ಬೆಂಗಳೂರು : ಜೂನ್ 5 ರಂದು ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ನಡೆದಿತ್ತು. ದಾಳಿ ವೇಳೆ ಹಲವು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆ ಇಂದು ಎಸಿಬಿ ವಿಚಾರಣೆಗೆ ಜಮೀರ್ ಅಹ್ಮದ್ ವಿಚಾರಣೆಗೆ ಹಾಜರಾಗಿದ್ದಾರೆ.
ಎಸಿಬಿ ಕಚೇರಿಯಲ್ಲಿ ಎಸಿಬಿ ಎಸ್ ಯತೀಶ್ ಚಂದ್ರ, ಡಿವೈಎಸ್ಪಿ ರವಿ ಶಂಕರ್ ನೇತೃತ್ವದಲ್ಲಿ ಜಮೀರ್ ವಿಚಾರಣೆ ನಡೆಸಲಾಗುತ್ತಿದೆ. ಜಮೀರ್ ಅವರ ಒಟ್ಟು ಆಸ್ತಿ ಹಾಗೂ ಎಸಿಬಿ ದಾಳಿ ವೇಳೆ ಸಿಕ್ಕಿದ ಆಸ್ತಿಯ ಬಗ್ಗೆ ಅಸಮತೋಲನ ಇದೆ ಹಾಗಾಗಿ ಅವುಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.