ನವದೆಹಲಿ: ಪೊಲೀಸ್ ಪೇದೆಯೊಬ್ಬರು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಹಿಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
BIGG NEWS: ವೈಷ್ಣವಿ ಗೌಡ- ವಿಧ್ಯಾಭರಣ್ ನಿಶ್ಚಿತಾರ್ಥ ವಿವಾದ; ಪೊಲೀಸ್ ಆಯುಕ್ತರಿಗೆ ದೂರು
ಈ ಘಟನೆಯ ವೀಡಿಯೋವನ್ನು ದೆಹಲಿ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪ್ರಾಣವನ್ನು ಲೆಕ್ಕಿಸದೇ, ಶಹಬಾದ್ ಡೈರಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಸತ್ಯೇಂದ್ರ ಕಳ್ಳನನ್ನು ಹಿಡಿದು ಬಂಧಿಸಿದ್ದಾರೆ. ಈ ಕಳ್ಳನ ಬಂಧನದೊಂದಿಗೆ 11 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
अपनी जान की परवाह किए बगैर शाहबाद डेरी थाने के कांस्टेबल सत्येंद्र ने एक स्नैचर को गिरफ्तार किया।
इस स्नैचर की गिरफ्तारी से 11 मामले सुलझाए गए।
विधिक कार्यवाही जारी है।@dcp_outernorth#HeroesOfDelhiPolice pic.twitter.com/PceBbYpdYQ— Delhi Police (@DelhiPolice) November 24, 2022
ಕಾನ್ಸ್ಟೆಬಲ್ನ ಕೆಚ್ಚೆದೆಯ ಕಾರ್ಯದಿಂದ ಕಳ್ಳತನವಾಗುತ್ತಿದ್ದ ಮಹಿಳೆಯ ನೆಕ್ಲೇಸ್ ಉಳಿದಿದೆ. ಈ ಹಿಂದೆ ಶಹಾಬಾದ್ ಡೈರಿ ಪೊಲೀಸ್ ಠಾಣೆಯವರು ಸರಗಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಕಳ್ಳನನ್ನು ಪತ್ತೆ ಹಚ್ಚಲು ಕಾನ್ಸ್ಟೆಬಲ್ ಸತ್ಯೇಂದ್ರ ತೆರಳಿದ್ದರು .ವೀಡಿಯೋದಲ್ಲಿ ಕ್ರಿಮಿನಲ್ ಒಂದು ಕಡೆಯಿಂದ ಬರುತ್ತಿದ್ದಂತೆಯೇ ಕಾನ್ಸ್ಟೆಬಲ್ ತನ್ನ ಬೈಕನ್ನು ನಿಧಾನಗೊಳಿಸುತ್ತಾರೆ. ಪೊಲೀಸ್ ಅನ್ನು ಕಂಡ ಆರೋಪಿ ಗಾಬರಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾನೆ.
BIGG NEWS: ವೈಷ್ಣವಿ ಗೌಡ- ವಿಧ್ಯಾಭರಣ್ ನಿಶ್ಚಿತಾರ್ಥ ವಿವಾದ; ಪೊಲೀಸ್ ಆಯುಕ್ತರಿಗೆ ದೂರು
ಆದರೆ ತಕ್ಷಣವೇ ಸತ್ಯೇಂದ್ರ ಅವರು ಆತನನ್ನು ಬಿಗಿಯಾಗಿ ಹಿಡಿದು, ತಪ್ಪಿಸಿಕೊಳ್ಳದಂತೆ ತಡೆಯುವುದನ್ನು ಕಾಣಬಹುದಾಗಿದೆ. ಇನ್ನೂ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅದ್ಭುತ, ಸೂಪರ್ ಎಂದು ಕಾನ್ಸ್ಟೆಬಲ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.