ನಿಮ್ಮ ‘ಕನ್ನಡ ನ್ಯೂಸ್ ನೌ’ ಫಲಶೃತಿ: ನಾಳೆ ನಡೆಯಬೇಕಿದ್ದ ‘ಕಾನೂನು ವಿವಿ ಪರೀಕ್ಷೆ’ ಮುಂದೂಡಿಕೆ

ಹುಬ್ಬಳ್ಳಿ: ಈಸ್ಟರ್ ಸಂಡೆಯ ನಡುವೆಯೂ ನಾಳೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಪರೀಕ್ಷೆ ನಡೆಸೋದಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌ ಚುನಾವಣಾ ಹೊತ್ತಲ್ಲೇ ‘ಕಾನೂನು ವಿವಿ’ ಅವಾಂತರ: ಕಾಂಗ್ರೆಸ್ ಪಕ್ಷದ ವಿರುದ್ದ ತಿರುಗಿಬಿದ್ದ ‘ಕ್ರೈಸ್ತ ಸಮುದಾಯ’ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ನಾಳೆ ನಿಗದಿಯಾಗಿದ್ದಂತ ಕಾನೂನು ವಿವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಇಂದು ಈ ಕುರಿತಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ … Continue reading ನಿಮ್ಮ ‘ಕನ್ನಡ ನ್ಯೂಸ್ ನೌ’ ಫಲಶೃತಿ: ನಾಳೆ ನಡೆಯಬೇಕಿದ್ದ ‘ಕಾನೂನು ವಿವಿ ಪರೀಕ್ಷೆ’ ಮುಂದೂಡಿಕೆ