Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕದ ಹೆಮ್ಮೆಯ ‘KSRTC’ ಮುಡಿಗೇರಿದ ಮತ್ತೊಂದು ‘ರಾಷ್ಟ್ರೀಯ ಪ್ರಶಸ್ತಿ’

09/11/2025 7:31 PM

13 ವರ್ಷದಿಂದ ಅಮಾನತುಗೊಂಡಿದ್ದ ತಂದೆ, ವಿಶ್ವಕಪ್ ಗೆದ್ದು ಮನಸ್ಸು ಬದಲಿಸಿದ ಮಗಳು ; ವೇದಿಕೆಯಿಂದ ಸಿಎಂ ದೊಡ್ಡ ಘೋಷಣೆ!

09/11/2025 7:23 PM

ಆಪರೇಷನ್ ಸಿಂಧೂರ್ ಸೋಲಿನ ಬಳಿಕ ಪಾಕಿಸ್ತಾನದಲ್ಲಿ ಸಂವಿಧಾನ ತಿದ್ದುಪಡಿ, ಅಸಿಮ್ ಮುನಿರ್ ಗೆ ಬಿಗ್ ರೋಲ್: ವರದಿ

09/11/2025 6:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಗ್ಯಾರಂಟಿ ಸೌಲಭ್ಯ : ಸಿಎಂ ಸಿದ್ದರಾಮಯ್ಯ
KARNATAKA

1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಗ್ಯಾರಂಟಿ ಸೌಲಭ್ಯ : ಸಿಎಂ ಸಿದ್ದರಾಮಯ್ಯ

By kannadanewsnow0721/04/2024 11:25 AM

ಮಂಡ್ಯ: ರೈತರ ಆದಾಯ ದುಪ್ಪಟ್ಟು ಆಗಿದ್ದಾರೆ ಅನೇಕ ತಿಂಗಳಿನಿಂದ ರೈತರು ಪ್ರತಿಭಟನೆ ಏಕೆ ಮಾಡುತ್ತಿದ್ದರು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ-2 ಜನಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ ಅವರ ಪರವಾಗಿ ಮತಯಾಚಿಸಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಅನೇಕ ಭರವಸೆಗಳನ್ನು ಕೊಟ್ಟು ಭ್ರಮೆ ಹುಟ್ಟಿಸಿದರು ಎಂದರು.

ಮನ್ ಮೋಹನ್ ಸಿಂಗ್ ದೇಶ ಕಂಡ ದೊಡ್ಡ ಆರ್ಥಿಕ ತಜ್ಞ. ಅವರು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಹಕ್ಕುಗಳನ್ನು ಮನ್ ಮೋಹನ್ ಸಿಂಗ್ ಜಾರಿಗೆ ತರುವ ಮೂಲಕ ಸಂವಿಧಾನದ ನಿರ್ದೇಶಕ ತತ್ವಗಳನ್ನು ಮೂಲಭೂತ ಹಕ್ಕುಗಳನ್ನಾಗಿಸಿದರು . ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸಿನ ಸಚಿವರಾಗಿದ್ದ ಅವರು ದೇಶವನ್ನು ಆರ್ಥಿಕವಾಗಿ ಸಧೃಡವಾಗಿಸಿದರು ಎಂದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದರು
ನರೇಂದ್ರ ಮೋದಿ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರು. ಯಾರೂ ಬೇಕಾದರೂ ರೈತರ ಜಮೀನು ಕೊಂಡು, ರೈತರು ಭಿಕಾರಿಗಳಾಗುವಂತೆ ಮಾಡಿದರು. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದರು ಎಂದರು.

ಕಾಂಗ್ರೆಸ್ ಪಕ್ಷ ಬಡವರಿಗೆ,ಮಧ್ಯಮವರ್ಗದವರಿಗೆ ಕೊಳ್ಳುವ ಶಕ್ತಿ ಹೆಚ್ಚಿಸಲು ಐದು ಗ್ಯಾರಂಟಿ ಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.

ಗ್ಯಾರಂಟಿ ಗಳು ನಿಲ್ಲುವುದಿಲ್ಲ
ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ಗ್ಯಾರಂಟಿಗಳು ತಾತ್ಕಾಲಿಕ , ಬಿಜೆಪಿಯದ್ದು ಶಾಶ್ವತ ಎಂದು ಹೇಳಿದ್ದಾರೆ. 2024-25 ರ ಬಜೆಟ್ ನಲ್ಲಿ 52 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.ಯಾವ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದರು.

