಾಗಲಿದೆ. ಇದರೊಂದಿಗೆ ಬಸ್ ನಲ್ಲಿ ಜಿಪಿಎಸ್ ಕೂಡ ಅಳವಡಿಕೆ ಇರುವುದರಿಂದ ಯಾವ ಬಸ್ ಎಷ್ಟು ಗಂಟೆಗೆ ಎಲ್ಲಿತ್ತು ಎಂಬುದರ ಮಾಹಿತಿಯೂ ಸಮರ್ಪಕವಾಗಿ ಲಭ್ಯವಾಗುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಾಗಿರುವ ಬಸ್ ಬಂದಿರುವುದರಿಂದ ಬಸ್‌ ಗಳ ಚಲನ-ವಲನದ ಮೇಲೆ ಸಂಸ್ಥೆ ಸಮರ್ಪಕವಾಗಿ ನಿಗಾವಹಿಸಲು ಅನುಕೂಲವಾಗಲಿದೆ.

ಜೂ.16ರಂದು ‘UPSC ಪ್ರಿಲಿಮಿನರಿ’ ಪರೀಕ್ಷೆ: ಬೆಳಿಗ್ಗೆ 6 ಗಂಟೆಯಿಂದಲೇ ‘ಮೆಟ್ರೋ ರೈಲು ಸಂಚಾರ’ ಆರಂಭ

ʻತರಬೇತಿ ರಹಿತʼ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌ : ʻವೇತನ ಶ್ರೇಣಿʼ ನಿಗಧಿಪಡಿಸಿ ರಾಜ್ಯ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಒಂದೇ ದಿನಕ್ಕೆ ಸೊರಬದ ಉಳವಿಯಿಂದ ಅಂಬಲಿಗೋಳ ತಲುಪಿದ ಕಾಡಾನೆ, ನಾಳೆ ಶೆಟ್ಟಿಹಳ್ಳಿ ಕಡೆಗೆ ಕಾರ್ಯಾಚರಣೆ

13/12/2025 10:18 PM3 Mins Read

ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ್ ಘೋಷಣೆ

13/12/2025 8:45 PM2 Mins Read

ಶಾಸಕ ಇಕ್ಬಾಲ್ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ: ಡಿಸಿಎಂ ಡಿ.ಕೆ ಶಿವಕುಮಾರ್

13/12/2025 8:37 PM2 Mins Read
Recent News

ಶಿವಮೊಗ್ಗ: ಒಂದೇ ದಿನಕ್ಕೆ ಸೊರಬದ ಉಳವಿಯಿಂದ ಅಂಬಲಿಗೋಳ ತಲುಪಿದ ಕಾಡಾನೆ, ನಾಳೆ ಶೆಟ್ಟಿಹಳ್ಳಿ ಕಡೆಗೆ ಕಾರ್ಯಾಚರಣೆ

13/12/2025 10:18 PM

Good News ; ಉದ್ಯೋಗಿಗಳಿಗೆ ಶುಭ ಸುದ್ದಿ ; ಖಾತೆಗೆ 52 ಸಾವಿರ ರೂ. ಜಮಾ.?

13/12/2025 10:00 PM

ಹಗಲಿನಲ್ಲಿ ‘ನಿದ್ದೆ’ ಮಾಡಿದ್ರೆ ಏನಾಗುತ್ತೆ.? ಒಂದು ಸಣ್ಣ ನಿದ್ರೆಯಿಂದ ಇಷ್ಟೆಲ್ಲಾ ಆಗಲು ಸಾಧ್ಯವೇ.?

13/12/2025 9:32 PM

BREAKING : ಹೈದರಾಬಾದ್’ನಲ್ಲಿ ‘ಮೆಸ್ಸಿ’ ಭೇಟಿಯಾದ ‘ರಾಹುಲ್ ಗಾಂಧಿ’, ಅರ್ಜೆಂಟೀನಾ ತಾರೆಯ ಭಾರತ ಪ್ರವಾಸದಲ್ಲಿ ಭಾಗಿ

13/12/2025 9:01 PM
State News
KARNATAKA

ಶಿವಮೊಗ್ಗ: ಒಂದೇ ದಿನಕ್ಕೆ ಸೊರಬದ ಉಳವಿಯಿಂದ ಅಂಬಲಿಗೋಳ ತಲುಪಿದ ಕಾಡಾನೆ, ನಾಳೆ ಶೆಟ್ಟಿಹಳ್ಳಿ ಕಡೆಗೆ ಕಾರ್ಯಾಚರಣೆ

By kannadanewsnow0913/12/2025 10:18 PM KARNATAKA 3 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ದೂಗೂರು ಅರಣ್ಯದಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟಿದ್ದಂತ ಜೋಡಿ ಕಾಡಾನೆಗಳನ್ನು, ಒಂದೇ…

ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ್ ಘೋಷಣೆ

13/12/2025 8:45 PM

ಶಾಸಕ ಇಕ್ಬಾಲ್ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ: ಡಿಸಿಎಂ ಡಿ.ಕೆ ಶಿವಕುಮಾರ್

13/12/2025 8:37 PM

‘ಹಿರಿಯ ಪತ್ರಕರ್ತ ಅ.ಚ.ಶಿವಣ್ಣ’ಗೆ KUWJ ಶ್ರದ್ಧಾಂಜಲಿ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘನೆ

13/12/2025 8:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.