ರಾಮನಗರ : ಎಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತೇನೆಂದು ದಾಖಲೆ ಕೊಡಲಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ವಿಚಾರವಾಗಿ ಉತ್ತರಿಸಿದ ಡಿಕೆ ಸುರೇಶ್ ಎಚ್ ಡಿ ಕುಮಾರಸ್ವಾಮಿ ಎಲ್ಲಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆಂದು ದಾಖಲೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದುರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಕನಕಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲೆಲ್ಲಿ ಕಲ್ಲು ಸಾಗಿಸಿದ್ದಾರೆ, ಇಳಕಲ್ನಲ್ಲಿ ಎಲ್ಲೆಲ್ಲಿ ಕಲ್ಲು ಸಾಗಿಸಿದ್ದಾರೆಂದು ಎಲ್ಲಾ ದಾಖಲೆ ಕೊಡುತ್ತೇನೆ, ನಮ್ಮ ವಿರುದ್ಧ ಇಪ್ಪತ್ತು ಕೇಸ್ ಹಾಕಿದ್ದರು ನೆನಪಿದೆ ಅಲ್ಲವಾ? ಎಚ್ ಡಿ ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲ. ಎಚ್ಡಿಕೆ ಬಂದು ಏಕೆ ಕಲ್ಲುಗಣಿಗಾರಿಕೆ ನಡೆಸಿದರು ಎಂದು ಹೇಳುತ್ತೇನೆ ಎಚ್ ಡಿ ಕುಮಾರಸ್ವಾಮಿ ಬೆಳೆಯುವುದಲ್ಲ ಆಲೂಗಡ್ಡೆನಾ? ಎಂದು ಕಿಡಿ ಕಾರಿದರು.

ಕನಕಪುರಕ್ಕೆ ನೀವು ಬರಬೇಡಿ ಎಂದು ಡಿಕೆ ಕೇಳಿಕೊಂಡಿದ್ದರೆಂದು ಹೇಳಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಡಿಕೆ ಸುರೇಶ್ ಅಂತಹ ನೀಚ ರಾಜಕಾರಣ ಮಾಡುವುದಿಲ್ಲ.ಅಂತಹ ರಾಜಕೀಯ ನಮಗೆ ಬರುವುದಿಲ್ಲ. ಸುಳ್ಳು ಹೇಳೋದ್ರಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಡಾಕ್ಟರೇಟ್ ಕೊಡಬೇಕು. ಡಿಕೆ ಶಿವಕುಮಾರ್ ಗೆ ಅಂತಃ ಸ್ಥಿತಿ ಈ ಹಿಂದೆಯೂ ಬಂದಿಲ್ಲ.ಮುಂದೇನು ಬರುವುದಿಲ್ಲ ಗೌರವ ಕೊಡುತ್ತಿದ್ದೇವೆ ಎಂದು ಬೇರೆ ರೀತಿ ಬಿಂಬಿಸಿಕೊಳ್ಳುವುದು ಸರಿಯಲ್ಲ. ಚರ್ಚೆಗೆ ಸಿದ್ದರಿದ್ದೇವೆ ಚುನಾವಣೆ ನಂತರ ಚರ್ಚೆಗೆ ಬರುತ್ತೇವೆ ಎಂದು ಸವಾಲು ಹಾಕಿದರು.

ಚುನಾವಣೆ ಬಳಿಕ ಗ್ಯಾರಂಟಿ ರದ್ದು ಮಾಡುತ್ತಾರೆಂದು ಹೇಳಿಕೆ ವಿಚಾರವಾಗಿ ಕರ್ನಾಟಕ ಗ್ಯಾರಂಟಿ ಯಿಂದ ಬಿಜೆಪಿಯವರಿಗೆ ಭಯ ಬಂದಿದೆ. ಮೋದಿ ಗ್ಯಾರಂಟಿ ಬೆಲೆ ಏರಿಕೆ ತಡೆಯೋದಕ್ಕ? ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡುತ್ತೇವೆ ಅಂದಿದ್ದಾರಾ? ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದಾರಾ? ಬಿಜೆಪಿಯವರು ಯಾವ ಗ್ಯಾರಂಟಿಯನ್ನು ಈ ದೇಶದ ಜನರಿಗೆ ಕೊಟ್ಟಿದ್ರು? ಮನೆಬಾಗಿಲಿಗೆ ನಮ್ಮ ಗ್ಯಾರಂಟಿ ತಲುಪಿದೆ ಎಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದುರುನಲ್ಲಿ ಡಿಕೆ ಸುರೇಶ್ ಹೇಳಿಕೆ ನೀಡಿದರು.

Share.
Exit mobile version