1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಗ್ಯಾರಂಟಿ ಸೌಲಭ್ಯ
ಶಕ್ತಿ ಯೋಜನೆಯಡಿ 191 ಕೋಟಿ ಮಹಿಳೆಯರು ಉಚಿತವಾಗಿ ಈವರೆಗೆ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಗೃಹಜ್ಯೋತಿ, 1.18 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ತಲುಪುತ್ತಿದೆ. ಪಿಯುಸಿ ನಲ್ಲಿ ರ್ಯಾಂಕ್ ಪಡೆದ ಹುಡುಗ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿರುವುದು ಇದರ ಉಪಯುಕ್ತತೆಯನ್ನು ಸಾರುತ್ತದೆ. ಅನ್ನಭಾಗ್ಯ , ಯುವನಿಧಿ ಯೋಜನೆಗಳು . 1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಇದರಿಂದ ಉಪಯೋಗವಾಗುತ್ತಿದೆ ಎಂದರು.

ಕುಮಾರಸ್ವಾಮಿಯವರನ್ನು ಸೋಲಿಸಿ
ಗ್ಯಾರಂಟಿಗಳನ್ನು ಟೀಕಿಸುವ ದೇವೇಗೌಡರು, ಕುಮಾರಸ್ವಾಮಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕುಮಾರಸ್ವಾಮಿ ಅವರು ಚನ್ನ ನಿಲ್ಲಲು ಧೈರ್ಯ ಸಾಲದೆ ಮಂಡ್ಯಕ್ಕೆ ಬಂದಿದ್ದಾರೆ. ನೀವು ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದರು. ಮಂಡ್ಯಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಕೊಡುಗೆ ಇಲ್ಲ. ಮಂಡ್ಯ ಶುಗರ್ ಕಾರ್ಖಾನೆಯನ್ನು ಅವರ ಕಾಲದಲ್ಲಿ ಮುಚ್ಚಿದರು. ನಾವು ಅಧಿಕಾರಕ್ಕೆ ಬಂದ 20 ದಿನಗಳಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಅದನ್ನು ಪುನರಾರಂಭ ಮಾಡಲಾಯಿತು. ಇದರೊಂದಿಗೆ ಮತ್ತೊಂದು ಕಾರ್ಖಾನೆಯನ್ನು ತೆರೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ ಎಂದರು.

ಕೃಷಿ ವಿಶ್ವ ವಿದ್ಯಾಲಯ ಪ್ರಾರಂಭಿಸಲು ತಜ್ಞರ ಸಮಿತಿ

ವಿ.ಸಿ ಫಾರಂ ನಲ್ಲಿ ಕೃಷಿ ವಿಶ್ವ ವಿದ್ಯಾಲಯ ಪ್ರಾರಂಭಿಸಲು ತಜ್ಞರ ಸಮಿತಿ ರಚಿಸಲಾಗಿದೆ. ವರದಿ ಅಂದ ಕೂಡಲೇ ವಿವಿ ಜಾರಿಯಾಗಲಿದೆ. ಕೆ.ಆರ್.ಎಸ್ ಉದ್ಯಾನವನವನ್ನು ವಿಶ್ವ ದರ್ಜೆ ಗೇರಿಸಲು ಪ್ರಯತ್ನ ಮಾಡಲಾಗುವುದು. ವಿಶ್ವೇಶ್ವರಯ್ಯ ನಾಲೆ ಆಧುನೀಕರಣಕ್ಕೆ ಪ್ರಯತ್ನ ಮಾಡಲಾಗುವುದು. ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ , ಲೋಕೋಪಯೋಗಿ, ಕೆರೆ ತುಂಬಿಸುವ ಕೆಲಸಕ್ಕೆ ಅನುದಾನ ಒದಗಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ನಾಗಮಂಗಲ ಶಾಖೆ ಎನ್.ಬಿ.ಸಿ ನಾಲೆ ಅಭಿವೃದ್ಧಿ ಮಾಡುವುದಾಗಿ ಹೇಳಿದರು.

ಮೇಕೆದಾಟು ಅಣೆಕಟ್ಟಿನ ಬಗ್ಗೆ ಬಿಜೆಪಿಯ ಸಂಸದರು ಬಾಯಿಬಿಟ್ಟಿಲ್ಲ. 34 ಲಕ್ಷ ರೈತರಿಗೆ 2000 ರೂಪಾಯಿಗಳ ತಾತ್ಕಾಲಿಕ ಪರಿಹಾರವನ್ನು 650 ಕೋಟಿ ವೆಚ್ಚದಲ್ಲಿ ನೀಡಲಾಗಿದೆ. ಬರಗಾಲದ ಬಗ್ಗೆ ದೇವೇಗೌಡರು, ಪ್ರಜ್ವಲ್ ರೇವಣ್ಣ, ಸುಮಲತಾ ಮಾತನಾಡಿಲ್ಲ. ಅದು ಬಿಟ್ಟು ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ ಎಂದರು.

