ನೈನಿತಾಲ್: ಕಳೆದ 36 ಗಂಟೆಗಳಿಗೂ ಹೆಚ್ಚು ಕಾಲ ಕಾಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ನೈನಿತಾಲ್ ಅರಣ್ಯ ಇಲಾಖೆ ಹೇಳಿದೆ. ಇದೇ ವೇಳೇ ಪರಿಸ್ಥಿತಿ ಭೀಕರವಾಗುತ್ತಿದ್ದಂತೆ, ಜಿಲ್ಲಾಡಳಿತವು ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯ ಬೆಂಬಲವನ್ನು ಪಡೆದುಕೊಂಡಿದೆ, ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ. 

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬಿಕ್ಕಟ್ಟಿಗೆ ಸ್ಪಂದಿಸಿದ್ದು, ರಾಜ್ಯದ ಹಲ್ದ್ವಾನಿ ಜಿಲ್ಲೆಯ ನೈನಿತಾಲ್ ಕಾಡಿನ ಬೆಂಕಿಯನ್ನು ಪರಿಹರಿಸಲು ಸಭೆ ಮಾಡಲಾಗುವುದು ಅಂಥ ತಿಳಿಸಿದ್ದಾರೆ.

 

 

Share.
Exit mobile version