ಶಿವಮೊಗ್ಗ: ಲಿಂಗನಮಕ್ಕೆ ಜಲಾಶಯದಿಂದ 10,000 ಕ್ಯೂಸೆಕ್ಸ್ ನೀರನ್ನು ಶರಾವದಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ನದಿ ತೀರದ ಜನರ ಮುಂಜಾಗ್ರತಾ ಕ್ರಮದಂತೆ ಇಷ್ಟು ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಡ್ಯಾಂನಿಂದ ಐದು ಗೇಟ್ ಗಳ ಮೂಲಕ ಶರಾವತಿ ನದಿಗೆ ಬಿಡುಗಡೆ ಮಾಡಿದ ಬಳಿಕ, ಕಾರ್ಗಲ್ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
10,000 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ
ಈ ವರ್ಷ ಉತ್ತಮ ಮಳೆಯಿಂದಾಗಿ ಲಿಂಗನಮಕ್ಕಿ ಡ್ಯಾಂ ತುಂಬಿದೆ. ಡ್ಯಾಂ ಸಂಪೂರ್ಣ ಭರ್ತಿಯಾಗಲು 6 ಅಡಿ ಮಾತ್ರವೇ ಬಾಕಿ ಇದೆ. ಆದರೇ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಶರಾವತಿ ನದಿಗೆ 10,000 ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಲಿಂಕನಮಕ್ಕಿ ಡ್ಯಾಂ ಐದು ಗೇಟ್ ಓಪನ್ ಮಾಡಿ, ನದಿ ತೀರದ ಜನರ ಸುರಕ್ಷತೆಯ ದೃಷ್ಠಿಯಿಂದ 10,000 ಕ್ಯೂಸೆಕ್ಸ್ ನೀರನ್ನು ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ನೀರು ಮುಂದಿನ ದಿನಗಳಲ್ಲಿ ಬಿಡಗಡೆ ಮಾಡಬಹುದು. ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.
50,000 ಅಥವಾ 1 ಲಕ್ಷ ಕ್ಯೂಸೆಕ್ಸ್ ನೀರನ್ನು ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಂನಿಂದ ಬಿಟ್ಟರೇ ನದಿ ತೀರದ ಹಳ್ಳಿಗಳಲ್ಲಿ ನೆರೆ ಹಾನಿ ಉಂಟಾಗುವ ಸಾಧ್ಯತೆ ಇದೆ. 10 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದರಿಂದ ಶರಾವತಿ ನದಿ ತೀರದ 48 ಕುಟುಂಬಗಳು ನೆರೆಯನ್ನು ಎದುರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ತಾಲ್ಲೂಕು ಆಡಳಿತ ಮಾಡಲಿದೆ. ಈ ಎಲ್ಲಾ ಮುಂಜಾಗ್ರತಾ ಕ್ರಮವಾಗಿಯೇ ನಾವು ಈಗ 10,000 ಕ್ಯೂಸೆಕ್ಸ್ ಮಾತ್ರವೇ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.
ಸಾಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ
ಸಾಗರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ, ಮನೆ ಹಾನಿಗೊಂಡಿದ್ದಾವೆ. ಮಳೆಯಿಂದ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಎಲ್ಲಿ ಎಲ್ಲಿ ರಸ್ತೆ, ಮನೆಗಳು ಹಾನಿಯಾಗಿದ್ದಾವೆ ಎನ್ನುವ ಸರ್ವೇ ಕಾರ್ಯವನ್ನು ಮಾಡಲಾಗುತ್ತಿದೆ. ಹಾನಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕಾಮಗಾರಿಗೆ ಅನುದಾನ ಬಿಡುಗಡೆಗಾಗಿ ಮನವಿ ಮಾಡಲಾಗುತ್ತದೆ ಎಂದರು.
ಮನೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಣೆ
ಸಾಗರ ನಗರದಲ್ಲಿ ನಗರಸಭೆಯಿಂದ ಮಳೆಯಿಂದ ಹಾನಿಗೊಂಡ ಮನೆಗಳಿಗೆ 20,000 ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ. ನಾನು ಕೂಡ ವೈಯಕ್ತಿಕವಾಗಿ ಸಹಾಯ ಮಾಡುತ್ತಿದ್ದೇನೆ. ಪ್ರತಿ ಮನೆಗೆ 1.20 ಲಕ್ಷ ಪರಿಹಾರವನ್ನು ನಿಗದಿ ಪಡಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಲಕ್ಷ ಕೊಟ್ತೀವಿ ಅಂತ ಹೇಳಿದ್ರು. ಕೊಟ್ಟಿಲ್ಲ. ನಾವು 1.20 ಸಾವಿರ ಪರಿಹಾರವನ್ನು ಕೊಡುವುದಾಗಿ ಹೇಳಿದರು.
