Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನವಜಾತ ಶಿಶುಗಳಿಗೆ ಒಂದೇ ದಿನ `ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ’ ವಿತರಣೆ

04/11/2025 8:04 AM

ವಿಶ್ವದ ಅತ್ಯಂತ ಸಾಲಗಾರ ರಾಷ್ಟ್ರಗಳು 2025: IMF ಪಟ್ಟಿಯಲ್ಲಿ ಜಪಾನ್ ಗೆ ಅಗ್ರಸ್ಥಾನ, ಭಾರತದ ಸ್ಥಾನ ಎಲ್ಲಿದೆ ?

04/11/2025 7:52 AM

ALERT : `ತಂದೂರಿ ರೊಟ್ಟಿ’ ತಿನ್ನುವುದರಿಂದ `ಹೃದಯಾಘಾತ’ ಅಪಾಯ ಹೆಚ್ಚು.!

04/11/2025 7:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಬಿಜೆಪಿ ಸರ್ಕಾರ’ದ ಅವಧಿಯಲ್ಲಿ ಕೋಮು ಸಂಬಂಧಿತ ಗಲಾಟೆಯ ‘127 ಕೇಸ್’ ವಾಪಾಸ್: ಕಾಂಗ್ರೆಸ್ ಆರೋಪ
KARNATAKA

BREAKING: ‘ಬಿಜೆಪಿ ಸರ್ಕಾರ’ದ ಅವಧಿಯಲ್ಲಿ ಕೋಮು ಸಂಬಂಧಿತ ಗಲಾಟೆಯ ‘127 ಕೇಸ್’ ವಾಪಾಸ್: ಕಾಂಗ್ರೆಸ್ ಆರೋಪ

By kannadanewsnow0915/10/2024 2:39 PM

ಬೆಂಗಳೂರು: ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಮತ್ತು ಇತರೆ ಸಂಘಟನೆಗಳ ಕಾರ್ಯಕರ್ತರ ಮೇಲೆ 2009-10 ರಿಂದ ಈಚೆಗೆ ಒಟ್ಟು 949 ಕೋಮು ಸಂಬಂಧಿತ ಗಲಾಟೆಯ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 127 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂಬುದಾಗಿ ಸರ್ಕಾರ ಲಿಖಿತ ಉತ್ತರ ನೀಡಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

1. ಕ್ರಿಮಿನಲ್ ಪಕ್ರಿಯ ಸಂಹಿತೆ ಕಲಂ 321ರ ಅಡಿಯಲ್ಲಿ ಸಂಪುಟ ಸಭೆಯ ಅನುಮೋದನೆಯೊಂದಿಗೆ ಪ್ರಾಸಿಕ್ಯೂಷನ್ ಅನುಮತಿಯನ್ನು ವಾಪಸ್ಸು ಪಡೆಯಲು ರಾಜ್ಯ ಸರ್ಕಾರಕ್ಕೆ ಅವಕಾಶವಿರುತ್ತದೆ. ಸಾಮಾನ್ಯವಾಗಿ ಗೃಹ ಇಲಾಖೆಯ ಪ್ರಸ್ತಾವನೆಯೊಂದಿಗೆ, ಸಂಪುಟ ಸಭೆಯ ಉಪಸಮಿತಿಯು ನೀಡಿದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅವಕಾಶವಿರುತ್ತದೆ. ಇದೊಂದು ನಿರಂತರ ಪ್ರಕ್ರಿಯೆ ಆಗಿದ್ದು, ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಶ್ರೀ ಜೆ.ಸಿ.ಮಾಧುಸ್ವಾಮಿ, ಬೊಮ್ಮಾಯಿರವರ ಬಿಜೆಪಿ ಸರ್ಕಾರದಲ್ಲಿ 62 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರು.