ವೆಂಕಟರಮಣಗೌಡರನ್ನು ಗೆಲ್ಲಿಸುವ ಮೂಲಕ ಚೆಲುವರಾಯಸ್ವಾಮಿ ಯವರಿಗೆ ಬಲ ತುಂಬಬೇಕು
ಈ ಚುನಾವಣೆಯಲ್ಲಿ ವೆಂಕಟರಮಣ ಗೌಡರನ್ನು ಈ ಬಾರಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಗೌಡರನ್ನು ಗೆಲ್ಲಿಸುವ ಮೂಲಕ ಚೆಲುವರಾಯಸ್ವಾಮಿ ಯವರಿಗೆ ಬಲ ತುಂಬಬೇಕು ಎಂದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಅಭ್ಯರ್ಥಿ ವೆಂಕಟರಮಣಗೌಡ, ಶಾಸಕ ರವಿ ಗಣಿಗ, ಮೇಲ್ಮನೆ ಸದಸ್ಯ ಗೂಳಿ ಗೌಡ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಾಜಿ ಶಾಸಕ ಚಂದ್ರ, ಅಪ್ಪಾಜಿಗೌಡ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

1.20 ಕೋಟಿ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಗ್ಯಾರಂಟಿ ಸೌಲಭ್ಯ : ಸಿಎಂ ಸಿದ್ದರಾಮಯ್ಯ 4.5 crore people from 1.20 crore families will get guaranteed guarantee: Siddaramaiah
Share. Facebook Twitter LinkedIn WhatsApp Email

Related Posts

ಕರ್ನಾಟಕದ ಹೆಮ್ಮೆಯ ‘KSRTC’ ಮುಡಿಗೇರಿದ ಮತ್ತೊಂದು ‘ರಾಷ್ಟ್ರೀಯ ಪ್ರಶಸ್ತಿ’

09/11/2025 7:31 PM2 Mins Read

ಅಕ್ರಮ ಅದಿರು ಸಾಗಾಟ ಕೇಸ್: ಶಾಸಕ ಸತೀಶ್ ಸೈಲ್‌ಗೆ ಸೇರಿದ 21 ಕೋಟಿ ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು

09/11/2025 6:42 PM2 Mins Read

BIG NEWS: ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಅಪ್ ಡೇಟ್

09/11/2025 6:19 PM1 Min Read
Recent News

ಕರ್ನಾಟಕದ ಹೆಮ್ಮೆಯ ‘KSRTC’ ಮುಡಿಗೇರಿದ ಮತ್ತೊಂದು ‘ರಾಷ್ಟ್ರೀಯ ಪ್ರಶಸ್ತಿ’

09/11/2025 7:31 PM

13 ವರ್ಷದಿಂದ ಅಮಾನತುಗೊಂಡಿದ್ದ ತಂದೆ, ವಿಶ್ವಕಪ್ ಗೆದ್ದು ಮನಸ್ಸು ಬದಲಿಸಿದ ಮಗಳು ; ವೇದಿಕೆಯಿಂದ ಸಿಎಂ ದೊಡ್ಡ ಘೋಷಣೆ!

09/11/2025 7:23 PM

ಆಪರೇಷನ್ ಸಿಂಧೂರ್ ಸೋಲಿನ ಬಳಿಕ ಪಾಕಿಸ್ತಾನದಲ್ಲಿ ಸಂವಿಧಾನ ತಿದ್ದುಪಡಿ, ಅಸಿಮ್ ಮುನಿರ್ ಗೆ ಬಿಗ್ ರೋಲ್: ವರದಿ

09/11/2025 6:48 PM

ಅಕ್ರಮ ಅದಿರು ಸಾಗಾಟ ಕೇಸ್: ಶಾಸಕ ಸತೀಶ್ ಸೈಲ್‌ಗೆ ಸೇರಿದ 21 ಕೋಟಿ ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು

09/11/2025 6:42 PM
State News
KARNATAKA

ಕರ್ನಾಟಕದ ಹೆಮ್ಮೆಯ ‘KSRTC’ ಮುಡಿಗೇರಿದ ಮತ್ತೊಂದು ‘ರಾಷ್ಟ್ರೀಯ ಪ್ರಶಸ್ತಿ’

By kannadanewsnow0909/11/2025 7:31 PM KARNATAKA 2 Mins Read

ಹರಿಯಾಣ: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿ ಸಿ‌ಗೆ ಪ್ರತಿಷ್ಠಿತ ರಾಷ್ಡ್ರೀಯ‌ ಪ್ರಶಸ್ತಿ‌ -2025 ರ ಹೆಗ್ಗಳಿಕೆಗೆ ಪಾತ್ರವಾಗಿದೆ.…

ಅಕ್ರಮ ಅದಿರು ಸಾಗಾಟ ಕೇಸ್: ಶಾಸಕ ಸತೀಶ್ ಸೈಲ್‌ಗೆ ಸೇರಿದ 21 ಕೋಟಿ ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು

09/11/2025 6:42 PM

BIG NEWS: ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಅಪ್ ಡೇಟ್

09/11/2025 6:19 PM

BREAKING: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ: ನಾಳೆ ಗೃಹ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

09/11/2025 6:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.