ವರದಿ: ರಾಮಸಮುದ್ರ ಎಸ್ .ವೀರಭದ್ರಸ್ವಾಮಿ

ಚಾಮರಾಜನಗರ: ಚಾಮರಾಜನಗರ: ಮತಗಟ್ಟೆಗೆ ಮೊಬೈಲ್ ನಿಷೇದವಿದ್ದರೂ ಕಿಡಿಗೇಡಿಗಳ ಕೃತ್ಯ ಮಾತ್ರ ಮೊಬೈಲ್ ಅಲ್ಲಿ ಸೆರೆಯಾಗುವುದು ನಿಲ್ಲುತ್ತಿಲ್ಲ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರೊ ವಿಡಿಯೊಗಳೆ ಸಾಕ್ಷಿಯಾಗಿದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆಗೆ ಹೋದ ಮತದಾರ ಮತ ಚಲಾವಣೆ ಮಾಡಿಸುವ ಚಿತ್ರಣವನ್ನ ಬಹುಶಃ ಸಹಾಯಕರಾಗಿ ಇರೊ ವ್ಯಕ್ತಿಗಳು ವಿಡಿಯೊ ರೆಕಾರ್ಡ್ ಮಾಡಿ ವೈರಲ್ ಮಾಡಿ ಬಿಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ.. ಮುಂಜಾನೆಯೆ ಮೊಬೈಲ್ ನಿಷೇದ ಬಗ್ಗೆ ಕನ್ನಡದ ನ್ಯೂಸ್ ನೌ ಸುದ್ದಿ ಪ್ರಕಟ ಮಾಡಿದ್ದರೂ ಅದಿಕಾರಿಗಳ ನಿರ್ಲಕ್ಷ್ಯತನದಿಂದ ಈ ಕೃತ್ಯ ನಡೆದಿದೆ.. ಒಟ್ಟಾರೆ ಸೂಕ್ತ ವ್ಯವಸ್ಥೆ ಮಾಡದ ಜಿಲ್ಲಾಡಳಿತ ಕೃತ್ಯದಿಂದ ಇಂತ ಘಟನೆಗಳು ಮತ್ತೆ ಮತ್ತೆ ಮರುಕಳಿಸದೆ ಇರಲಾರದು ಎಂದರೆ ತಪ್ಪಾಗಲಾರದು

Share.
Exit mobile version