2. ಕರ್ನಾಟಕದ ಹಿಂದಿನ ಬಿಜೆಪಿಯ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಒಟ್ಟು 385 ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುತ್ತದೆ. ಅದರಲ್ಲಿ 182 ಪ್ರಕರಣಗಳು ಕೋಮು ಸಂಘರ್ಷ, ದ್ವೇಷ ಭಾಷಣ ಮತ್ತು ಗೋವಧೆ ಸಂಬಂಧಪಟ್ಟ ಪ್ರಕರಣಗಳಾಗಿರುತ್ತವೆ. ಸುಮಾರು 2000 ಆರೋಪಿಗಳು ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ಸು ಪಡೆದ ಪ್ರಕರಣಗಳ ಫಲಾನುಭವಿಗಳಾಗಿದ್ದು, ಇದರಲ್ಲಿ 1000 ಆರೋಪಿಗಳು ಕೋಮು ಸಂಘರ್ಷದ ಆರೋಪಿಗಳಾಗಿರುತ್ತಾರೆ. ಬಿಜೆಪಿ ಶಾಸಕರು ಮತ್ತು ಪಾರ್ಲಿಮೆಂಟ್ ಸದಸ್ಯರು ವಾಪಸ್ಸು ಪಡೆದ ಪ್ರಕರಣಗಳ ಫಲಾನುಭವಿಗಳಾಗಿರುತ್ತಾರೆ. ಈ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಾಗಿದ್ದರು.

3. ಕರ್ನಾಟಕದ ಬಿಜೆಪಿ ಸರ್ಕಾರ 2020ರಲ್ಲಿ 62 ಪ್ರಕರಣಗಳನ್ನು ವಾಪಸ್ಸು ಪಡೆದಿದ್ದು, ಇದರಲ್ಲಿ ಅಂದಿನ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ, ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೋಳಿ, ಬಿ.ಸಿ.ಪಾಟೀಲ್,ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಆಲಪ್ಪ ಆಚಾರ್, ರೇಣುಕಾಚಾರ್ಯ ಮತ್ತು ಇತರೆ ಬಿಜೆಪಿ ನಾಯಕರ ಪ್ರಕರಣಗಳು ಸೇರಿರುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೋಮು ಸಂಘರ್ಷದ, ಗೋ ವಿವಾದದ ಹಾಗೂ ದ್ವೇಷ ಭಾಷಣದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದಾಗಿ ಅಂದಿನ ಕಾನೂನು ಸಚಿವರು ಹೇಳಿರುತ್ತಾರೆ.

4. ಬಿಜೆಪಿ ಸರ್ಕಾರಗಳು ಹಿಂದಕ್ಕೆ ಪಡೆದಿರುವ ಪ್ರಕಾರಣಗಳಲ್ಲಿ ಬಲಪಂತೀಯ ಸಂಘಟನೆಗಳ, ಹಿಂದೂ ಸಂಘಟನೆಗಳ ಹಾಗೂ ಕೋಮುಗಲಬೆ ಆರೋಪಿಗಳ ಪ್ರಕರಣಗಳು ಸೇರಿರುತ್ತವೆ. ಇವುಗಳಲ್ಲಿ ಟಿಪ್ಪು ಜಯಂತಿ ಹೆಸರಿನಲ್ಲಿ ನಡೆದ ಗಲಬೆಗಳು, ಅಂತರ್ಜಾತೀಯ ವಿವಾಹದ ಹೆಸರಿನಲ್ಲಿ ನಡೆದ ಗಲಬೆಗಳು, ಮತಾಂತರದ ಹೆಸರಿನಲ್ಲಿ ನಡೆದ ಗಲಬೆಗಳು ಸೇರಿರುತ್ತವೆ. ಮತೀಯ ಗಲಬೆಗೆ ಪ್ರಚೋದನೆ ನೀಡಿದ ಗಂಭೀರ ಸ್ವರೂಪದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಬಿಜೆಪಿ ಸರ್ಕಾರ, ಹಿಮದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ಹಾಗೂ ನೈತಿಕ ಪೊಲೀಸ್‌ಗಿರಿ ಹೆದಸರಿನಲ್ಲಿ ದಾಂದಲೆ ಮಾಡಿದ ಪ್ರಕರಣಗಳನ್ನೂ ಹಿಂದಕ್ಕೆ ಪಡೆದಿರುತ್ತದೆ.
5. ರಾಜ್ಯದಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಹಾಗೂ ಇತರ ಸಂಘಟನೆಗಳ ಮೇಲೆ ದಾಖಾಲಾಗಿದ್ದ ವಿವಿಧ ಜಿಲ್ಲೆಗಳ 2018 ರಿಂದ 2020ರ ಸುಮಾರು 127 ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರವೇ ವಾಪಸ್ಸು ಪಡೆದಿರುತ್ತದೆ. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಮಾರು 45 ಕೋಮುದಳ್ಳುರಿಯ ಪ್ರಕರಣಗಳನ್ನು ಮಡಿಕೇರಿ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೋಮುಸಂಘರ್ಷಗಳ ಪ್ರಕರಣಗಳನ್ನು ಬಿಜೆಪಿ ಸರ್ಕಾರವೇ ಹಿಂದಕ್ಕೆ ಪಡೆದಿರುತ್ತದೆ. ಸರ್ಕಾರೀ ಆಸ್ತಿಗೆ ನಷ್ಟ ಉಂಟುಮಾಡಿದ ಅನೇಕ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ನೂರಾರು ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರ ವಾಪಸ್ಸು ಪಡೆದಿದ್ದು, ರಾಜಕೀಯ ಕಾರಣಗಳಿಗಾಗಿ, ಜನರನ್ನು ಪ್ರಚೋಧನೆ ಮಾಡುವ ಉದ್ದೇಶದಿಂದ ಬಿಜೆಪಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುತ್ತಿದೆ.

6. ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೆಸ್ತಾ ಪ್ರಕರಣದಲ್ಲಿ ರಾಜಕೀಯ ಲಾಭಕ್ಕಾಗಿ ಹವಣಿಸಿದ್ದ ಬಿಜೆಪಿ, ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿ, ಆತ್ಮಹತ್ಯೆಯನ್ನು ಕೊಲೆ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಿತ್ತು. ಅಂದಿನ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿತ್ತು. ಸಿಬಿಐ ಈ ಪ್ರಕರಣದಲ್ಲಿ ಕೊಲೆ ಅಲ್ಲವೆಂದು ತನ್ನ ಅಂತಿಮ ವರದಿಯನ್ನು ನೀಡಿರುತ್ತದೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ ಬಿಜೆಪಿ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಿರುವುದಿಲ್ಲ. ರಾಜಕೀಯವಾಗಿ ಜನರಿಗೆ ಪ್ರಚೋಧನೆ ನೀಡಿದ ಬಿಜೆಪಿ ನಾಯಕರ ಕೇಸುಗಳನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿರುತ್ತದೆ.

7. ಕಲಂ 321ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಯಾವ ಯಾವ ಸಂದರ್ಭಗಳಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಹಿಂಪಡೆಯಬಹುದೆಂದು ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ತಮ್ಮ ವ್ಯಾಖ್ಯಾನ ನೀಡಿರುತ್ತವೆ. ಆದರೆ ಪ್ರಾಸಿಕ್ಯೂಷನ್ ಜನರಿಗೆ ತಪ್ಪು ಮಾಹಿತಿ ನೀಡಿ ಪ್ರಚೋಧನೆ ಮಾಡಲು ಬಿಜೆಪಿ ಹವಣಿಸುತ್ತಿದೆ.

8. ಹಿಂದಿನ ರಾಜ್ಯ ಬಿಜೆಪಿಯ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿರವರ ಸರ್ಕಾರ ಹಲವರು ಕ್ರಿಮಿನಲ್ ಪ್ರಕರಣಗಳನ್ನು ಸಂಪುಟಸಭೆಯ ತೀರ್ಮಾನದ ಮೂಲಕ ಹಿಂದಕ್ಕೆ ಪಡೆದಿರುತ್ತವೆ. ಆ ಪ್ರಕರಣಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಹಾಗೂ ಇತರ ಸಂಘಟನೆಗಳ ಪ್ರಕರಣಗಳು ಸೇರಿದ್ದು, ಪ್ರಮುಖವಾಗಿ ಕೋಮುವಾದಿ ಬಲಪಂತೀಯ ಸಂಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇದು ಒಂದು ರಾಜ್ಯ ಸರ್ಕಾರದ ನಿರಂತರ ಕಾನೂನು ಪ್ರಕ್ರಿಯೆ ಎಂದು ಅಂದಿನ ಬಿಜೆಪಿ ಸರ್ಕಾರದ ಕಾನೂನು ಸಚಿವರಾದ ಮಾಧುಸ್ವಾಮಿರವರ ಹೇಳಿಕೆಯು ಸಾರ್ವಜನಿಕವಾಗಿ ದಾಖಲಾಗಿರುತ್ತದೆ. ತನ್ನ ಆಂತರಿಕ ಗುಂಪುಗಾರಿಕೆಯಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿ, ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ವಿಫಲವಾಗಿ ಇಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ತನ್ನ ದಿವಾಳಿತನವನ್ನು ಬಹಿರಂಗಗೊಳಿಸಿದೆ ಎಂಬುದಾಗಿ ತಿಳಿಸಿದ್ದಾರೆ.

