ಮೈಸೂರು: ಯದುವೀರ್ ಗೆ ಟಿಕೆಟ್ ಕೊಟ್ರೆ ಸ್ವಾಗತ; ಕರಪತ್ರ ಹಂಚಿ ಗೆಲ್ಲಿಸಿಕೊಂಡು ಬರುವೆ ಅಂಥ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರುಹೇಳಿದ್ದಾರೆ. ಅವರು ಇಂದು ಮಂಗಳವಾರ ಬೆಳಗ್ಗೆ ಸುದ್ದಿಗಾರರ ಪ್ರಶ್ವೆಗಳಿಗೆ ಉತ್ತರಿಸಿತ್ತ ಮಾತನಾಡಿದರು. ಇದೇ ವೇಳೇ ಅವರು ಮಾತನಾಡಿ, `ಯದುವೀರ್ ಒಡೆಯರ್ ಅವರಿಗೆ ಪಕ್ಷದಿಂದ ಟಿಕೆಟ್ ಕೊಟ್ರೆ ಸ್ವಾಗತ. ಒಂದು ವೇಳೆ ನನ್ನ ಬದಲಿಗೆ ಪಕ್ಷ ಅವರಿಗೆ ಟಿಕೆಟ್ ಕೊಟ್ಟರೆ ಸಾಮಾನ್ಯ ಕಾರ್ಯಕರ್ತನ ರೀತಿ ಕರಪತ್ರ ಹಂಚಿ ಗೆಲ್ಲಿಸಿಕೊಂಡು ಬರುವೆ ಅಂತ ಹೇಳಿದರು.

ಇದಲ್ಲದೇ ಅವರು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ?. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Share.
Exit mobile version