Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾಳೆ `ದ್ವಿತೀಯ ಪಿಯುಸಿ’ ಫಲಿತಾಂಶ ಪ್ರಕಟ : ಸಂಜೆ ರಿಸಲ್ಟ್ ಘೋಷಿಸಲಿದ್ದಾರೆ ಸಚಿವ ಮಧು ಬಂಗಾರಪ್ಪ!

08/04/2026 12:30 PM

2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಸಚಿವ ಭೋಸರಾಜು ಬಿಡುಗಡೆ

08/04/2026 12:28 PM

BREAKING : ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ, ಚಿನ್ನ ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ!

08/04/2026 12:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆತಿಥ್ಯ ರಂಗದಲ್ಲಿ ಮಿಂಚಲು ಸಜ್ಜಾದ ಬೆಂಗಳೂರಿನ 300 ಯುವಕರು: ಡಿಯಾಜಿಯೋ-ಟಿಎಚ್‌ಎಸ್‌ಸಿಯಿಂದ ಉದ್ಯೋಗದ ಆಸರೆ
KARNATAKA

ಆತಿಥ್ಯ ರಂಗದಲ್ಲಿ ಮಿಂಚಲು ಸಜ್ಜಾದ ಬೆಂಗಳೂರಿನ 300 ಯುವಕರು: ಡಿಯಾಜಿಯೋ-ಟಿಎಚ್‌ಎಸ್‌ಸಿಯಿಂದ ಉದ್ಯೋಗದ ಆಸರೆ

By kannadanewsnow0908/04/2026 12:06 PM

ಬೆಂಗಳೂರು: ದೇಶದ ಯುವಜನತೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಹಾಗೂ ಉದ್ಯಮ ರಂಗದ ಕೌಶಲ್ಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಡಿಯಾಜಿಯೋ ಇಂಡಿಯಾ (ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್) ಹಾಗೂ ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಮಂಡಳಿ (ಟಿಎಚ್‌ಎಸ್‌ಸಿ) ಜಂಟಿಯಾಗಿ ಮಹತ್ವದ ಹೆಜ್ಜೆಯಿಟ್ಟಿವೆ. ಈ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಲರ್ನಿಂಗ್ ಫಾರ್ ಲೈಫ್’ ಕಾರ್ಯಕ್ರಮದಡಿ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಯುವಕ-ಯುವತಿಯರು ಕೌಶಲ್ಯ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಪದವಿ ಪ್ರದಾನ ಸಮಾರಂಭದಲ್ಲಿ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ಅಧಿಕೃತ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲವೋನ್ ಅಕಾಡೆಮಿ ಆಫ್ ಬೇಕರಿ ಸೈನ್ಸ್‌ನ ನಿರ್ದೇಶಕ ಡಾ. ಅವಿನ್ ತಲಿಯತ್ ಮತ್ತು ಎಂ.ಎಸ್. ರಾಮಯ್ಯ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಬ್ಬಿ ಮ್ಯಾಥ್ಯೂ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆತಿಥ್ಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕಠಿಣ ಶಿಸ್ತು, ನಿರಂತರ ಕಲಿಕೆಯ ಹಸಿವು ಮತ್ತು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ ಅತಿ ಮುಖ್ಯ ಎಂದು ಕಿವಿಮಾತು ಹೇಳಿದರು.

ಏನಿದು ಲರ್ನಿಂಗ್ ಫಾರ್ ಲೈಫ್ ಯೋಜನೆ?

ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಆತಿಥ್ಯ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಈ ಕಿರು ಅವಧಿಯ ತರಬೇತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ ಮಾನದಂಡಗಳಿಗೆ ಅನುಗುಣವಾಗಿ ಪರಿಣಿತ ತರಬೇತುದಾರರಿಂದ ಕ್ಲಾಸ್‌ರೂಮ್ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಕೇವಲ ತಾಂತ್ರಿಕ ಜ್ಞಾನ ಮಾತ್ರವಲ್ಲದೆ, ಇಂಗ್ಲಿಷ್ ಸಂವಹನ, ಡಿಜಿಟಲ್ ಜ್ಞಾನ ಹಾಗೂ ದೈನಂದಿನ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಲಿಸುವ ಮೂಲಕ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ.

ಶೇ. 70ರಷ್ಟು ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ!