ರಾಜ್ಯದ ಜನತೆಗೆ ಗುಡ್ ನ್ಯೂಸ್: ಜಾತಿ ಪ್ರಮಾಣ ಪತ್ರದ ಗೊಂದಲ ನಿವಾರಣೆಗೆ ಸಿಎಂ ಸಿದ್ಧರಾಮಯ್ಯ ಸೂಚನೆ

BIG NEWS: ‘ಜಾತಿ ಗಣತಿ ವರದಿ’ ಮಂಡನೆಯಾಗಬೇಕಿದ್ದ ‘ರಾಜ್ಯ ಸಚಿವ ಸಂಪುಟ ಸಭೆ’ 1 ವಾರ ಮುಂದೂಡಿಕೆ

Share. Facebook Twitter LinkedIn WhatsApp Email

Related Posts

ನವಜಾತ ಶಿಶುಗಳಿಗೆ ಒಂದೇ ದಿನ `ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ’ ವಿತರಣೆ

04/11/2025 8:04 AM1 Min Read

ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ‘AI ತಂತ್ರಜ್ಞಾನ’ ಬಳಕೆ: ಸಚಿವ ಈಶ್ವರ್ ಖಂಡ್ರೆ

04/11/2025 7:30 AM1 Min Read

ಇಂದಿನಿಂದ `ಬೆಂಗಳೂರು ಕೌಶಲ್ಯ ಶೃಂಗಸಭೆ-2025′ : ನೋಂದಣಿಗಾಗಿ ಇಲ್ಲಿ ಸ್ಕ್ಯಾನ್ ಮಾಡಿ

04/11/2025 7:24 AM1 Min Read
Recent News

ನವಜಾತ ಶಿಶುಗಳಿಗೆ ಒಂದೇ ದಿನ `ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ’ ವಿತರಣೆ

04/11/2025 8:04 AM

ವಿಶ್ವದ ಅತ್ಯಂತ ಸಾಲಗಾರ ರಾಷ್ಟ್ರಗಳು 2025: IMF ಪಟ್ಟಿಯಲ್ಲಿ ಜಪಾನ್ ಗೆ ಅಗ್ರಸ್ಥಾನ, ಭಾರತದ ಸ್ಥಾನ ಎಲ್ಲಿದೆ ?

04/11/2025 7:52 AM

ALERT : `ತಂದೂರಿ ರೊಟ್ಟಿ’ ತಿನ್ನುವುದರಿಂದ `ಹೃದಯಾಘಾತ’ ಅಪಾಯ ಹೆಚ್ಚು.!

04/11/2025 7:48 AM

‘ಪವಾಡ ಅಥವಾ ಶಾಪ’: ಖಿನ್ನತೆಯಿಂದ ಬಳಲುತ್ತಿರುವ ಏರ್ ಇಂಡಿಯಾ ಅಪಘಾತದಿಂದ ಬದುಕುಳಿದ ವ್ಯಕ್ತಿ !

04/11/2025 7:32 AM
State News
KARNATAKA

ನವಜಾತ ಶಿಶುಗಳಿಗೆ ಒಂದೇ ದಿನ `ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ’ ವಿತರಣೆ

By kannadanewsnow5704/11/2025 8:04 AM KARNATAKA 1 Min Read

ಜೆಮ್ಶೆಡ್ಪುರ: ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚಕ್ರಧರಪುರ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ ಮಾಡಲಾಗಿದ್ದು, ಅವರ…

ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ‘AI ತಂತ್ರಜ್ಞಾನ’ ಬಳಕೆ: ಸಚಿವ ಈಶ್ವರ್ ಖಂಡ್ರೆ

04/11/2025 7:30 AM

ಇಂದಿನಿಂದ `ಬೆಂಗಳೂರು ಕೌಶಲ್ಯ ಶೃಂಗಸಭೆ-2025′ : ನೋಂದಣಿಗಾಗಿ ಇಲ್ಲಿ ಸ್ಕ್ಯಾನ್ ಮಾಡಿ

04/11/2025 7:24 AM

ವಿದ್ಯಾರ್ಥಿಗಳೇ ಗಮನಿಸಿ : ಇಂದಿನಿಂದ `MBA, MCA’ ಪ್ರವೇಶಕ್ಕೆ 3ನೇ ಸುತ್ತಿನ ಕೌನ್ಸೆಲಿಂಗ್ ಆರಂಭ

04/11/2025 7:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.