ನಾನು ವಿದೇಶಕ್ಕೆ ಹೋಗಿದ್ದು ಮಜಾ ಮಾಡೋದಕ್ಕಲ್ಲ, ಮಗಳ ಮನೆಗೆ
ನಾನು ವಿದೇಶಕ್ಕೆ ತೆರಳಿದಂತ ಸಂದರ್ಭದಲ್ಲಿಯೇ ಮಳೆ ಹೆಚ್ಚಾಗಿ ಹಾನಿಯಾಗಿವೆ. ಇದನ್ನೇ ಅನೇಕರು ಟೀಕಿಸಿದ್ದಾರೆ. ವಿದೇಶಕ್ಕೆ ಮಜಾ ಮಾಡೋದಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಗೂಂಡಾಗಳು ಅಂತನೂ ಕರೆದಿದ್ದಾರೆ. ಆದರೇ ನಾನು ಮಜಾ ಮಾಡೋದಕ್ಕೆ ಹೋಗಿರಲಿಲ್ಲ. ಮಗಳನ್ನು ನೋಡುವುದಕ್ಕೆ ಹೋಗಿದ್ದೆ. ನಾನು, ಪತ್ನಿ ಹಾಗೂ ಮಗ ಹೋಗಿದ್ವಿ ಎಂಬುದಾಗಿ ಸ್ಪಷ್ಟ ಪಡಿಸಿದರು.
ಪ್ರತಿ ದಿನವೂ ನೆರೆ ಪೀಡಿತ, ಮಳೆಹಾನಿ ಪ್ರದೇಶಗಳಿಗೆ ಭೇಟಿ
ವಿದೇಶದಲ್ಲಿ ಇದ್ದಾಗಲೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆನು. ತಾಲ್ಲೂಕು ಆಡಳಿತದ ಮೂಲಕ ಪರಿಹಾರ ಕಾರ್ಯದ ಕ್ರಮವಹಿಸುವ ಕಾರ್ಯ ಮಾಡಿದ್ದೆನು. ಈಗ ವಾಪಾಸ್ ಆಗಿದ್ದೇನೆ. ಸಾಗರ ಹಾಗೂ ಹೊಸನಗರ ತಾಲ್ಲೂಕಿನ ಪ್ರತಿ ಹೋಬಳಿಕ, ಪ್ರತಿ ಗ್ರಾಮಕ್ಕೆ ಪ್ರತಿ ದಿನವೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವಂತ ಕೆಲಸ ಮಾಡುವೆ ಎಂದು ತಿಳಿಸಿದರು.
ಸಾಗರ ತಾಲ್ಲೂಕಿನಲ್ಲಿ 100 ಮನೆ ಹಾನಿ
ಭಾರೀ ಮಳೆಯಿಂದಾಗಿ ಸಾಗರ ತಾಲ್ಲೂಕಿನಲ್ಲಿ 100 ಮನೆಗಳು ಹಾನಿಕೊಂಡಿದ್ದಾವೆ. ಸಾಗರ ನಗರದಲ್ಲಿ 60 ಮನೆಗಳು ಬಿದ್ದು ಹೋಗಿದ್ದರೇ, ಗ್ರಾಮಾಂತರ ಭಾಗದಲ್ಲಿ 40 ಮನೆಗಳು ಬಿದ್ದಿದ್ದಾವೆ. ಸದ್ಯಕ್ಕೆ ಅಧಿಕೃತ, ಅನಧಿಕೃತ ಮನೆಗಳಿಗೂ 20,000 ಪರಿಹಾರವನ್ನು ನೀಡಲಾಗುತ್ತಿದೆ. ಸಿಎಂ ಸಿದ್ಧರಾಮಯ್ಯ ಕೂಡ ಅದನ್ನೇ ಸೂಚಿಸಿದ್ದಾರೆ. ನಾವು ನೀಡುತ್ತಿರುವಂತ 1.20 ಸಾವಿರ ಮಳೆಹಾನಿ ಪರಿಹಾರ ಸಾಕಾಗುತ್ತಿಲ್ಲ. 5 ಲಕ್ಷ ನೀಡುವಂತೆಯೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಾನು ಸಚಿವ ಸ್ಥಾನಕ್ಕೆ ಬೇಡಿಕೆಯೂ ಇಟ್ಟಿಲ್ಲ, ಒತ್ತಾಯವನ್ನೂ ಮಾಡಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ
ಸಿಎಂಗೆ ನೀಡಿರುವ ಶೋಕಾಸ್ ನೋಟೀಸ್ ಹಿಂಪಡೆಯುವಂತೆ ಸಚಿವ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ: DKS