ಬೆಂಗಳೂರು: ರಾತ್ರಿ ಟೈಮ್ನಲ್ಲಿ ನೀವು ಕಾರು, ಇಲ್ಲ ಬೈಕ್ನಲ್ಲಿ ಪ್ರಯಾಣ ಮಾಡುತ್ತೀದ್ದೀರಾ? ಹಾಗಾದ್ರೇ ನೀವು ಮಿಸ್ ಮಾಡದೇ ಸುದ್ದಿಯನ್ನು ಓದಲೇ ಬೇಕು. ಹೌದು, ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರಿಗೆ ಏಕಾಏಕಿ ರಾಂಗ್ವೇ ಬಂದು ಡಿಕ್ಕಿ ಹೊಡೆದು ಕೊನೆಗೆ ಅವರನ್ನು ಹಿಂಬಾಲಿಸಿ ಭಯದ ವಾತವರಣವನ್ನು ನಿರ್ಮಾಣ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿಟಿಜನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ಪೇಜ್ ಎನ್ನುವ ಟ್ವಿಟರ್ ಪೇಜ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಭಾನುವಾರ ಬೆಳಗ್ಗೆ 3ಗಂಟೆ ಹೊತ್ತಿಗೆ ಸರ್ಜಾಪುರ ರಸ್ತೆಯಲ್ಲಿ ದಂಪತಿಗಳು ಹೋಗುತ್ತಿದ್ದ ಸಮಯದಲ್ಲಿ ಎದುರು ಬಂದ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಇದಲ್ಲದೇ. ಕಾರಿನಲ್ಲಿ ಇದ್ದವರಿಗೆ ಬಲವಂತವಾಗಿ ಕೆಳಗೆ ಇಳಿಯುವಂತೆ ಕೂಡ ಧಮ್ಕಿ ಹಾಕಿದ್ದು, ದಂಪತಿಗಳು ಕಾರನ್ನು ರಿವರ್ಸ್ ನಲ್ಲಿ ಸರಿ ಸುಮಾರು ಐದು ಕಿಮಿ ತನಕ ಹಿಂಬಾಲಿಸಿಕೊಂಡು ಬಂದಿದ್ದಾರೆ. ಸರ್ಜಾಪುರ ರಸ್ತೆಯ ಸೋಫಾಸ್ ಮತ್ತು ಮೋರ್ ಬಳಿ ಈ ಭಯಾನಕ ಘಟನೆ ನಡೆದಿದ್ದು, ದಂಪತಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಟ್ವಿಟ್ನಲ್ಲಿ ಪೂರ್ವ ಸಂಚಾರಿ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಕೂಡಲೇ ತನಿಖೆ ಕೈಗೊಂಡಿದ್ದು, ಆರೋಪಿಗಳ ವಿರುದ್ದ ಕಾನುನು ಕ್ರಮ ಜರುಗುಗಿಸಲಾಗುವುದು ಅಂತ ತಿಳಿಸಿದ್ದಾರೆ.
Horrific incident reported on Sarjapur road near Sofas & More around 3 am today. Miscreant riders collided purposefully to a couple traveling in car. They chased the car for 5km till their society in Chikkanayakanahalli. Don't open your car in night. Use dash cam. @BlrCityPolice. pic.twitter.com/4QVYtBZ67B
— Citizens Movement, East Bengaluru (@east_bengaluru) January 29, 2023