ನವದೆಹಲಿ : ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಮಾಜಿ ಡ್ರಿಲ್ ಬೋಧಕ ಸಬ್ ಮೇಜರ್ ಸ್ವಾಮಿ ಅವರ 100ನೇ ಜನ್ಮದಿನದಂದು ಅವ್ರನ್ನ ಗೌರವಿಸಲಾಯಿತು. ಈ ವೇಳೆ ಮೇಜರ್ ಸ್ವಾಮಿ ಗಾಲಿಕುರ್ಚಿಯಿಂದ ಎದ್ದು ಸೇನೆಗೆ ನಮನ ಸಲ್ಲಿಸಿದರು. ಮಾಜಿ ಸೇನಾಧಿಕಾರಿಯೊಬ್ಬರು ಸೆಲ್ಯೂಟ್ ಮಾಡಿದ ದೃಶ್ಯ ಹೊರಬಿದ್ದಿದೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಕೂಡ ಇದನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪ್ರೇರಣೆ ಎಂದು ಕರೆದಿದ್ದಾರೆ.
ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ನಲ್ಲಿ ವೀಡಿಯೊವನ್ನ ಪೋಸ್ಟ್ ಮಾಡಿದ್ದಾರೆ “ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಮಾಜಿ ಡ್ರಿಲ್ ಬೋಧಕ, ಸಬ್ ಮೇಜರ್ ಸ್ವಾಮಿ ಅವ್ರ 100ನೇ ಜನ್ಮದಿನದಂದು ಗೌರವಿಸಲಾಗಿದೆ. ಅವ್ರು 7 ಭಾರತೀಯ ಸೇನಾ ಜನರಲ್ಗಳಿಗೆ ಬೋಧನೆ ಮಾಡಿದ್ದು, ತಮ್ಮ ಗುರುಗಳನ್ನ ಗೌರವಿಸುವ ಭಾರತೀಯ ಸಂಪ್ರದಾಯದ ಬಗ್ಗೆಯೂ ಹೇಳಿದರು.
ದೇಶಪ್ರೇಮದ ಸ್ಪೂರ್ತಿಗೆ ಜನರು ನಮನ ಸಲ್ಲಿಕೆ
ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.ಇದು 3 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.ಈ ವಿಡಿಯೋಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.ಇದರೊಂದಿಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೆಲ್ಲರೂ ಮೇಜರ್ ಸ್ವಾಮಿಯ ಆತ್ಮಕ್ಕೆ ನಮಸ್ಕರಿಸುತ್ತಾರೆ. ಇದರೊಂದಿಗೆ ಅವರಿಂದಲೇ ದೇಶಭಕ್ತಿಯ ಪ್ರೇರಣೆಯನ್ನೂ ಪಡೆಯುವುದಾಗಿ ಹೇಳಲಾಗುತ್ತಿದೆ.
ಇಂದು ಭಾರತೀಯ ಸೇನೆಗೆ ವಿಶೇಷ ದಿನ
ಭಾರತೀಯ ಸೇನೆಗೆ ಇಂದು ಬಹಳ ವಿಶೇಷವಾದ ದಿನ ಎಂದು ತಿಳಿಯಬೇಕು. ಭಾರತೀಯ ವಾಯುಪಡೆಯು ಸೋಮವಾರ ಔಪಚಾರಿಕವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ (LCH)ನ್ನ ಪರಿಚಯಿಸಿತು. ಇದು ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದ್ದು, ಈ ಹೆಲಿಕಾಪ್ಟರ್ ವಿವಿಧ ಕ್ಷಿಪಣಿಗಳನ್ನ ಹಾರಿಸುವ ಮತ್ತು ಶಸ್ತ್ರಾಸ್ತ್ರಗಳನ್ನ ಬಳಸುವ ಸಾಮರ್ಥ್ಯವನ್ನ ಹೊಂದಿದೆ.
“Sub Major Swamy, ex Drill Instructor of the National Defence Academy being felicitated on his 100th birthday. He Instructed 7 Indian Army Generals” Army as well as Indian tradition of enduring respect for our Gurus. I had goosebumps when he saluted.This is my #MondayMotivation pic.twitter.com/Oa6gLkjjNR
— anand mahindra (@anandmahindra) October 3, 2022