ತರಬೇತಿ ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಟಿಎಚ್‌ಎಸ್‌ಸಿ ವತಿಯಿಂದ ಉದ್ಯಮ ವಲಯದಲ್ಲಿ ಮಾನ್ಯತೆ ಇರುವ ಪ್ರಮಾಣಪತ್ರವನ್ನು ನೀಡಲಾಗಿದೆ. ಟಿಎಚ್‌ಎಸ್‌ಸಿ ಹೊಂದಿರುವ 750ಕ್ಕೂ ಹೆಚ್ಚು ಉದ್ಯಮ ಪಾಲುದಾರರ ಜಾಲದ ನೆರವಿನಿಂದ, ಈಗಾಗಲೇ ಶೇ. 70ರಷ್ಟು ಯುವಕರು ಉದ್ಯೋಗದ ಆಫರ್ ಲೆಟರ್ ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಅಂತಿಮ ಹಂತದ ಸಂದರ್ಶನಗಳನ್ನು ಎದುರಿಸುತ್ತಿದ್ದಾರೆ.

ಪ್ರಮುಖವಾಗಿ ಫೇರ್‌ಫೀಲ್ಡ್ ಬೈ ಮ್ಯಾರಿಯಾಟ್, ಲೆಮನ್ ಟ್ರೀ ಪ್ರೀಮಿಯರ್, ಫಾರ್ಚೂನ್ ಸೆಲೆಕ್ಟ್ ಜೆಪಿ ಕಾಸ್ಮೋಸ್, ಜೆನಿತ್ ಹೋಟೆಲ್, ಆಯ್ಸ್ಟರ್ ಬೇ, ಕಾಂಪಾಸ್ ಗ್ರೂಪ್ ಸೇರಿದಂತೆ ಹಲವು ದಿಗ್ಗಜ ಹೋಟೆಲ್ ಮತ್ತು ಸೇವಾ ಸಂಸ್ಥೆಗಳು ಈ ಯುವಕರಿಗೆ ಮಣೆ ಹಾಕಿವೆ. ಬಹುತೇಕರು ‘ಆಹಾರ ಮತ್ತು ಪಾನೀಯ ಸೇವಾ ಸಹಾಯಕರು’ ಹಾಗೂ ಕೌಂಟರ್ ಸೇಲ್ಸ್ ಪ್ರತಿನಿಧಿಗಳಾಗಿ ನೇಮಕಗೊಂಡಿದ್ದಾರೆ.

ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಡಿಯಾಜಿಯೋ ಇಂಡಿಯಾದ ಕಾರ್ಪೊರೇಟ್ ಸಂಬಂಧಗಳ ವಿಭಾಗದ ನಿರ್ದೇಶಕ ದೇವಾಶಿಶ್ ದಾಸ್‌ಗುಪ್ತ, “ಭಾರತದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಲ್ಲಿ ಆತಿಥ್ಯ ರಂಗ ಮುಂಚೂಣಿಯಲ್ಲಿದೆ. 2020ರಲ್ಲಿ ಶುರುವಾದ ‘ಲರ್ನಿಂಗ್ ಫಾರ್ ಲೈಫ್’ ಯೋಜನೆಯಿಂದ ಈವರೆಗೆ ದೇಶಾದ್ಯಂತ 8,500ಕ್ಕೂ ಹೆಚ್ಚು ಯುವಕರು ಪ್ರಯೋಜನ ಪಡೆದಿದ್ದು, ಅವರಲ್ಲಿ ಆತ್ಮವಿಶ್ವಾಸ ಮತ್ತು ವೃತ್ತಿ ಕೌಶಲ್ಯವನ್ನು ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ,” ಎಂದರು.

ಟಿಎಚ್‌ಎಸ್‌ಸಿ ಸಿಇಒ ರಾಜನ್ ಬಹಾದೂರ್ ಮಾತನಾಡಿ, “ಡಿಯಾಜಿಯೋ ಇಂಡಿಯಾದೊಂದಿಗಿನ ನಮ್ಮ ಸಹಭಾಗಿತ್ವವು ಭವಿಷ್ಯದ ಉದ್ಯೋಗಿಗಳನ್ನು ಸೃಷ್ಟಿಸುತ್ತಿದೆ. ಕೇವಲ ತರಬೇತಿ ನೀಡುವುದು ಮಾತ್ರವಲ್ಲದೆ, ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸಿ ಸ್ಥಿರವಾದ ಬದುಕು ಕಟ್ಟಿಕೊಡುವುದು ನಮ್ಮ ಗುರಿಯಾಗಿದೆ,” ಎಂದು ತಿಳಿಸಿದರು.

ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ 2014ರಲ್ಲಿ ಸ್ಥಾಪನೆಯಾದ ಟಿಎಚ್‌ಎಸ್‌ಸಿ, ಈವರೆಗೆ 16 ಲಕ್ಷಕ್ಕೂ ಹೆಚ್ಚು ಯುವಜನರಿಗೆ ಕೌಶಲ್ಯ ಪ್ರಮಾಣಪತ್ರ ನೀಡಿದೆ. ಇನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂದೇ ಷೇರುಪೇಟೆಯಲ್ಲಿ ಗುರುತಿಸಿಕೊಂಡಿರುವ ಡಿಯಾಜಿಯೋ ಇಂಡಿಯಾ, ದೇಶಾದ್ಯಂತ 35 ಉತ್ಪಾದನಾ ಘಟಕಗಳನ್ನು ಹೊಂದಿರುವ ಮುಂಚೂಣಿ ಮದ್ಯಪಾನ ಉತ್ಪನ್ನ ತಯಾರಕ ಸಂಸ್ಥೆಯಾಗಿದ್ದು, ವ್ಯಾಪಾರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ.

Share. Facebook Twitter LinkedIn WhatsApp Email

Related Posts

BREAKING : ನಾಳೆ `ದ್ವಿತೀಯ ಪಿಯುಸಿ’ ಫಲಿತಾಂಶ ಪ್ರಕಟ : ಸಂಜೆ ರಿಸಲ್ಟ್ ಘೋಷಿಸಲಿದ್ದಾರೆ ಸಚಿವ ಮಧು ಬಂಗಾರಪ್ಪ!

08/04/2026 12:30 PM2 Mins Read

2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಸಚಿವ ಭೋಸರಾಜು ಬಿಡುಗಡೆ

08/04/2026 12:28 PM3 Mins Read

BREAKING : ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ, ಚಿನ್ನ ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ!

08/04/2026 12:22 PM2 Mins Read
Recent News

BREAKING : ನಾಳೆ `ದ್ವಿತೀಯ ಪಿಯುಸಿ’ ಫಲಿತಾಂಶ ಪ್ರಕಟ : ಸಂಜೆ ರಿಸಲ್ಟ್ ಘೋಷಿಸಲಿದ್ದಾರೆ ಸಚಿವ ಮಧು ಬಂಗಾರಪ್ಪ!

08/04/2026 12:30 PM

2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಸಚಿವ ಭೋಸರಾಜು ಬಿಡುಗಡೆ

08/04/2026 12:28 PM

BREAKING : ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ, ಚಿನ್ನ ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ!

08/04/2026 12:22 PM

ಆತಿಥ್ಯ ರಂಗದಲ್ಲಿ ಮಿಂಚಲು ಸಜ್ಜಾದ ಬೆಂಗಳೂರಿನ 300 ಯುವಕರು: ಡಿಯಾಜಿಯೋ-ಟಿಎಚ್‌ಎಸ್‌ಸಿಯಿಂದ ಉದ್ಯೋಗದ ಆಸರೆ

08/04/2026 12:06 PM
State News
KARNATAKA

BREAKING : ನಾಳೆ `ದ್ವಿತೀಯ ಪಿಯುಸಿ’ ಫಲಿತಾಂಶ ಪ್ರಕಟ : ಸಂಜೆ ರಿಸಲ್ಟ್ ಘೋಷಿಸಲಿದ್ದಾರೆ ಸಚಿವ ಮಧು ಬಂಗಾರಪ್ಪ!

By kannadanewsnow5708/04/2026 12:30 PM KARNATAKA 2 Mins Read

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ…

2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಸಚಿವ ಭೋಸರಾಜು ಬಿಡುಗಡೆ

08/04/2026 12:28 PM

BREAKING : ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ, ಚಿನ್ನ ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ!

08/04/2026 12:22 PM

ಆತಿಥ್ಯ ರಂಗದಲ್ಲಿ ಮಿಂಚಲು ಸಜ್ಜಾದ ಬೆಂಗಳೂರಿನ 300 ಯುವಕರು: ಡಿಯಾಜಿಯೋ-ಟಿಎಚ್‌ಎಸ್‌ಸಿಯಿಂದ ಉದ್ಯೋಗದ ಆಸರೆ

08/04/2026 12:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.